ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್, ಟ್ವಿಟ್ಟರ್ ಗೆ ರಿಯಾಯಿತಿ
ನವದೆಹಲಿ, ಸೆ.22: ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ ಆಧಾರದ ಮೇಲೆ ಹೊಸ ಗೂಢಲಿಪಿ ಕಾಯ್ದೆ (ನ್ಯಾಷನಲ್ ಎನ್ಕ್ರಿಪ್ಷನ್ ಪಾಲಿಸಿ) ಜಾರಿಗೆ ತರಲು ಮುಂದಾದ ಎನ್ ಡಿಎ ಸರ್ಕಾರಕ್ಕೆ ಆರಂಭಕ್ಕೆ ಹಿನ್ನಡೆಯಾಗಿದೆ. 90ದಿನಗಳ ಕಾಲ ಸಾಮಾಜಿಕ ಜಾಲ ತಾಣಗಳ ಮಾಹಿತಿ ಶೇಖರಣೆ ಹೇರಿಕೆಯನ್ನು ಹಿಂಪಡೆದುಕೊಂಡಿದೆ.
ಹೀಗಾಗಿ ವಾಟ್ಸಪ್, ಎಸ್ ಎಂಎಸ್, ಇ ಮೇಲ್, ಫೇಸ್ ಬುಕ್, ಟ್ವಿಟ್ಟರ್ ಸಂದೇಶಗಳನ್ನು 90 ದಿನಗಳವರೆಗೆ ಕಡ್ಡಾಯವಾಗಿ ಕಾಯ್ದಿಟ್ಟುಕೊಳ್ಳಬೇಕಾಗಿಲ್ಲ.
ಕೇಂದ್ರ ಸರ್ಕಾರವು ಸಂದೇಶಗಳನ್ನು ಕಾಯ್ದಿಟ್ಟುಕೊಂಡು ಭದ್ರತಾ ಸಂಸ್ಥೆಗೆ ಸಲ್ಲಿಸಲು ವಿಫಲರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಯೋಜನೆ ಹಾಕಿಕೊಂಡಿತ್ತು.ಈ ಕಾಯ್ದೆಯ ಪ್ರಕಾರ ಪ್ರತಿಯೊಬ್ಬರೂ ತಮ್ಮ ಗೂಢಲಿಪಿ ಕೀಲಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ಹೇಳಲಾಗಿತ್ತು. ಅದರೆ, ಆದೇಶವನ್ನು ಬದಲಿಸಿದ ಸರ್ಕಾರ ಕೆಲ ಸಾಮಾಜಿಕ ಜಾಲ ತಾಣಗಳನ್ನು ಪಟ್ಟಿಯಿಂದ ಕೈ ಬಿಟ್ಟಿದೆ.
ಸಾಮಾನ್ಯವಾಗಿ ವಾಟ್ಸಪ್, ವೈಬರ್, ಲೈನ್, ಹೈಕ್, ಗೂಗಲ್ ಚಾಟ್, ಯಾಹೂ ಮೆಸೆಂಜರ್ ಮುಂತಾದ ಸೇವೆಗಳು ಗೂಢಲಿಪಿಯನ್ನು ಬಳಕೆ ಮಾಡುತ್ತಿದ್ದು, ಭದ್ರತಾ ಸಂಸ್ಥೆಗಳು ಅಳಿಸಲ್ಪಟ್ಟ ಈ ಸಂದೇಶಗಳನ್ನು ಮತ್ತೆ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಗೂಢಲಿಪಿ ಬಳಸುವ ಎಲ್ಲಾ ಸಂದೇಶಗಳನ್ನು 90 ದಿನ ಕಾಯ್ದಿಟ್ಟುಕೊಳ್ಳುವುದು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕಾಯ್ದೆಯ ಕರಡು ಪ್ರತಿಯಲ್ಲಿ ತಿಳಿಸಲಾಗಿದೆ.

ನಿಯಮ ಜಾರಿಗೊಂಡರೆ ಏನಾಗಲಿದೆ?
ವಾಟ್ಸಪ್ ಸೇರಿದಂತೆ ಅನೇಕ ಚಾಟ್ ತಂತ್ರಾಂಶಗಳಿಂದ ನೀವು ನಡೆಸುವ ಸಂದೇಶಗಳನ್ನು ಕಡ್ಡಾಯವಾಗಿ ಸೇವ್ ಮಾಡಬೇಕಾಗುತ್ತದೆ. ಪೊಲೀಸರು ಅಥವಾ ಯಾವುದೇ ತನಿಖಾಧಿಕಾರಿಗಳು ಒಂದು ವೇಳೆ ನಿಮ್ಮಲ್ಲಿಗೆ ಬಂದರೆ ನೀವು 90 ದಿನಗಳ ಅವಧಿಯ ಎಲ್ಲಾ ಮೆಸೇಜ್ ಗಳನ್ನು ತೋರಿಸಲೇಬೇಕಾಗುತ್ತದೆ.
ಭಾರತದ ಹೊರಗಿನಿಂದ ಗೂಢಲಿಪಿ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಸಂದೇಶವಾಹಕ ಸಂಸ್ಥೆಗಳೂ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಬಳಕೆದಾರರಿಗೆ ಸ್ಟೋರೇಜ್ ಸ್ಪೇಸ್ ಸಮಸ್ಯೆ
ಒಂದು ವೇಳೆ 90 ದಿನಗಳ ಕಾಲ ಎಲ್ಲಾ ಸಂದೇಶಗಳನ್ನು ಸೇವ್ ಮಾಡಬೇಕಾಗಿ ಬಂದರೆ ಬಹುತೇಕ ಬಳಕೆದಾರರಿಗೆ ಸ್ಟೋರೇಜ್ ಸ್ಪೇಸ್ ಸಮಸ್ಯೆ ಎದುರಾಗಬಹುದು. ಅಲ್ಲದೆ ನಿಮ್ಮ ಖಾಸಗಿ ಸಂದೇಶಗಳು, ನಿಮ್ಮ ಸಂಗಾತಿಗೆ ಕಳಿಸಿದ ಪ್ರೀತಿ ಪ್ರೇಮ ಭರಿತ ಸಂದೇಶಗಳು ಕೂಡಾ ಅಧಿಕಾರಿಗಳ ಮುಂದಿಡಬೇಕಾಗುತ್ತದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಸಗಿ ಬದುಕಿನ ಮೇಲೆ ಸರ್ಕಾರ ಬೇಹುಗಾರಿಕೆ ನಡೆಸಿದಂತೆ ಆಗುತ್ತದೆ.

ನಿಮ್ಮ ಅಭಿಪ್ರಾಯ ಸರ್ಕಾರಕ್ಕೆ ತಿಳಿಸಿ
ಈ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಕರಡು ಪ್ರತಿ ಬಗ್ಗೆ ನಾಗರಿಕರು, ಸಂಘಟನೆಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ.
ಪ್ರಸ್ತಾವಿತ ನೀತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನೀವು ಅಕ್ಟೋಬರ್ 16ರವರೆಗೆ ದಾಖಲಿಸಬಹುದು. ನೀವು ನಿಮ್ಮ ಅಭಿಪ್ರಾಯ ತಿಳಿಸಬೇಕಾದ ಇ-ಮೇಲ್ ಐಡಿ: [email protected]
ಕರಡು ಪ್ರತಿ ಬಗ್ಗೆ ಹೆಚ್ಚಿನ ಮಾಹಿತಿ ಸರ್ಕಾರಿ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಆಸಕ್ತರು ಡೌನ್ ಲೋಡ್ ಮಾಡಿಕೊಳ್ಳಬಹುದು

ಈ ಕಾಯ್ದೆಯ ವ್ಯಾಪ್ತಿಗೆ ಎಲ್ಲರು ಒಳಪಡಬೇಕಾಗುತ್ತದೆ
* ಈ ಕಾಯ್ದೆಯ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಇಲಾಖೆಗಳು(ಕೇಂದ್ರ, ರಾಜ್ಯ, ಗುಪ್ತಚರ ಇಲಾಖೆ, ಏಜೆನ್ಸಿಗಳು)
* ಸ್ಥಾನಿಕ ಸಂಸ್ಥೆಗಳು, ಕಾರ್ಯಕಾರಿ ಸಂಸ್ಥೆ, ವಾಣಿಜ್ಯ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು
* ಪ್ರತಿಯೊಬ್ಬ ನಾಗರಿಕ ಮತ್ತು ಎಲ್ಲಾ ವಿಧದ ಅಧಿಕೃತ ಮತ್ತು ವೈಯಕ್ತಿಕ ಸಂವಹನಗಳು ಒಳಪಡಲಿವೆ.
ಶೇ 99.9ರಷ್ಟು ಜನಕ್ಕೆ ಪ್ಲೇನ್ ಟೆಕ್ಸ್ಟ್, ಮೆಸೇಜ್ ಶೇಖರಣೆ ಅಂದರೆ ಏನು ಗೊತ್ತ್ತಿಲ್ಲ, ಅಂಥವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂದು ಸೇವ್ ದಿ ಇಂಟರ್ನೆಟ್ ಸಂಸ್ಥೆಯ ನಿಖಿಲ್ ಪಾಹ್ವಾ ಪ್ರತಿಕ್ರಿಯಿಸಿದ್ದಾರೆ.

ಕಾಯ್ದೆಯಿಂದ ನಿರ್ಬಂಧ ಇಲ್ಲ
*ವಾಟ್ಸಪ್, ವೈಬರ್, ಲೈನ್, ಹೈಕ್, ಗೂಗಲ್ ಚಾಟ್, ಯಾಹೂ ಮೆಸೆಂಜರ್ ಮುಂತಾದ ಸೇವೆಗಳು ಗೂಢಲಿಪಿಯನ್ನು ಬಳಕೆ ಮಾಡುತ್ತಿದೆ.
* ಇಂಟರ್ ನೆಟ್* ಬ್ಯಾಂಕಿಂಗ್, ಇ ಕಾಮರ್ಶ್, ಪಾಸ್ ವರ್ಡ್ ಆಧಾರಿತ ನೆಟ್ ಸೇವೆಗಳು, ಆರ್ ಬಿಐ ಮಾನ್ಯತೆ ಪಡೆದ ಪೇಮೆಂಟ್ ಗೇಟ್ ವೇಗಳಿಗೆ ಈ ಕಾಯ್ದೆಯಿಂದ ನಿರ್ಬಂಧ ಇಲ್ಲ.
* ಭಾರತದ ಹೊರಗಿನಿಂದ ಗೂಢಲಿಪಿ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಸಂದೇಶವಾಹಕ ಸಂಸ್ಥೆಗಳು ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡುವುದು ಕಷ್ಟಕರವಾಗಲಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications