70 ಸಾವಿರ ಮಕ್ಕಳ ಹುಟ್ಟಿನ ಲೆಕ್ಕ ಹಚ್ಚಲು ಬಿಡದ ಎಬೋಲಾ
ಮನ್ರೋವಿಯಾ, ಜುಲೈ, 31 : ಪಶ್ಚಿಮ ಆಫ್ರಿಕಾ ಹಾಗೂ ಇನ್ನಿತರ ದೇಶಗಳನ್ನು ಕಾಡುತ್ತಿರುವ ಒಂದು ಮಹಾಮಾರಿ ಎಬೋಲಾ ರೋಗ. ಈ ರೋಗದ ಆಂತಕದಲ್ಲಿ ಸುಮಾರು 70,000 ನವಜಾತ ಶಿಶುಗಳ ಜನನವನ್ನು ದಾಖಲಿಸಿಕೊಳ್ಳುವಲ್ಲಿ ಮರೆತು ಆಸ್ಪತ್ರೆ ಸಿಬ್ಬಂದಿಗಳು ಎಡವಟ್ಟು ಎಸಗಿದ್ದಾರೆ.
ಪೋಷಕರು ನವಜಾತ ಶಿಶುಗಳ ಆರೋಗ್ಯದ ಕುರಿತಾಗಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಹಾಗೂ ಮಕ್ಕಳ ಜನನದ ಪೂರಕ ಮಾಹಿತಿ ನೀಡದೆ ಆಸ್ಪತ್ರೆಯಿಂದ ತೆರಳಿದ್ದಾರೆ. ಹೀಗಾಗಿ ಕಳೆದ 2013ನೇ ವರ್ಷಕ್ಕೆ ಹೋಲಿಸಿದರೆ ಶಿಶುಗಳ ಜನನ ಪ್ರಮಾಣ ದಾಖಲಾತಿ ಮಟ್ಟ ಸುಮಾರು 40%ನಷ್ಷು ತಗ್ಗಿದೆ ಎಂದು ಯುನಿಸೆಫ್(UNICEF) ಲೆಬೇರಿಯಾದಲ್ಲಿ ಕೈಗೊಂಡ ಅಧ್ಯಯನದಿಂದ ಈ ಮಾಹಿತಿ ತಿಳಿದು ಬಂದಿದೆ.[ಬೆಂಗಳೂರಲ್ಲಿ ಸೋಂಕು ರೋಗಗಳ ಪತ್ತೆಗೆ ಆಧುನಿಕ ಲ್ಯಾಬ್]

ವರ್ಷದ ಮೊದಲ 5 ತಿಂಗಳಲ್ಲಿ ಕೇವಲ 700 ಮಕ್ಕಳನ್ನು ದಾಖಲಾತಿ ಪುಟಕ್ಕೆ ಸೇರಿದ್ದು, ಇನ್ನುಳಿದಂತೆ 70,000 ಶಿಶುಗಳು ಜನನ ದಾಖಲಾತಿಯಿಂದ ಹೊರಗುಳಿದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಲೈಬೇರಿಯಾ ಸರ್ಕಾರ ಹಾಗೂ ಯುನಿಸೆಫ್ ನ ಪ್ರತಿನಿಧಿ ಶೆಲ್ಡನ್ ಯೆಟ್ 'ಪೋಷಕರು ನವಜಾತ ಶಿಶುಗಳ ಜನನದ ಮಾಹಿತಿ ದಾಖಲಿಸದೆ, ಆಸ್ಪತ್ರೆಯಿಂದ ತೆರಳದಂತೆ ಎಚ್ಚರಿಕೆ ವಹಿಸಬೇಕು' ಎಂದು ಆಸ್ಪತ್ರೆ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದಾರೆ.
ಈ ಶಿಶುಗಳ ಜನನ ಮಾಹಿತಿ ದಾಖಲಾಗದಿದ್ದಲ್ಲಿ, ಈ ಮಕ್ಕಳು ಲೆಬೇರಿಯಾದ ನಾಗರಿಕ ಸದಸ್ಯತ್ವದಿಂದ ದೂರ ಉಳಿಯಬೇಕಾಗುತ್ತದೆ. ಅಕಸ್ಮಾತ್ ಎಬೋಲಾ ಮಹಾಮಾರಿಗೆ ದಾಖಲಾಗದ ಮಗು ತುತ್ತಾದಲ್ಲಿ ಮಗುವು ಹಲವಾರು ಆರೋಗ್ಯ ಸಂಬಂಧಿತ ಹಾಗೂ ಮೂಲಭೂತ ಸಾಮಾಜಿಕ ಸೇವಾ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ ಎಂದು ಯುನಿಸೆಫ್ ತಿಳಿಸಿದೆ.
ಎಬೋಲಾ ಮಹಾಮಾರಿಗೆ ಈಗಾಗಲೇ 28,000 ಜನರು ತುತ್ತಾಗಿದ್ದು, ಲೆಬೇರಿಯಾದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಸುಮಾರು 11,300 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಎಬೋಲಾ ರೋಗ ಮತ್ತು ಮಕ್ಕಳ ಜನನ ದಾಖಲಾತಿ ಕುರಿತಾಗಿ ಸದ್ಯದಲ್ಲಿಯೇ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಲೆಬೇರಿಯಾ ಸರ್ಕಾರ ಹಾಗೂ ಯುನಿಸೆಫ್ ಯೋಜನೆ ರೂಪಿಸುತ್ತಿದೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications