ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ
ಕ್ರೈಸ್ಟ್ ಚರ್ಚ್, ಮಾರ್ಚ್ 15: ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿ ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿ ಘಟನೆ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಬಂದೂಕುಧಾರಿಯು ಶಸ್ತ್ರಾಸ್ತ್ರದ ಮೇಲೆ ಬರೆದಿರುವ ಹೆಸರುಗಳು ಸಾಕಷ್ಟು ಕುತೂಹಲ ಮೂಡಿಸಿವೆ.
ಈ ದಾಳಿಯು ಮುಸ್ಲಿಮರ ವಿರುದ್ಧ ದ್ವೇಷ ಭಾವನೆಯನ್ನು ಹೊಂದಿರುವ ವ್ಯಕ್ತಿ ನಡೆಸಿದ್ದಾನೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಪೂರಕವಾದ ಅಂಶಗಳು ಇದರಲ್ಲಿವೆ. ಶಸ್ತ್ರಾಸ್ತ್ರದ ಮೇಲೆ ಅನೇಕರ ಹೆಸರುಗಳನ್ನು ಬರೆಯಲಾಗಿದ್ದು, ಅವರೆಲ್ಲರೂ ಇತಿಹಾಸದಲ್ಲಿ ಮುಸ್ಲಿಂ ದಾಳಿಕೋರರ ವಿರುದ್ಧ ಹೋರಾಟ ನಡೆಸಿದವರೇ ಆಗಿದ್ದಾರೆ. ಅವರನ್ನು ಈತ ಪ್ರೇರಣೆಯನ್ನಾಗಿರಿಸಿಕೊಂಡು ದಾಳಿ ನಡೆಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಮಾಹಿತಿಗಳು ದಾಳಿಕೋರ ಇತಿಹಾಸದಲ್ಲಿ ದಾಖಲಾದ ಮುಸ್ಲಿಂ ದಾಳಿಕೋರರ ವಿರುದ್ಧದ ಹೋರಾಟಗಳ ಕಥನಗಳಿಂದ ತೀವ್ರ ಪ್ರಭಾವಿತನಾಗಿದ್ದ ಎಂಬುದನ್ನು ತಿಳಿಸುತ್ತವೆ. ಭಾರತದ ಸಂಶೋಧಕ, ರಕ್ಷಣಾ ವ್ಯವಹಾರ ಕಾರ್ಯತಂತ್ರ ತಜ್ಞ ದಿವ್ಯ ಕುಮಾರ್ ಸೋಟಿ ಈ ಮಹತ್ವದ ಹಾಗೂ ಕುತೂಹಲಕಾರಿ ಅಂಶಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಶುಕ್ರವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1.45ರ ಸುಮಾರಿಗೆ ಕ್ರೈಸ್ಟ್ಚರ್ಚ್ನ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಅನೇಕರನ್ನು ಕೊಂದು ಹಾಕಿದ್ದಾನೆ. ದಾಳಿಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ನಿಖರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ದಾಳಿಗೆ ಕಾರಣ ಏನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ದಾಳಿಕೋರ ಶಸ್ತ್ರಾಸ್ತ್ರದ ಮೇಲೆ ಬರೆದಿರುವ ಹೆಸರುಗಳು ಆತ ಮುಸ್ಲಿಮರ ವಿರುದ್ಧದ ಚರಿತ್ರೆಯ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದ ಎಂಬುದನ್ನು ತಿಳಿಸಿವೆ.
|
ಚಾರ್ಲ್ಸ್ ಮಾರ್ಟೆಲ್
ಮಸೀದಿಗಳ ಮೇಲೆ ದಾಳಿ ನಡೆಸಿದ ಶೂಟರ್, ಶಸ್ತ್ರಾಸ್ತ್ರದ ಮೇಲೆ ಧರ್ಮಯುದ್ಧಕ್ಕೆ ಸಂಬಂಧಿಸಿದ ಬರಹಗಳನ್ನು ಉಲ್ಲೇಖಿಸಿದ್ದಾನೆ. ಫ್ರಾನ್ಸ್ನಲ್ಲಿ ಕ್ರಿ.ಶ 732ರ ವೇಳೆ ಇಸ್ಲಾಮಿಕ್ ಆಕ್ರಮಣಕಾರರ ವಿರುದ್ಧ ಸೇನೆಯನ್ನು ಮುನ್ನಡೆಸಿದ್ದ ಸೇನಾ ಕಮಾಂಡರ್ ಚಾರ್ಲ್ಸ್ ಮಾರ್ಟೆಲ್ ಹೆಸರನ್ನು ದಾಳಿಕೋರ ಬರೆದಿದ್ದಾನೆ.
|
ವಿಯೆನ್ನಾ ಮತ್ತು ಏಕರ್ ಕದನ
ಮಸೀದಿ ದಾಳಿಕೋರನ ಶಸ್ತ್ರಾಸ್ತ್ರದ ಮೇಲೆ 'ವಿಯೆನ್ನಾ 1683' ಮತ್ತು 'ಏಕರ್ 1189' ಎಂದು ಬರೆಯಲಾಗಿದೆ. 1683ರ ವಿಯೆನ್ನಾ ಕದನದಲ್ಲಿ ಒಟ್ಟೋಮನ್ ಟರ್ಕ್ ಮುಸ್ಲಿಮರ ವಿರುದ್ಧ ಚರ್ಚ್ ಕ್ರಿಶ್ಚಿಯನ್ ಕಾನ್ಫೆಡರಿ ಮೂಲಕ ಹೋರಾಟ ಸಂಘಟಿಸಿತ್ತು. 1189ರ ಏಕರ್ ಯುದ್ಧದಲ್ಲಿ ಈಜಿಪ್ಟಿನ ಮುಸ್ಲಿಮರ ವಿರುದ್ಧ ಕ್ರೈಸ್ತರು ಕದನ ನಡೆಸಿದ್ದರು.
|
ನಾಲ್ಕನೇ ಗ್ಯಾಸ್ಟನ್
ಮತ್ತೊಂದರಲ್ಲಿ ಸ್ಪೇನ್ ದೇಶದ ಬರ್ನ್ನ ಹೋರಾಟಗಾರ ನಾಲ್ಕನೇ ಗ್ಯಾಸ್ಟನ್ನ ಹೆಸರನ್ನು ಬರೆಯಲಾಗಿದೆ. ಈತ ಸ್ಪೇನ್ನ ಹೋಲಿ ಲ್ಯಾಂಡ್ಅನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಟರ್ಕ್ ಮುಸ್ಲಿಮರ ವಿರುದ್ಧದ ಮೊದಲನೇ ಧರ್ಮಯುದ್ಧದಲ್ಲಿ ಪಾಲ್ಗೊಂಡಿದ್ದ.
| Array |
ಕಾನ್ಸ್ಟ್ಯಾಂಟಿನ್ II ಆಸೆನ್
ಬಲ್ಗೇರಿಯಾದಲ್ಲಿ ಟರ್ಕ್ ಮುಸ್ಲಿಮರ ವಿರುದ್ಧ ಬಂಡಾಯ ಏಳುವ ಪ್ರಯತ್ನಗಳನ್ನು ನಡೆಸಿದ್ದ ಬಲ್ಗೇರಿಯಾದ ಕೊನೆಯ ಕ್ರೈಸ್ತ ದೊರೆ ಕಾನ್ಸ್ಟ್ಯಾಂಟಿನ್ II ಆಸೆನ್ ಹೆಸರನ್ನು ಕೂಡ ದಾಳಿಕೋರ ಬರೆದಿದ್ದಾನೆ.
|
ಮಿಖಾಯಲ್ ಸಿಲಗಿ
ಶಸ್ತ್ರಾಸ್ತ್ರದ ತುದಿಯಲ್ಲಿ ಹಂಗೇರಿಯಾದ ಜನರಲ್ ಮಿಖಾಯಲ್ ಸಿಲಗಿ ಹೆಸರನ್ನು ಉಲ್ಲೇಖಿಸಲಾಗಿದೆ. ಮಿಖಾಯಲ್, ಒಟ್ಟೋಮನ್ ಮುಸ್ಲಿಮರು ಹಂಗೇರಿಯಾದ ಬೆಲ್ಗ್ರೇಡ್ ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದಾಗ ಹೋರಾಟದ ನೇತೃತ್ವ ವಹಿಸಿ ಅವರಿಂದ ಹತ್ಯೆಗೆ ಒಳಗಾಗಿದ್ದ.
|
ಬೊಹೆಮೊಂಡ್ ಐ
ದಾಳಿಕೋರ ಬರೆದ ಮತ್ತೊಂದು ಇತಿಹಾಸದ ಹೆಸರೆಂದರೆ ಟರ್ಕ್ ಮುಸ್ಲಿಮರ ವಿರುದ್ಧ ಮೊದಲ ಧರ್ಮಯುದ್ಧವನ್ನು ಮುನ್ನಡೆಸಿದ್ದ ಇಟಲಿಯ ಟರಾಂಟೊ ರಾಜಕುಮಾರ ಬೊಹೆಮೊಂಡ್ ಐ ಎಂಬಾತನದ್ದು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications