Get Updates
Get notified of breaking news, exclusive insights, and must-see stories!

180 ಲಕ್ಷ ಏನಾಯ್ತು?: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಮನೆಗೆ ನುಗ್ಗಿದವರಿಗೆ ಸಿಕ್ಕಿದ್ದು ಗರಿಗರಿ ನೋಟು!

ಕೊಲಂಬೋ, ಜುಲೈ 11: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮನೆಗೆ ನುಗ್ಗಿದ ಪ್ರತಿಭಟನಾಕಾರರ ಕಣ್ಣಿಗೆ ಗರಿಗರಿ ನೋಟು ಬಿದ್ದಿರುವ ವಿಷಯ ಇದೀಗ ಸಖತ್ ಸದ್ದು ಮಾಡುತ್ತಿದೆ.

ಕೊಲಂಬೋದಲ್ಲಿರುವ ಗೊಟಬಯ ರಾಜಪಕ್ಸೆ ಮನೆಗೆ ನುಗ್ಗಿದ ಜನರ ಕಣ್ಣಿಗೆ ಗರಿಗರಿ ಹೊಸ ನೋಟುಗಳು ಕಣ್ಣಿಗೆ ಬಿದ್ದಿವೆ. ಬರೋಬ್ಬರಿ 50,000 ಡಾಲರ್ ಹೊಸ ನೋಟುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಶ್ರೀಲಂಕಾದ ಅಧ್ಯಕ್ಷರು ತಮ್ಮ ಅಧಿಕೃತ ನಿವಾಸದಿಂದ ಓಡಿ ಹೋಗುವ ಸಂದರ್ಭದಲ್ಲಿ ಬಿಟ್ಟುಹೋಗಿರುವ ಲಕ್ಷಾಂತರ ರೂಪಾಯಿ ಹಣವನ್ನು ಪ್ರತಿಭಟನಾಕಾರರು ಸೋಮವಾರ ನ್ಯಾಯಾಲಯಕ್ಕೆ ಹಸ್ತಾಂತರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ 50,000 ಡಾಲರ್ ಹಣ ಹಸ್ತಾಂತರ

ನ್ಯಾಯಾಲಯಕ್ಕೆ 50,000 ಡಾಲರ್ ಹಣ ಹಸ್ತಾಂತರ

ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮನೆಯಲ್ಲಿ ಬರೋಬ್ಬರಿ 50,000 ಡಾಲರ್ ಅಂದರೆ ಲಂಕಾದ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 17.85 ದಶಲಕ್ಷ ರೂಪಾಯಿ ಆಗುತ್ತಿದೆ. ಶನಿವಾರ ಅಧ್ಯಕ್ಷರ ಮನೆಯನ್ನು ಸ್ವಾಧೀನಪಡಿಸಿಕೊಂಡ ಪ್ರತಿಭಟನಾಕಾರರು ಅಷ್ಟೂ ಹಣವನ್ನು ತಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಣವನ್ನು ವಶಕ್ಕೆ ಪಡೆದಿರುವ ಪೊಲೀಸರು ಸೋಮವಾರ ಅದನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇದರ ಮಧ್ಯೆ ಭವ್ಯ ಬಂಗಲೆಯಲ್ಲಿ ಪ್ರಮುಖ ದಾಖಲೆಗಳುಳ್ಳ ಸಂಪೂರ್ಣ ಸೂಟ್‌ಕೇಸ್ ಅನ್ನು ಸಹ ಬಿಟ್ಟು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 31ರಂದು ಭವ್ಯ ಕಟ್ಟಡಕ್ಕೆ ಬಂದಿದ್ದ ರಾಜಪಕ್ಸೆ

ಮಾರ್ಚ್ 31ರಂದು ಭವ್ಯ ಕಟ್ಟಡಕ್ಕೆ ಬಂದಿದ್ದ ರಾಜಪಕ್ಸೆ

ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದು, ಅವರ ಖಾಸಗಿ ಮನೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸುವುದಕ್ಕೆ ಪ್ರಯತ್ನಿಸಿದ್ದರು. ಈ ವೇಳೆ ಮಾರ್ಚ್ 31ರಂದು ಎರಡು ಶತಮಾನಗಳಷ್ಟು ಹಳೆಯದಾದ ಕಟ್ಟಡಣವನ್ನು ರಾಜಪಕ್ಸೆ ಪಡೆದುಕೊಂಡರು. ಇದರ ಮಧ್ಯೆ ಶನಿವಾರ ಪ್ರತಿಭಟನೆ ಕಾವು ಏರುತ್ತಿದ್ದಂತೆ ಭದ್ರತಾ ಸಿಬ್ಬಂದಿಯು ಎಚ್ಚರಿಕೆ ಸಂದೇಶವನ್ನು ರವಾನಿಸಿದರು. ತಕ್ಷಣ ಎಚ್ಚೆತ್ತುಕೊಂಡ ಅವರು, ನೌಕಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಹಿಂಬಾಗಿಲು ಮೂಲಕ ತಪ್ಪಿಸಿಕೊಂಡರು. ಹಡಗಿನ ಮೂಲಕ ದ್ವೀಪದ ಈಶಾನ್ಯಕ್ಕೆ ತೆರಳಿದರು ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಹೊತ್ತಿಗೆ ಅಧ್ಯಕ್ಷರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ, ಆದರೆ ಯಾವುದೇ ದಿನಾಂಕವನ್ನು ನಿರ್ದಿಷ್ಟಪಡಿಸದೆ ರಾಜಪಕ್ಸೆ ರಾಜೀನಾಮೆ ನೀಡುವುದು ಪಕ್ಕಾ ಆಗಿದೆ. ಅವರ ಈ ಉದ್ದೇಶದ ಬಗ್ಗೆ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಕಚೇರಿ ತಿಳಿಸಿದೆ.

ಶ್ರೀಲಂಕಾಗೆ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷ

ಶ್ರೀಲಂಕಾಗೆ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷ

ದ್ವೀಪರಾಷ್ಟ್ರದ ಪ್ರಧಾನಮಂತ್ರಿ ಸ್ಥಾನಕ್ಕೆ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ ಘೋಷಿಸಿದ್ದು ಆಗಿದೆ. ಇದರ ಮಧ್ಯೆ ರಾಜಪಕ್ಸೆ ರಾಜೀನಾಮೆ ಸಲ್ಲಿಸಿದ ನಂತರದಲ್ಲಿ 2024ರ ನವೆಂಬರ್ ತಿಂಗಳವರೆಗೂ ಅಂದರೆ ಸಂಸತ್ ಸದಸ್ಯರನ್ನು ಆಯ್ಕೆ ಮಾಡುವ ತನಕ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ. ಆದರೆ ಏಕೀಕೃತ ಸರ್ಕಾರ ರಚನೆಗೆ ಒಮ್ಮತ ಮೂಡಿದರೆ ಅಧಿಕಾರದಿಂದ ಕೆಳಗಿಳಿಯುವುದಾಗಿ ಸ್ವತಃ ವಿಕ್ರಮಸಿಂಘೆ ಘೋಷಿಸಿದ್ದಾರೆ. ಸಂಸತ್ತಿನ ಸ್ಪೀಕರ್ ಮಹಿಂದ ಅಬೇವರ್ಧನ ಪ್ರಕಾರ, ಇದೇ ಬುಧವಾರ ಅಧಿಕಾರದಿಂದ ಕೆಳಗಿಳಿಯುವುದಾಗಿ ಗೊಟಬಯ ರಾಜಪಕ್ಸೆ ಭರವಸೆ ನೀಡಿದ್ದಾರೆ. "ಶಾಂತಿಯುತ ಪರಿವರ್ತನೆಗೆ" ದಾರಿ ಮಾಡಿಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ 3 ರಿಂದ 30 ದಿನ ಅವಕಾಶ

ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ 3 ರಿಂದ 30 ದಿನ ಅವಕಾಶ

ಶ್ರೀಲಂಕಾದಲ್ಲಿ ಮುಂದಿನ ಉತ್ತರಾಧಿಕಾರಿ ಯಾರು? ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಂದಿನ ಮೂರರಿಂದ 30 ದಿನಗಳ ಅವಧಿ ತೆಗೆದುಕೊಳ್ಳಲಾಗುತ್ತದೆ. ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಪಕ್ಷವು ತಮ್ಮ ನಾಯಕ ಸಜಿತ್ ಪ್ರೇಮದಾಸಗೆ ಬೆಂಬಲ ಪಡೆಯಲು ಸಣ್ಣ ರಾಜಕೀಯ ಗುಂಪುಗಳೊಂದಿಗೆ ಮಾತುಕತೆ ನಡೆಸಿದೆ.

ಎಸ್‌ಜೆಬಿ ಅಧಿಕಾರಿಯೊಬ್ಬರು ರಾಜಪಕ್ಸೆಯ ಎಸ್‌ಎಲ್‌ಪಿಪಿಯಲ್ಲಿ ಭಿನ್ನಮತೀಯರೊಂದಿಗೆ ತಾತ್ಕಾಲಿಕ ಒಪ್ಪಂದಕ್ಕೆ ಬಂದಿದೆ. ಆ ಮೂಲಕ ಮಾಜಿ ಅಧ್ಯಕ್ಷರ ಪುತ್ರ 55 ವರ್ಷದ ಪ್ರೇಮದಾಸ ಅನ್ನು ಉನ್ನತ ಹುದ್ದೆಗೆ ಬೆಂಬಲಿಸಲು ಎಸ್‌ಎಲ್‌ಪಿಪಿ ಸದಸ್ಯರೊಂದಿಗೆ ಪ್ರಧಾನ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+