ನಾನು ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ : ಮುಷರಫ್
ಉಗ್ರ ಸಂಘಟನೆ ಲಷ್ಕರ್ ಇ ತೈಬಾ ಮತ್ತು ಅದರ ಸ್ಥಾಪಕ ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ ನಾನು ಎಂದು ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ, ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ದಮನ ಮಾಡುವಲ್ಲಿ ಲಷ್ಕರ್ ಇ ತೈಬಾದ ಪಾತ್ರವಿದೆ ಎಂದಿರುವ ಮುಷರಫ್, ಕಾಶ್ಮೀರದಲ್ಲಿ ಹಫೀಜ್ ಸಯೀದ್ ನ ಪಾತ್ರವಿದೆ. ಮತ್ತು ಆತನಿಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಇಪ್ಪತ್ಮೂರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದನ್ನು ಘೋಷಿಸಿದ್ದ ಮುಷರಫ್, ಜಮ್ಮು-ಕಾಶ್ಮೀರದಲ್ಲಿ ಭಾರತದ ಸೇನೆಯ ವಿರುದ್ಧದ ದಮನ ಕಾರ್ಯಾಚರಣೆಗೆ ನನ್ನ ಬೆಂಬಲವಿದೆ ಎಂದಿದ್ದಾರೆ.
"ಲಷ್ಕರ್ ಇ ತೈಬಾ ದೊಡ್ಡ ಶಕ್ತಿ. ಅಮೆರಿಕ ಜತೆ ಒಡಂಬಡಿಕೆ ಮಾಡಿಕೊಂಡು ಭಾರತವು ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಲಷ್ಕರ್ ಇ ತೈಬಾ ಕಾಶ್ಮೀರದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ" ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದಕ್ಕೆ ದುಬೈನಲ್ಲಿರುವ ಮುಷರಫ್ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಉಗ್ರ ಸಂಘಟನೆಗಳು ಇಷ್ಟಪಡುತ್ತಿದ್ದವು
ಒಂದು ಕಡೆ ತಮ್ಮನ್ನು ಲಷ್ಕರ್ ಇ ತೈಬಾದ ದೊಡ್ಡ ಬೆಂಬಲಿಗ ಎಂದು ಕರೆದುಕೊಂಡಿರುವ ಮುಷರಫ್, ನನ್ನನ್ನು ಉಗ್ರ ಸಂಘಟನೆಗಳು ಇಷ್ಟಪಡುತ್ತಿದ್ದವು. ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಸಂಘಟನೆ ನನ್ನನ್ನು ಇಷ್ಟಪಡುತ್ತಿತ್ತು ಎಂದಿದ್ದಾರೆ.

ಅಂದಿನ ಸನ್ನಿವೇಶ ಬೇರೆ
ಆದರೆ, ಮುಷರಫ್ ಸರಕಾರದ ಅವಧಿಯಲ್ಲೇ ಉಗ್ರ ಸಂಘಟನೆ ಲಷ್ಕರ್ ಇ ತೈಬಾವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, "ಅದು ಬೇರೆ ಸನ್ನಿವೇಶ" ಎಂದಷ್ಟೇ ಹೇಳಿ, ಹೆಚ್ಚಿನ ಉತ್ತರ ನೀಡಲಿಲ್ಲ.

ಗೃಹಬಂಧನದಿಂದ ಮುಕ್ತಗೊಂಡ ಹಫೀಜ್
ಕಳೆದ ಜನವರಿಯಿಂದ ಗೃಹಬಂಧನದಲ್ಲಿದ್ದ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಕೋರ್ಟ್ ಮುಕ್ತಗೊಳಿಸಿ ಆದೇಶ ನೀಡಿದ ನಂತರದಲ್ಲಿ ಪರ್ವೇಜ್ ಮುಷರಫ್ ಹೇಳಿಕೆ ಬಂದಿದೆ. ಅಂದಹಾಗೆ 26/11 ಮುಂಬೈ ಉಗ್ರರ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ನನ್ನು ಬಂಧಮುಕ್ತಗೊಳಿಸಿದ ತೀರ್ಮಾನಕ್ಕೆ ಭಾರತ ಆಕ್ಷೇಪ ದಾಖಲಿಸಿದೆ.

ಆತ ಜಾಗತಿಕ ಭಯೋತ್ಪಾದಕ
ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದ್ದು, ಆತನ ಬಗ್ಗೆ ಮಾಹಿತಿ ನೀಡಿದರೆ ಹಾಗೂ ಆತನಿಗೆ ಶಿಕ್ಷೆಯಾಗುವಂಥ ಸಾಕ್ಷ್ಯಾಧಾರಕ್ಕೆ ಒಂದು ಕೋಟಿ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications