ಬರ್ಲಿನ್ ನಲ್ಲಿ ಲಂಗ ದಾವಣಿ ತೊಟ್ಟ ಜರ್ಮನ್ ಬೆಡಗಿಯರು
ಬರ್ಲಿನ್, ಮೇ 22: ಭಾರತದ ಕೆಲವು ರಾಜ್ಯಗಳಲ್ಲಿ ನಡೆಯುವ ಜಾತ್ರೆಯಂತೆ ಬರ್ಲಿನ್ನಲ್ಲಿ ಕೂಡ ಕಲ್ಚರ್ ಕಾರ್ನಿವಲ್ ಎನ್ನುವ ಜಾತ್ರೆಯಂತೆನಿಸುವ ವಿಶೇಷ ಹಬ್ಬವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.
ಪ್ರತಿ ವರ್ಷ ವಸಂತ ಋತುವಿನಲ್ಲಿ ಬರ್ಲಿನ್ನಲ್ಲಿ ಕಾರ್ನಿವಲ್ ಆಫ್ ಕಲ್ಚರ್ ಹಬ್ಬ ನಡೆಯುತ್ತದೆ. ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಹಬ್ಬ ಸೋಮವಾರ ಅಂತ್ಯಗೊಂಡಿದೆ. ಭಾರತೀಯರಂತೆ ಲಂಗ ದವಣಿ ತೊಟ್ಟು ಬರ್ಲಿನ್ ಬೆಡಗಿಯರು ಕಾಣಿಸಿಕೊಂಡಿದ್ದು ತುಂಬಾ ವಿಶೇಷವಾಗಿತ್ತು. ಇಡೀ ರಸ್ತೆಯ ತುಂಬೆಲ್ಲಾ ಮೆರವಣಿಗೆ ಮಾಡಿಕೊಂಡು, ನೃತ್ಯ ಮಾಡುತ್ತಾ ಇಡೀ ಬೀದಿಯನ್ನೇ ಬಣ್ಣಯುಕ್ತವನ್ನಾಗಿ ಮಾಡಿದ್ದರು.
ಪ್ರತಿ ವರ್ಷ ವಸಂತ ಋತುವಿನಲ್ಲಿ ಈ ಹಬ್ಬ ನಡೆಸಲಾಗುತ್ತದೆ. ಬರ್ಲಿನ್ ನ ಸಂಸ್ಕೃತಿಯನ್ನು ಸಾರುವ ಹಬ್ಬ ಇದಾಗಿದೆ. ಈ ಹಬ್ಬದಂದು ಬರ್ಲಿನ್ನ ಪ್ರಜೆಗಳ ತಮ್ಮ ಸಾಂಸ್ಕೃತಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಭಾನುವಾರ ಬರ್ಲಿನ್ನ ಕ್ರ್ಯೂಸ್ಬರ್ಗ್ ಸಾಂಸ್ಕೃತಿಕ ಉಡುಗೆಯೊಂದಿಗೆ ಸಾವಿರಾರು ನೃತ್ಯಗಾರರು ನೃತ್ಯ ಮಾಡುತ್ತಾ ಸಾಗಿದರು. ವಿಶ್ವದಾದ್ಯಂತ ಇರುವ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಈ ನಾಲ್ಕು ದಿನ ನಡೆಯುವ ಹಬ್ಬದಲ್ಲಿ 300 ಕ್ಕೂ ಹೆಚ್ಚು ಆಕರ್ಷಕ ವಸ್ತುಗಳ ಮಳಿಗೆಯೂ ನಿರ್ಮಾಣಗೊಂಡಿತ್ತು.

ಬರ್ಲಿನ್ನ ಕಲ್ಚರಲ್ ಕಾರ್ನಿವಲ್ ನಲ್ಲಿ ಮಿಂಚಿದ ಬೆಡಗಿಯರು
ಜೆರ್ಮನಿಯ ಬರ್ಲಿನ್ನಲ್ಲಿ ಸೋಮವಾರ ನಡೆದ ಕಲ್ಚರ್ ಕಾರ್ನಿವಲ್ ಹಬ್ಬದಲ್ಲಿ ಅಲ್ಲಿನ ಸ್ಥಳೀಯರು ಲಂಗ ದಾವಣಿ ತೊಟ್ಟು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು. ಅಲ್ಲಿಯ ವಿಶೇಷತೆಯನ್ನು ಸಾರುವ ಹಲವು ಕಾರ್ಯಕ್ರಮಗಳು ಕೂಡ ನಡೆದವು.

ಗೊಂಬೆಯಂತೆ ಕಂಡ ಬರ್ಲಿನ್ ಯುವತಿಯರು
ಪ್ರತಿ ವರ್ಷ ವಸಂತ ಋತುವಿನಲ್ಲಿ ಬರ್ಲಿನ್ನಲ್ಲಿ ನಡೆಯುವ ಕಲ್ಚರ್ ಕಾರ್ನಿವಲ್ ಈ ಬಾರಿಯೂ ಕೂಡ ವಿಶೇಷವಾಗಿತ್ತು. ಬರ್ಲಿನ್ ಯುವತಿಯರು ಬಿಳಿಯ ಫ್ರಾಕ್ ಗಳನ್ನು ಧರಿಸಿ ಅಲ್ಲಿನ ಸಂಪ್ರದಾಯದಂತೆ ಹಾಡಿಗೆ ಹೆಜ್ಜೆ ಹಾಕಿದರು.

ಡರ್ಟಿ ಪಿಗ್ ಹಬ್ಬ ಹೀಗಿರುತ್ತೆ ನೋಡಿ
ಜೆರ್ಮನಿಯ ಹೇರಿಸ್ಡಾರ್ಫ್ನಲ್ಲಿ ಸೋಮವಾರ ನಡೆದ ಡರ್ಟಿ ಪಿಗ್ ಹಬ್ಬದಲ್ಲಿ ಯುವಕರು ಅಲ್ಲಿನ ಸಂಪ್ರದಾಯದಂತೆ ಕೆಸರಿನಲ್ಲಿ ಮುಳುಗೆದ್ದರು. ಒಬ್ಬಿಗೊಬ್ಬರು ಕೆಸರೆರೆಚಿಕೊಂಡು ಸಂತಸ ಪಡುತ್ತಿರುವ ದೃಶ್ಯವನ್ನು ನೋಡಬಹುದು.

ಪುಷ್ಪ ಪ್ರದರ್ಶನದಲ್ಲಿ ಭರತನಾಟ್ಯ
ಲಂಡನ್ ಶಾಲೆಯೊಂದರಲ್ಲಿ ರಾಯಲ್ ಹಾರ್ಟಿಕಲ್ಚರ್ ಸೊಸೈಟಿ ಆಯೋಜಿಸಿದ್ದ ಪುಷ್ಪ ಪ್ರದರ್ಶನದ ವೇಳೆ 10-13 ವರ್ಷದ ವಿದ್ಯಾರ್ಥಿಗಳು ಭಾರತದ ಸಂಪ್ರದಾಯ ಎತ್ತಿ ಹಿಡಿಯುವ ಭರತನಾಟ್ಯವನ್ನು ಪ್ರದರ್ಶಿಸಿದರು.

ಇರಾನ್ ಅಣು ಒಪ್ಪಂದ ರದ್ದುಪಡಿಸಿದ ಅಮೇರಿಕ ನಿಲುವು ಚರ್ಚೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಕಪ್ಪು ಸಮುದ್ರದ ಕರಾವಳಿ ತೀರದ ನಗರಿ ಸೋಚಿಯಲ್ಲಿ ಸೋಮವಾರ ಭೇಟಿ ಮಾಡಿದರು. ಇರಾನ್ ನ್ಯೂಕ್ಲಿಯರ್ ಡೀಲ್ ರದ್ದುಪಡಿಸಿದ ಅಮೇರಿಕಾದ ನಿರ್ಧಾರ ಸೇರಿದಂತೆ ಹಲವು ಪ್ರಾದೇಶಿಕ ಹಾಗೂ ಜಾಗತಿಕ ಮಹತ್ತರ ವಿಷಯಗಳ ಕುರಿತು ಸೋಚಿ ಸಮ್ಮೇಳನದ ವೇಳೆ ಮೋದಿ ಮತ್ತು ಪುಟಿನ್ ಚರ್ಚಿಸಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications