ಬ್ರೆಜಿಲ್: ಭಾರಿ ಮಳೆ, ಪ್ರವಾಹಕ್ಕೆ ಸಿಲುಕಿ 18 ಮಂದಿ ದುರ್ಮರಣ
ಸಾವೊ ಪಾಲೊ, ಜನವರಿ 31: ಭಾರಿ ಮಳೆಗೆ ಸಾವೊ ಪಾಲೊ ರಾಜ್ಯದಲ್ಲಿ 18 ಮಂದಿ ಮರಣ ಹೊಂದಿದ್ದಾರೆ, ಕನಿಷ್ಠ ಒಂಬತ್ತು ಜನರು ಗಾಯಗೊಂಡಿರುವ ವರದಿ ಬಂದಿದೆ. ಸುಮಾರು 500 ಕುಟುಂಬಗಳು ಬ್ರೆಜಿಲ್ನ ದಕ್ಷಿಣ ಸಾವೊ ಪಾಲೊ ರಾಜ್ಯದಲ್ಲಿ ತಮ್ಮ ನಿವಾಸಗಳನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮಂಗಳವಾರದವರೆಗೂ ಧಾರಾಕಾರ ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾವೊ ಪಾಲೊ ಗವರ್ನರ್ ಜೋವೊ ಡೋರಿಯಾ ಅವರು ಹಾನಿಗೊಳಗಾದ ಪ್ರದೇಶಗಳನ್ನು ಸಮೀಕ್ಷೆ ಮಾಡಲು ಹೆಲಿಕಾಪ್ಟರ್ ಅನ್ನು ಬಳಸಿದರು ಮತ್ತು ರಾಜ್ಯದ 10 ಹೆಚ್ಚು ಪೀಡಿತ ನಗರಗಳು ಮತ್ತು 645 ಪುರಸಭೆಗಳಿಗೆ ಸಹಾಯ ಮಾಡಲು 15 ಮಿಲಿಯನ್ ರಿಯಾಸ್ ($2.7 ಮಿಲಿಯನ್, €2.5 ಮಿಲಿಯನ್) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
⛈️ O Governo de SP liberou R milhões para auxiliar na recuperação urbana e social de 10 cidades atingidas pelas fortes chuvas deste final de semana. pic.twitter.com/T3ABK5fifx
— Governo de S. Paulo (@governosp) January 30, 2022
ಸಾವೊ ಪಾಲೊ ಬ್ರೆಜಿಲ್ನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದ್ದು, ಕೇವಲ 212 ಮಿಲಿಯನ್ಗಿಂತಲೂ ಹೆಚ್ಚಿನ ಬ್ರೆಜಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 46 ಮಿಲಿಯನ್ ಜನರು ನೆಲೆಸಿದ್ದಾರೆ.

ಹಾನಿ ಪ್ರಮಾಣ ವರದಿ
ರಾಜ್ಯದ ಅಗ್ನಿಶಾಮಕ ಇಲಾಖೆಯ ಪ್ರಕಾರ ಕನಿಷ್ಠ 11 ಸಾವೊ ಪಾಲೊ ಪುರಸಭೆಗಳಲ್ಲಿ ಭೂಕುಸಿತ, ತೀವ್ರ ಪ್ರವಾಹ, ಮತ್ತು ಬೀಳುವ ಮರಗಳು ಮತ್ತು ಮೂಲಸೌಕರ್ಯಕ್ಕೆ ಹಾನಿಯನ್ನು ದಾಖಲಿಸಿವೆ. ರಾಜ್ಯದ ಒಳಭಾಗದಲ್ಲಿರುವ ನಗರಗಳಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ನೆಲಕಚ್ಚಿದ್ದರಿಂದ 11ಕ್ಕೂ ಅಧಿಕ ಮಂದಿ ಭಾನುವಾರದಂದು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪತ್ರಿಕಾ ತಿಳಿಸಿದೆ.
ಫ್ರಾಂಕೋ ಡ ರೋಚಾ ಪುರಸಭೆಯಲ್ಲಿ ಪೊಲೀಸ್ ಠಾಣೆ ಮತ್ತು ವಾಯಡಕ್ಟ್ ಭೂಕುಸಿತದಿಂದ ನೆಲಸಮವಾಗಿವೆ. ಚಂಡಮಾರುತದ ಮಧ್ಯೆ, ಸಾವೊ ಪಾಲೊ ನಗರವು ಭದ್ರತಾ ಮುನ್ನೆಚ್ಚರಿಕೆಯಾಗಿ ಕೋವಿಡ್ 19 ವಿರುದ್ಧ ವ್ಯಾಕ್ಸಿನೇಷನ್ ಆಭಿಯಾನವನ್ನು ಸ್ಥಗಿತಗೊಳಿಸಿದೆ.

ಮಂಗಳವಾರದವರೆಗೂ ಭಾರೀ ಮಳೆ ಮುಂದುವರಿಯಲಿದೆ
ಮಂಗಳವಾರದವರೆಗೆ ರಾಜ್ಯದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜನರು ಜಾಗರೂಕರಾಗಿರಲು ಸೂಚಿಸಿದ್ದಾರೆ.
Recommended Video
ಕಳೆದ ಅಕ್ಟೋಬರ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾದಾಗಿನಿಂದ ಬ್ರೆಜಿಲ್ ಹಲವಾರು ಹವಾಮಾನ ಸಂಬಂಧಿತ ಪ್ರಾಕೃತಿಕ ವಿಪತ್ತುಗಳಿಂದ ತತ್ತರಿಸಿದೆ.
ಉತ್ತರ ಬಹಿಯಾ ರಾಜ್ಯದಲ್ಲಿ, 24 ಜನರು ಸಾವನ್ನಪ್ಪಿದ್ದರು ಮತ್ತು ದಕ್ಷಿಣದ ಮಿನಾಸ್ ಗೆರೈಸ್ ರಾಜ್ಯದಲ್ಲಿ 19 ಜನರು ಸಾವನ್ನಪ್ಪಿದ್ದರು. ಬಹಿಯಾದಲ್ಲಿ, ಪ್ರವಾಹದ ಪರಿಣಾಮವಾಗಿ ಎರಡು ಅಣೆಕಟ್ಟುಗಳು ಒಡೆದುಹೋಗಿತ್ತು ಮತ್ತು ಮಿನಾಸ್ ಗೆರೈಸ್ನಲ್ಲಿ ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದರು. (AP, AFP, Lusa)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications