ಕೊರೊನಾ ವೈರಸ್ ಬರುತ್ತದೆಂದು 40 ವರ್ಷದ ಹಿಂದೆಯೇ ಬರೆದಿದ್ದ ಲೇಖಕ!
ಬೀಜಿಂಗ್, ಫೆಬ್ರವರಿ 17: ಕೊರೊನಾ ವೈರಸ್ ನಿಂದಾಗಿ ಸುಮಾರು 2000 ಮಂದಿ ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಚೀನಾ ದೇಶದ ವುಹಾನ್ ನಗರದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಈ ಪ್ರಾಣಘಾತುಕ ವೈರಸ್ ನಿಧಾನವಾಗಿ ಕದಂಬಬಾಹುಗಳನ್ನು ವಿಶ್ವಕ್ಕೆ ಚಾಚುತ್ತಿದೆ.
ವೈರಸ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದೇ ವೈರಸ್ ಅನ್ನು ಕೊಲ್ಲಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಚೀನಾ ಸರ್ಕಾರ ಸಹ ವೈರಸ್ ಬಗ್ಗೆ ಆರಂಭಿಕವಾಗಿ ಮಾಹಿತಿ ಹೊರಗೆಡವಿರಲಿಲ್ಲ ಎಂಬುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಹೀಗೊಂದು ವೈರಸ್ ಬರುತ್ತದೆ ಎಂದು 40 ವರ್ಷದ ಹಿಂದೆಯೇ ಲೇಖಕರೊಬ್ಬರು ಭವಿಷ್ಯ ನುಡಿದಿದ್ದರು. ಹಾಗೂ ಅದನ್ನು ತಮ್ಮ ಪುಸ್ತಕದಲ್ಲಿ ನಮೂದಿಸಿದ್ದರು.
ಹೌದು, 1981 ರಲ್ಲಿ ಬಿಡುಗಡೆ ಆದ 'ದಿ ಐಸ್ ಆಫ್ ಡಾರ್ಕ್ನೆಸ್' ಎಂಬ ಪುಸ್ತಕದಲ್ಲಿ ಕೊರೊನಾ ವೈರಸ್ ಬಗ್ಗೆ ಉಲ್ಲೇಖವಿದೆ. ವುಹಾನ್ನಲ್ಲಿ ಮೊದಲಿಗೆ ಕಂಡು ಬಂದ ಈ ವೈರಸ್ ಅನ್ನು 'ದಿ ಐಸ್ ಆಫ್ ಡಾರ್ಕ್ನೆಸ್' ಪುಸ್ತಕದಲ್ಲಿ 'ವುಹಾನ್ 400' ಎಂಬ ಹೆಸರಿನಲ್ಲಿ ಕರೆಯಲಾಗಿದೆ.

'ದಿ ಐಸ್ ಆಫ್ ಡಾರ್ಕ್ನೆಸ್' ಕಾದಂಬರಿ
ಡಿಯಾನ್ ಕೂನ್ಟ್ಜ್ ಎಂಬ ಲೇಖಕರು 'ದಿ ಐಸ್ ಆಫ್ ಡಾರ್ಕ್ನೆಸ್' ಪುಸ್ತಕವನ್ನು ಬರೆದಿದ್ದು, ಕತೆಯಲ್ಲಿ 'ವುಹಾನ್ 400' ಎಂಬ ವೈರಸ್ ಅನ್ನು ಶಸ್ತ್ರವಾಗಿ ಲ್ಯಾಬ್ ನಲ್ಲಿ ತಯಾರಿಸಲಾಗುತ್ತದೆ.

ವೈರಸ್ ಬಗ್ಗೆ ಬರೆದಿರುವ ಸಾಲುಗಳ ಚಿತ್ರ
ಪುಸ್ತಕದಲ್ಲಿ ಅವರು ಬರೆದಿರುವ ಸಾಲುಗಳನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕದಲ್ಲಿ ವೈರಸ್ ಬಗ್ಗೆ ವಿವರಗಳು ಇರುವ ಪೇಜ್ಗಳ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಯೋಗಾಲಯದಲ್ಲಿ ತಯಾರಾಯಿತಾ ವೈರಸ್?
ಕೊರೊನಾ ವೈರಸ್ ಅನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ ಎಂಬ ಗಾಳಿ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಈಗ ಈ ಕಾದಂಬರಿ ಸಹ ದೊರೆತಿದೆ. ಆದರೆ ವದಂತಿಗಳನ್ನು ಚೀನಾ ಕಮ್ಯುನಿಸ್ಟ್ ಸರ್ಕಾರ ತಳ್ಳಿ ಹಾಕಿದೆ.

ಅಧಿಕೃತ ಲೆಕ್ಕದಂತೆ 1765 ಸಾವು
ಕೊರೊನಾವೈರಸ್ ನಿಂದ ಈವರೆಗೆ 1765 ಮಂದಿ ಅಸುನೀಗಿದ್ದಾರೆಂದು ಅಧಿಕೃತ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ ಮೃತರ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ವೈರಸ್ ಮೊದಲಿಗೆ ಕಾಣಿಸಿಕೊಂಡ ವುಹಾನ್ ನಗರಕ್ಕೆ ದಿಗ್ಬಂಧನ ವಿಧಿಸಲಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications