ಪೋರ್ನ್ ತಡೆಗೆ ಕೈಜೋಡಿಸಿದ ಸಾಮಾಜಿಕ ತಾಣಗಳು
ನ್ಯೂಯಾರ್ಕ್, ಆಗಸ್ಟ್. 12: ಭಾರತದಲ್ಲಿ ಪೋರ್ನ್ ವೆಬ್ ತಾಣಗಳಿಗೆ ನಿಷೇಧ ಹೇರಿ ನಂತರ ಕೆಲ ನಿಯಮಗಳನ್ನು ಹೇರಿ ಮುಕ್ತ ಮಾಡಿರುವ ಸುದ್ದಿ ಹಳತಾಗಿಲ್ಲ. ಇದೀಗ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಗೂಗಲ್,ಮೈಕ್ರೋಸಾಫ್ಟ್, ಯಾಹೂ ಮತ್ತು ಟ್ವಿಟ್ಟರ್ ಸಹ ಪೋರ್ನ್ ತಡೆಗೆ ಕೈಜೋಡಿಸಿವೆ.
ಇಂಗ್ಲೆಂಡ್ ನ ಇಂಟರ್ ನೆಟ್ ವಾಚ್ ಫೌಂಡೇಶನ್ (ಐಡ್ಬ್ಲೂಎಫ್) ಸಹಕಾರದಲ್ಲಿ ಮಕ್ಕಳ ಕುರಿತಾದ ಅಶ್ಲೀಲ ಚಿತ್ರ ತಡೆಗೆ ಮುಂದಾಗಿದೆ.

ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಇಲ್ಲಿ ಡಿಜಿಟಲ್ ಫಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗುತ್ತದೆ. ಯಾರೇ ಆದರೂ ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡಿ ಟ್ಯಾಗ್ ಮಾಡಲು ಮುಂದಾದರೆ ತಕ್ಷಣ ವರದಿ ನೀಡುತ್ತದೆ.[ರಿವೇಂಜ್ ಪೋರ್ನ್' ವಿರುದ್ಧ ಮೈಕ್ರೋಸಾಫ್ಟ್ ಸಮರ]
ಟ್ಯಾಗ್ ಮಾಡಲು ಮುಂದಾದ ಚಿತ್ರವನ್ನು ನೋಂದಣಿ ಮಾಡಿಕೊಳ್ಳುವ ಐಡ್ಬ್ಲೂಎಫ್ ಎಲ್ಲ 5 ಕಂಪನಿಗಳಿಗೆ ಇದನ್ನು ಕಳಿಸಿ ಕೊಡುತ್ತದೆ. ಒಮ್ಮೆ ಈ ತಂತ್ರಜ್ಞಾನ ಅಳವಡಿಕೆಯಾಯಿತು ಅಂದರೆ ಅಪಲೋಡ್ ಮಾಡುವ ಪ್ರತಿ ಇಮೇಜ್ ಸಹ ಸ್ಕ್ಯಾನಿಂಗ್ ಗೆ ಒಳಪಡಬೇಕಾಗುತ್ತದೆ.
ಹೊಸ ಬೆಳವಣಿಗೆಗಳು ಮಕ್ಕಳ ಮೇಲಿನ ಶೋಷಣೆ ತಡೆಯುವುದರಲ್ಲಿ ನೆರವಾಗುವುದರಲ್ಲಿ ಅನುಮಾನವಿಲ್ಲ. ಹಿಂದೆ ರಿವೇಂಜ್ ಪೋರ್ನ್ ಬಗ್ಗೆ ಕಠಿಣ ನಿಲುವು ತಾಳಿದ್ದ ಮೈಕ್ರೋಸಾಫ್ಟ್ ಯಾವುದೇ ವ್ಯಕ್ತಿ ತನ್ನ ಮಾಜಿ ಅಥವಾ ಹಾಲಿ ಲವರ್ ಜೊತೆಗೆ ಕೂಡಿ ಕಳೆದ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗೆ ಸೇರಿಸುವುದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಸಾಗಿರುವ ಎಲ್ಲ ಪ್ರಮುಖ ಸಾಮಾಜಿಕ ಮತ್ತು ಅಂತರ್ಜಾಲ ತಾಣಗಳು ಮಕ್ಕಳ ಕುರಿತಾದ ಅಶ್ಲೀಲ ಚಿತ್ರ ಎಲ್ಲೂ ಹರಿದಾಡದಂತೆ ನೋಡಿಕೊಳ್ಳಲಿವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications