ಕೊರೊನಾ ವೈರಸ್ ಬರುತ್ತದೆಂದು 40 ವರ್ಷದ ಹಿಂದೆಯೇ ಬರೆದಿದ್ದ ಲೇಖಕ!
ಬೀಜಿಂಗ್, ಫೆಬ್ರವರಿ 17: ಕೊರೊನಾ ವೈರಸ್ ನಿಂದಾಗಿ ಸುಮಾರು 2000 ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಚೀನಾ ದೇಶದ ವುಹಾನ್ ನಗರದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಈ ಪ್ರಾಣಘಾತುಕ ವೈರಸ್ ನಿಧಾನವಾಗಿ ಕದಂಬಬಾಹುಗಳನ್ನು ವಿಶ್ವಕ್ಕೆ ಚಾಚುತ್ತಿದೆ.
ವೈರಸ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದೇ ವೈರಸ್ ಅನ್ನು ಕೊಲ್ಲಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಚೀನಾ ಸರ್ಕಾರ ಸಹ ವೈರಸ್ ಬಗ್ಗೆ ಆರಂಭಿಕವಾಗಿ ಮಾಹಿತಿ ಹೊರಗೆಡವಿರಲಿಲ್ಲ ಎಂಬುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಹೀಗೊಂದು ವೈರಸ್ ಬರುತ್ತದೆ ಎಂದು 40 ವರ್ಷದ ಹಿಂದೆಯೇ ಲೇಖಕರೊಬ್ಬರು ಭವಿಷ್ಯ ನುಡಿದಿದ್ದರು. ಹಾಗೂ ಅದನ್ನು ತಮ್ಮ ಪುಸ್ತಕದಲ್ಲಿ ನಮೂದಿಸಿದ್ದರು.
ಹೌದು, 1981 ರಲ್ಲಿ ಬಿಡುಗಡೆ ಆದ 'ದಿ ಐಸ್ ಆಫ್ ಡಾರ್ಕ್ನೆಸ್' ಎಂಬ ಪುಸ್ತಕದಲ್ಲಿ ಕೊರೊನಾ ವೈರಸ್ ಬಗ್ಗೆ ಉಲ್ಲೇಖವಿದೆ. ವುಹಾನ್ನಲ್ಲಿ ಮೊದಲಿಗೆ ಕಂಡು ಬಂದ ಈ ವೈರಸ್ ಅನ್ನು 'ದಿ ಐಸ್ ಆಫ್ ಡಾರ್ಕ್ನೆಸ್' ಪುಸ್ತಕದಲ್ಲಿ 'ವುಹಾನ್ 400' ಎಂಬ ಹೆಸರಿನಲ್ಲಿ ಕರೆಯಲಾಗಿದೆ.

'ದಿ ಐಸ್ ಆಫ್ ಡಾರ್ಕ್ನೆಸ್' ಕಾದಂಬರಿ
ಡಿಯಾನ್ ಕೂನ್ಟ್ಜ್ ಎಂಬ ಲೇಖಕರು 'ದಿ ಐಸ್ ಆಫ್ ಡಾರ್ಕ್ನೆಸ್' ಪುಸ್ತಕವನ್ನು ಬರೆದಿದ್ದು, ಕತೆಯಲ್ಲಿ 'ವುಹಾನ್ 400' ಎಂಬ ವೈರಸ್ ಅನ್ನು ಶಸ್ತ್ರವಾಗಿ ಲ್ಯಾಬ್ ನಲ್ಲಿ ತಯಾರಿಸಲಾಗುತ್ತದೆ.

ವೈರಸ್ ಬಗ್ಗೆ ಬರೆದಿರುವ ಸಾಲುಗಳ ಚಿತ್ರ
ಪುಸ್ತಕದಲ್ಲಿ ಅವರು ಬರೆದಿರುವ ಸಾಲುಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕದಲ್ಲಿ ವೈರಸ್ ಬಗ್ಗೆ ವಿವರಗಳು ಇರುವ ಪೇಜ್ಗಳ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಯೋಗಾಲಯದಲ್ಲಿ ತಯಾರಾಯಿತಾ ವೈರಸ್?
ಕೊರೊನಾ ವೈರಸ್ ಅನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ ಎಂಬ ಗಾಳಿ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಈಗ ಈ ಕಾದಂಬರಿ ಸಹ ದೊರೆತಿದೆ. ಆದರೆ ವದಂತಿಗಳನ್ನು ಚೀನಾ ಕಮ್ಯುನಿಸ್ಟ್ ಸರ್ಕಾರ ತಳ್ಳಿ ಹಾಕಿದೆ.

ಅಧಿಕೃತ ಲೆಕ್ಕದಂತೆ 1765 ಸಾವು
ಕೊರೊನಾವೈರಸ್ ನಿಂದ ಈವರೆಗೆ 1765 ಮಂದಿ ಅಸುನೀಗಿದ್ದಾರೆಂದು ಅಧಿಕೃತ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ ಮೃತರ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವೈರಸ್ ಮೊದಲಿಗೆ ಕಾಣಿಸಿಕೊಂಡ ವುಹಾನ್ ನಗರಕ್ಕೆ ದಿಗ್ಬಂಧನ ವಿಧಿಸಲಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications