ಪಾಕಿಸ್ತಾನದಾದ್ಯಂತ ವಿದ್ಯುತ್ ಬವಣೆ, ರಾಜಧಾನಿಯಲ್ಲೂ ಕರೆಂಟಿಲ್ಲ
ಇಸ್ಲಾಮಾಬಾದ್, ಜನವರಿ 23: ಪಾಕಿಸ್ತಾನದಲ್ಲಿ ವಿದ್ಯುತ್ ಕೊರೆತ ಹೆಚ್ಚಾಗಿದ್ದು, ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ನಗರಗಳಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಪಾಕಿಸ್ತಾನದಲ್ಲಿ ತನ್ನ ರಾಷ್ಟ್ರೀಯ ಗ್ರಿಡ್ನಲ್ಲಿನ ಸ್ಥಗಿತದಿಂದಾಗಿ ಸೋಮವಾರ ಮುಂಜಾನೆ ದೇಶಾದ್ಯಂತ ವಿದ್ಯುತ್ ಕಡಿತವನ್ನು ಅನುಭವಿಸಿದೆ ಎಂದು ಫೆಡರಲ್ ಇಂಧನ ಸಚಿವಾಲಯ ತಿಳಿಸಿದೆ. ಹೀಗಾಗಿ ಕರಾಚಿ, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಬೆಳಿಗ್ಗೆ 7:34ಕ್ಕೆ (ಸ್ಥಳೀಯ ಕಾಲಮಾನ) ರಾಷ್ಟ್ರೀಯ ಗ್ರಿಡ್ ಆವರ್ತನದ ನಷ್ಟವನ್ನು ಅನುಭವಿಸಿತು. ಇದು ವಿದ್ಯುತ್ ದೊಡ್ಡ ಸ್ಥಗಿತಕ್ಕೆ ಕಾರಣವಾಯಿತು. ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ತ್ವರಿತ ಕೆಲಸ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಬೆಳಿಗ್ಗೆ ವಿದ್ಯುತ್ ಗ್ರಿಡ್ ಸಿಸ್ಟಮ್ಗಳನ್ನು ಆನ್ ಮಾಡಿದಾಗ ಜಮ್ಶೋರೊ ಮತ್ತು ದಾದು ನಗರಗಳ ನಡುವೆ ದೇಶದ ದಕ್ಷಿಣ ಭಾಗದಲ್ಲಿ ಆವರ್ತನ ಬದಲಾವಣೆಯಾಗಿರುವುದು ವರದಿಯಾಗಿದೆ. ವಿದ್ಯುತ್ ವೋಲ್ಟೇಜ್ನಲ್ಲಿ ಏರಿಳಿತ ಕಂಡುಬಂದಿದೆ ಮತ್ತು ಸಿಸ್ಟಮ್ಗಳು ಒಂದೊಂದಾಗಿ ಸ್ಥಗಿತಗೊಂಡಿವೆ. ಇದು ದೊಡ್ಡ ಬಿಕ್ಕಟ್ಟು ಅಲ್ಲ. ದೇಶದಲ್ಲಿ ಕೆಲವು ಗ್ರಿಡ್ಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ ಎಂದು ವಿದ್ಯುತ್ ಸಚಿವ ಖುರ್ರುಮ್ ದಸ್ತಗಿರ್ ಜಿಯೋ ಟಿವಿ ಚಾನೆಲ್ಗೆ ತಿಳಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲೂ ಪಾಕಿಸ್ತಾನದಲ್ಲಿ ಪ್ರಮುಖ ವಿದ್ಯುತ್ ಸಮಸ್ಯೆ ಉದ್ಭವಿಸಿತ್ತು. ಇದು ಪ್ರಾಂತೀಯ ರಾಜಧಾನಿಗಳಾದ ಕರಾಚಿ ಮತ್ತು ಲಾಹೋರ್ ಸೇರಿದಂತೆ ದೇಶದ ದೊಡ್ಡ ಪ್ರದೇಶಗಳನ್ನು 12 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪಾಕಿಸ್ತಾನವು ಈ ತಿಂಗಳು ಹೊಸ ಇಂಧನ ಸಂರಕ್ಷಣಾ ಯೋಜನೆಯನ್ನು ಘೋಷಿಸಿತು. ಪಾಕಿಸ್ತಾನವು ದುರ್ಬಲ ಆರ್ಥಿಕತೆಯು ದೇಶದ ವಿದೇಶಿ ವಿನಿಮಯ ಮೀಸಲುಗಳು ಆತಂಕಕಾರಿಯಾಗಿ ಕಡಿಮೆ ಮಟ್ಟಕ್ಕೆ ಕ್ಷೀಣಿಸಿರುವುದು ಸೇರಿದಂತೆ ಅನೇಕ ಸವಾಲುಗಳೊಂದಿಗೆ ಈಗ ಹೋರಾಡುತ್ತಿದೆ.
ಪಾಕ್ನ ಕ್ವೆಟ್ಟಾ ವಿದ್ಯುತ್ ಪೂರೈಕೆ ಕಂಪನಿ ತಿಳಿಸಿರುವಂತೆ ಗುಡ್ಡುವಿನಿಂದ ಕ್ವೆಟ್ಟಾಗೆ ಎರಡು ಟ್ರಾನ್ಸ್ಮಿಷನ್ ಮಾರ್ಗಗಳು ಕೈಕೊಟ್ವು ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನದ 22 ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಈ ನಡುವೆ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಹೊಂದಿರುವ ವಿದೇಶೀ ವಿನಿಮಯವು ಇತ್ತೀಚೆಗೆ 4.343 ಶತಕೋಟಿ ಡಾಲರ್ನಷ್ಟು ಕಡಿಮೆ ಮಟ್ಟವನ್ನು ತಲುಪಿರುವುದರಿಂದ ಪಾಕಿಸ್ತಾನದ ವಿದೇಶಿ ವಿನಿಮಯ ಬಿಕ್ಕಟ್ಟು ಹೆಚ್ಚಾಗಿದೆ ಎಂದು ಫೈನಾನ್ಶಿಯಲ್ ಪೋಸ್ಟ್ ವರದಿ ಮಾಡಿದೆ. ಎರಡು ಯುಎಇ ಮೂಲದ ಬ್ಯಾಂಕ್ಗಳಿಗೆ 1 ಬಿಲಿಯನ್ ಯುಎಸ್ಡಿ ವಾಣಿಜ್ಯ ಸಾಲ ಮರುಪಾವತಿಯಿಂದಾಗಿ ವಿದೇಶಿ ವಿನಿಮಯದಲ್ಲಿ ಕುಸಿತವಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications