ತೈವಾನ್ ಯುವಕನ ದಂತದಲ್ಲಿ ಕಂಡುಬಂದಿದ್ದೇನು?
ತೈಪೆ, ಜೂ. 30: ಹಲ್ಲು ನೋವು ಯಾಕೆ ಬರುತ್ತದೆ? ಸರಳ ಉತ್ತರ ಹೇಳುವುದು ಕಷ್ಟ. ಹಲ್ಲಿನಲ್ಲಿ ಹುಳುಕು ಬಿದ್ದರೆಂತೂ ಯಮಯಾತನೆ ಅನುಭವಿಸಿದವರಿಗೆ ಅದರ ಸಂಕಷ್ಟ ಗೊತ್ತು. ಶೆ. 95 ರಷ್ಟು ಜನ ಜೀವನದಲ್ಲಿ ಒಮ್ಮೆಯಾದರೂ ದಂತ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತವೆ.
ಹಲ್ಲು ನೋವು ತಾಳಲಾರದೇ ರೋಗಿಯೊಬ್ಬ ದಂತ ವೈದ್ಯರ ಬಳಿ ಬರುತ್ತಾನೆ. ಆತನ ದವಡೆಯನ್ನು ಪರೀಕ್ಷಿಸದಾಗ ವೈದ್ಯ ನಿಜಕ್ಕೂ ದಿಗಿಲು ಬೀಳುತ್ತಾನೆ. ಕೆಟ್ಟು ಹೋಗಿದ್ದ ದವಡೆಯ ಹಲ್ಲಿನ ಒಳಗೆ ಸೀಬೆ ಹಣ್ಣಿನ ಮೊಳಕೆಯೊಂದು ಒಡೆದಿದ್ದು ಅಲ್ಲೇ ಸಸ್ಯವಾಗಿ ಬೆಳೆಯಲು ತಯಾರಿ ನಡೆಸಿದ್ದು ಕಂಡುಬರುತ್ತದೆ.[ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಸಿಲುಕಿದ ಮಗುವಿನ ಕತೆ]

ಇದು ನಡೆದಿದ್ದು ತೈಪೆಯಲ್ಲಿ. ಮೇಲಿನ ದವಡೆಯ ಬುದ್ಧಿ ಹಲ್ಲಿನ ಒಳಗಡೆ ಸೀಬೆ ಬೀಜ ಮೊಳಕೆ ಒಡೆದಿತ್ತು. ಕೆಳಗಿನ ದವಡೆಯಲ್ಲಿ ಬುದ್ಧಿ ಹಲ್ಲು ಇಲ್ಲವಾದ್ದರಿಂದ ಸೀಬೆ ಬೀಜ ಹುಲುಸಾಗಿ ಮೊಳಕೆ ಒಡೆಯಲು ಸಾಧ್ಯವಾಯಿತು ಎಂದು ದಂತ ವೈದ್ಯರು ತಿಳಿಸಿದ್ದಾರೆ.
2011 ರಲ್ಲೇ ನಡೆದ ಪ್ರಕರಣ ಇದೀಗ ಮಾಧ್ಯಮಗಳ ಗಮನಕ್ಕೆ ಬಂದಿದೆ. ಮೊಳಕೆಯನ್ನು ಗಮನಿಸಿದ ವೈದ್ಯರು ತಮ್ಮ ಸಹೋದ್ಯೋಗಿಗಳನ್ನು ಕರೆದು ತೋರಿಸುತ್ತಾರೆ, ಇದರಿಂದ ಅವಮಾನಕ್ಕೆ ಸಿಕ್ಕಂತಾದ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹಲ್ಲಿನ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಹ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು 85 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications