ಪಾಕ್, ಇರಾಕ್ ಶಾಲಾ ಪುಸ್ತಕಗಳಲ್ಲಿ 'ಎ' ಫಾರ್ ಎ.ಕೆ.-47, 'ಬಿ' ಫಾರ್ ಬ್ಯಾಟಲ್ !
ಮೊಸೂಲ್ ನಲ್ಲಿ ಐಸ್ಐಎಸ್ ಉಗ್ರರ ಹಿಡಿತದಲ್ಲಿದ್ದ ಅನಾಥಾಶ್ರಮವೊಂದನ್ನು ಇರಾಕ್ ನ ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಾಗ ಇಂಥ ಪಠ್ಯ ಪುಸ್ತಕಗಳಿರುವುದು ತಿಳಿದುಬಂದಿದೆ.
ಮೊಸೂಲ್ (ಇರಾಕ್), ಮಾರ್ಚ್ 9: ಐಸ್ಐಎಸ್ ಉಗ್ರ ಸಂಘಟಯ ವಶದಲ್ಲಿರುವ ಇರಾಕ್ ನ ಮೊಸೂಲ್ ಪ್ರಾಂತ್ಯದಲ್ಲಿನ ಹಾಗೂ ಪಾಕಿಸ್ತಾನದ ಕೆಲವಾರು ಮದರಸಾಗಳಲ್ಲಿ ಶಾಲೆಗಳಲ್ಲಿನ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಕೆಲವಾರು ಕುತೂಹಲಕಾರಿ ಸಂಘಟನೆಗಳು ಬಹಿರಂಗಗೊಂಡಿವೆ.
ನಮ್ಮಲ್ಲಿನ ಶಾಲೆಗಳಲ್ಲಿ ಮಕ್ಕಳು ಕಲಿಯೋದು... ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಎಂದಲ್ಲವೇ? ಆದರೆ, ಐಸ್ಐಸ್ ಹಿಡಿತದಲ್ಲಿರುವ ಮಕ್ಕಳು ಕಲಿಯೋ ಪುಸ್ತಕಗಳಲ್ಲಿ ಇರೋದು 'ಎ' ಫಾರ್ ಎ.ಕೆ. -47, 'ಬಿ' ಫಾರ್ ಬ್ಯಾಟಲ್.... ಇಷ್ಟೇ ಅಲ್ಲ, 'ಎಸ್' ಫಾರ್ ಸ್ನೈಪರ್, 'ಡಬ್ಲೂ' ಫಾರ್ ವುಮನ್ ಎಂದು ತಿಳಿಸಲಾಗಿದೆ.

ಮೊಸೂಲ್ ನಲ್ಲಿ ಐಸ್ಐಎಸ್ ಉಗ್ರರ ಹಿಡಿತದಲ್ಲಿದ್ದ ಅನಾಥಾಶ್ರಮವೊಂದನ್ನು ಇರಾಕ್ ನ ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಾಗ ಇಂಥ ಪಠ್ಯ ಪುಸ್ತಕಗಳಿರುವುದು ತಿಳಿದುಬಂದಿದೆ.
ಇಷ್ಟೇ ಅಲ್ಲ, ಪಾಕಿಸ್ತಾನದ ಮದರಸಾಗಳಲ್ಲಿನ ಕೆಲ ಪಠ್ಯ ಪುಸ್ತಕಗಳಲ್ಲಿ 'ಬಿ' ಫಾರ್ ಬಂದೂಕು, 'ಕೆ' ಫಾರ್ ನೈಫ್ (knife- ಚಾಕು), ಟಿ ಫಾರ್ ಟ್ಯಾಂಕ್ ಹಾಗೂ 'ಎಸ್' ಫಾರ್ ಸ್ವೋರ್ಡ್ (ಕತ್ತಿ) ಎಂದು ತಿಳಿಸಲಾಗಿದೆ.
ಇನ್ನು, ಲಷ್ಕರ್-ಎ-ತೊಯ್ಬಾ ನಡೆಸುತ್ತಿದ್ದ ಒಂದು ಮದರಸಾದ ಇತಿಹಾಸ ಪಠ್ಯ ಪುಸ್ತಕದಲ್ಲಿ, ಭಾರತೀಯರನ್ನು ಇಸ್ಲಾಂ ಧರ್ಮ ಹಾಗೂ ಮುಸ್ಲಿಮರ ವಿರೋಧಿಗಳು ಎಂದು ಚಿತ್ರಿಸಲಾಗಿದೆ.
ಈ ಪಠ್ಯದಲ್ಲಿ ಮೊದಲ ಪಾಠ, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ಬಗ್ಗೆಯಿದ್ದು, ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಆಗ ಇದ್ದ ಮುಸ್ಲಿಂಮರನ್ನು ಗುಲಾಮಗಿರಿಗೆ ತಳ್ಳಿತ್ತು. ಭಾರತದಲ್ಲಿನ ಹಿಂದೂಗಳು ಮುಸ್ಲಿಮರನ್ನು ಗುಲಾಮಗಿರಿಗೆ ಒಗ್ಗಿಸಿಕೊಂಡಿದ್ದರು.
ಇದರ ವಿರುದ್ಧ ಸಿಡಿದೆದ್ದ ಜಿನ್ನಾ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಸಂಕಲ್ಪ ತೊಟ್ಟು ಅದರಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications