ಪಾಕಿಸ್ತಾನದಾದ್ಯಂತ ವಿದ್ಯುತ್ ಬವಣೆ, ರಾಜಧಾನಿಯಲ್ಲೂ ಕರೆಂಟಿಲ್ಲ
ಇಸ್ಲಾಮಾಬಾದ್, ಜನವರಿ 23: ಪಾಕಿಸ್ತಾನದಲ್ಲಿ ವಿದ್ಯುತ್ ಕೊರೆತ ಹೆಚ್ಚಾಗಿದ್ದು, ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ನಗರಗಳಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ಪಾಕಿಸ್ತಾನದಲ್ಲಿ ತನ್ನ ರಾಷ್ಟ್ರೀಯ ಗ್ರಿಡ್ನಲ್ಲಿನ ಸ್ಥಗಿತದಿಂದಾಗಿ ಸೋಮವಾರ ಮುಂಜಾನೆ ದೇಶಾದ್ಯಂತ ವಿದ್ಯುತ್ ಕಡಿತವನ್ನು ಅನುಭವಿಸಿದೆ ಎಂದು ಫೆಡರಲ್ ಇಂಧನ ಸಚಿವಾಲಯ ತಿಳಿಸಿದೆ. ಹೀಗಾಗಿ ಕರಾಚಿ, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಬೆಳಿಗ್ಗೆ 7:34ಕ್ಕೆ (ಸ್ಥಳೀಯ ಕಾಲಮಾನ) ರಾಷ್ಟ್ರೀಯ ಗ್ರಿಡ್ ಆವರ್ತನದ ನಷ್ಟವನ್ನು ಅನುಭವಿಸಿತು. ಇದು ವಿದ್ಯುತ್ ದೊಡ್ಡ ಸ್ಥಗಿತಕ್ಕೆ ಕಾರಣವಾಯಿತು. ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ತ್ವರಿತ ಕೆಲಸ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ಬೆಳಿಗ್ಗೆ ವಿದ್ಯುತ್ ಗ್ರಿಡ್ ಸಿಸ್ಟಮ್ಗಳನ್ನು ಆನ್ ಮಾಡಿದಾಗ ಜಮ್ಶೋರೊ ಮತ್ತು ದಾದು ನಗರಗಳ ನಡುವೆ ದೇಶದ ದಕ್ಷಿಣ ಭಾಗದಲ್ಲಿ ಆವರ್ತನ ಬದಲಾವಣೆಯಾಗಿರುವುದು ವರದಿಯಾಗಿದೆ. ವಿದ್ಯುತ್ ವೋಲ್ಟೇಜ್ನಲ್ಲಿ ಏರಿಳಿತ ಕಂಡುಬಂದಿದೆ ಮತ್ತು ಸಿಸ್ಟಮ್ಗಳು ಒಂದೊಂದಾಗಿ ಸ್ಥಗಿತಗೊಂಡಿವೆ. ಇದು ದೊಡ್ಡ ಬಿಕ್ಕಟ್ಟು ಅಲ್ಲ. ದೇಶದಲ್ಲಿ ಕೆಲವು ಗ್ರಿಡ್ಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ ಎಂದು ವಿದ್ಯುತ್ ಸಚಿವ ಖುರ್ರುಮ್ ದಸ್ತಗಿರ್ ಜಿಯೋ ಟಿವಿ ಚಾನೆಲ್ಗೆ ತಿಳಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲೂ ಪಾಕಿಸ್ತಾನದಲ್ಲಿ ಪ್ರಮುಖ ವಿದ್ಯುತ್ ಸಮಸ್ಯೆ ಉದ್ಭವಿಸಿತ್ತು. ಇದು ಪ್ರಾಂತೀಯ ರಾಜಧಾನಿಗಳಾದ ಕರಾಚಿ ಮತ್ತು ಲಾಹೋರ್ ಸೇರಿದಂತೆ ದೇಶದ ದೊಡ್ಡ ಪ್ರದೇಶಗಳನ್ನು 12 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪಾಕಿಸ್ತಾನವು ಈ ತಿಂಗಳು ಹೊಸ ಇಂಧನ ಸಂರಕ್ಷಣಾ ಯೋಜನೆಯನ್ನು ಘೋಷಿಸಿತು. ಪಾಕಿಸ್ತಾನವು ದುರ್ಬಲ ಆರ್ಥಿಕತೆಯು ದೇಶದ ವಿದೇಶಿ ವಿನಿಮಯ ಮೀಸಲುಗಳು ಆತಂಕಕಾರಿಯಾಗಿ ಕಡಿಮೆ ಮಟ್ಟಕ್ಕೆ ಕ್ಷೀಣಿಸಿರುವುದು ಸೇರಿದಂತೆ ಅನೇಕ ಸವಾಲುಗಳೊಂದಿಗೆ ಈಗ ಹೋರಾಡುತ್ತಿದೆ.
ಪಾಕ್ನ ಕ್ವೆಟ್ಟಾ ವಿದ್ಯುತ್ ಪೂರೈಕೆ ಕಂಪನಿ ತಿಳಿಸಿರುವಂತೆ ಗುಡ್ಡುವಿನಿಂದ ಕ್ವೆಟ್ಟಾಗೆ ಎರಡು ಟ್ರಾನ್ಸ್ಮಿಷನ್ ಮಾರ್ಗಗಳು ಕೈಕೊಟ್ವು ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನದ 22 ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಈ ನಡುವೆ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಹೊಂದಿರುವ ವಿದೇಶೀ ವಿನಿಮಯವು ಇತ್ತೀಚೆಗೆ 4.343 ಶತಕೋಟಿ ಡಾಲರ್ನಷ್ಟು ಕಡಿಮೆ ಮಟ್ಟವನ್ನು ತಲುಪಿರುವುದರಿಂದ ಪಾಕಿಸ್ತಾನದ ವಿದೇಶಿ ವಿನಿಮಯ ಬಿಕ್ಕಟ್ಟು ಹೆಚ್ಚಾಗಿದೆ ಎಂದು ಫೈನಾನ್ಶಿಯಲ್ ಪೋಸ್ಟ್ ವರದಿ ಮಾಡಿದೆ. ಎರಡು ಯುಎಇ ಮೂಲದ ಬ್ಯಾಂಕ್ಗಳಿಗೆ 1 ಬಿಲಿಯನ್ ಯುಎಸ್ಡಿ ವಾಣಿಜ್ಯ ಸಾಲ ಮರುಪಾವತಿಯಿಂದಾಗಿ ವಿದೇಶಿ ವಿನಿಮಯದಲ್ಲಿ ಕುಸಿತವಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications