ಖಲಿಸ್ತಾನಿ ಗ್ಯಾಂಗ್ಗೆ ಬೆಂಬಲ ಆರೋಪ, ಗಾಯಕನಿಗೆ ಶಾಕ್ ಮೇಲೆ ಶಾಕ್!
ಕೆನಡಾ ಪ್ರಧಾನಿ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡಿದ ಬಳಿಕ ಎರಡು ದೇಶದ ಸಂಬಂಧ ಹಳಸಿದೆ. ಅದರಲ್ಲೂ ಭಾರತದಿಂದ ಕೆನಡಾ ಅಧಿಕಾರಿಗಳನ್ನು & ಕೆನಡಾದಿಂದ ಭಾರತದ ಅಧಿಕಾರಿಗಳನ್ನು ಪರಸ್ಪರ ಉಚ್ಛಾಟನೆ ಮಾಡಲಾಗಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವಾಗ, ಖಲಿಸ್ತಾನಿಗಳಿಗೆ ಬೆಂಬಲ ನೀಡಿದ್ದ ಆರೋಪ ಹಿನ್ನೆಲೆ ಕೆನಡಾ ಮೂಲದ ಪಂಜಾಬಿ ಗಾಯಕನಿಗೂ ಶಾಕ್ ಕೊಟ್ಟಿದ್ದಾರೆ ಭಾರತೀಯರು.
ಅಷ್ಟಕ್ಕೂ ಭಾರತದ ವಿವಾದಾತ್ಮಕ ನಕ್ಷೆಯನ್ನು ಕೆನಡಾ ಮೂಲದ ಪಂಜಾಬಿ ಗಾಯಕ ಶುಭ್ ಶೇರ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಮ್ಯಾಪ್ನಲ್ಲಿ ಜಮ್ಮು & ಕಾಶ್ಮೀರ ಸೇರಿ ಈಶಾನ್ಯ ರಾಜ್ಯಗಳು ಇರಲಿಲ್ಲ. ಹಾಗೇ ಪಂಜಾಬ್ ರಾಜ್ಯ ಭೂಭಾಗ ಕೂಡ ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದ್ದ ಮ್ಯಾಪ್ ಅನ್ನ ಸಿಂಗರ್ ಶುಭ್ ಶೇರ್ ಮಾಡಿದ್ದರು ಎನ್ನಲಾಗಿದೆ. ಪಂಜಾಬಿ ಗಾಯಕ ಶುಭನೀತ್ ಸಿಂಗ್ ಅಲಿಯಾಸ್ ಶುಭ್ ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೆಲಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಹೀಗೆ ಮಾಡಿದ್ದ ತಪ್ಪಿಗೆ ಶುಭ್ಗೆ ಶಾಕ್ ಸಿಕ್ಕಿದೆ. ಭಾರತದ ಪ್ರವಾಸವನ್ನೇ ರದ್ದು ಮಾಡಿ ಓಡಿ ಹೋಗುವ ಪರಿಸ್ಥಿತಿ ಬಂದಿದೆ.

ಕಾರ್ಯಕ್ರಮ ಕೂಡ ಕ್ಯಾನ್ಸಲ್
ಕೆನಡಾದಲ್ಲಿ ಪಂಜಾಬಿ ಗಾಯನದ ಮೂಲಕ ಹೆಸರು ಮಾಡಿದ್ದ ಸಿಂಗರ್ ಶುಭನೀತ್ ಸಿಂಗ್ ಭಾರತದಲ್ಲಿ ಷೋ ಮಾಡಲು ಸಿದ್ಧವಾಗಿದ್ದ. ಆದರೆ ಭಾರತೀಯರು ಶುಭ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿ ವಿರೋಧ ವ್ಯಕ್ತಪಡಿಸಿದ್ದರು. ಶುಭನೀತ್ ಸಿಂಗ್ ಖಾಲಿಸ್ತಾನಿ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್ ಮೈ ಷೋ ವಿರುದ್ಧವೇ ಗರಂ ಆಗಿದ್ದರು. ಇದೀಗ ಖುದ್ದು ಬುಕ್ ಮೈ ಷೋ ಕೂಡ ಶುಭ್ಗೆ ಶಾಕ್ ಕೊಟ್ಟಿದೆ.
Singer Shubhneet Singh’s Still Rollin Tour for India stands cancelled. To that end, BookMyShow has initiated a complete refund of the ticket amount for all consumers who had purchased tickets for the show. The refund will be reflected within 7-10 working days in the customer's…
— BookMyShow (@bookmyshow) September 20, 2023
ಖಲಿಸ್ತಾನಿ ಪರ ಮಾತನಾಡಿದ್ದಕ್ಕೆ ಶಾಕ್!
ಬಾಯ್ಕಾಟ್ ಕೂಗು ಬೆನ್ನಲ್ಲೇ ಶುಭ್ ಕಾರ್ಯಕ್ರಮ ಕ್ಯಾನ್ಸಲ್ ಮಾಡಿರುವ 'ಬುಕ್ ಮೈ ಷೋ', 7-10 ದಿನಗಳಲ್ಲಿ ಟಿಕೆಟ್ ಮೊತ್ತ ಸಂಪೂರ್ಣ ಮರುಪಾವತಿ ಮಾಡುವುದಾಗಿ ತಿಳಿಸಿದೆ. ಹೀಗೆ ಭಾರತೀಯರು ಖಲಿಸ್ತಾನಿ ಬೆಂಬಲಿಗರ ವಿರುದ್ಧ ತಿರುಗಿಬಿದ್ದಿದ್ದು ಗಾಯಕ ಶುಭನೀತ್ ಸಿಂಗ್ ಕೂಡ ಭಾರತದ ಪ್ರವಾಸ ರದ್ದು ಮಾಡಿದ್ದಾರೆ. ಭಾರತೀಯರ ಕೋಪ ಅರ್ಥಮಾಡಿಕೊಂಡ 'ಬುಕ್ ಮೈ ಷೋ' ಕೂಡ ಶುಭನೀತ್ ಸಿಂಗ್ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದೆ.
ಒಟ್ನಲ್ಲಿ ಕೆನಡಾ ಪ್ರಧಾನಿ ಟ್ರುಡೋ ಮಾತಿನಿಂದ ಭಾರತ ಮತ್ತು ಕೆನಡಾ ಸಂಬಂಧಕ್ಕೀಗ ಕಿಚ್ಚು ಹೊತ್ತಿಕೊಂಡಿದೆ. ಎರಡೂ ಕಡೆ ಕಿತ್ತಾಟವೂ ನಡೆಯುತ್ತಿದೆ. ಅದರಲ್ಲೂ ಖಲಿಸ್ತಾನಿ ಪರ ಧ್ವನಿ ಎತ್ತಿರುವ ಖಲಿಸ್ತಾನಿ ಬೆಂಬಲಿಗರ ವಿರುದ್ಧ ಭಾರತೀಯರು ತೀವ್ರ ಆಕ್ರೋಶವನ್ನ ಕೂಡ ಹೊರಹಾಕುತ್ತಿದ್ದಾರೆ. ಹೀಗಾಗಿ ಈ ಕಿತ್ತಾಟ ಮತ್ತಷ್ಟು ದೊಡ್ಡ ಹಂತಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications