ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಹಿಂಸಾಚಾರ: ಇಂದು ಮರುಮತದಾನ, ಬೂತ್ಗಳಲ್ಲಿ ಬಿಗಿ ಭದ್ರತೆ!
ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಮತದಾನ ಅಸಿಂಧು ಎಂದು ಘೋಷಿಸಿದ ಬೂತ್ಗಳಲ್ಲಿ ಮರು ಮತದಾನ ಮಾಡಲು ಬಂಗಾಳ ರಾಜ್ಯ ಚುನಾವಣಾ ಆಯೋಗ ಭಾನುವಾರ ಆದೇಶಿಸಿದೆ. ಇದರ ಬೆನ್ನಲ್ಲೆ ಇಂದು ಮರುಮತದಾನ ನಡೆಯಲಿದ್ದು ಭಾರೀ ಬಿಗಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹಿಂಸಾಚಾರದಿಂದಾಗಿ ಅಸಿಂಧು ಎಂದು ಘೋಷಿಸಲಾಗಿದ್ದ ಪಂಚಾಯತ್ ಚುನಾವಣೆಗೆ ಇಂದು ಮರು ಮತದಾನ ನಡೆಯಲಿದ್ದು ಬೂತ್ಗಳಲ್ಲಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಖಾಕಿ ಕಣ್ಗಾವಲಿನಲ್ಲಿ ಮತದಾನ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರ ವಹಿಸಲಾಗಿದೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗಿದೆ.

ಭಾನುವಾರ ಸಂಜೆ ನಡೆದ ಸಭೆಯ ನಂತರ, ಗ್ರಾಮೀಣ ಚುನಾವಣೆಗೆ ಮತದಾನ ಅಸಿಂಧು ಎಂದು ಘೋಷಿಸಲಾದ ಎಲ್ಲಾ ಬೂತ್ಗಳಲ್ಲಿ ಸೋಮವಾರ (ಜುಲೈ 10) ಮರು ಮತದಾನ ನಡೆಯಲಿದೆ ಎಂದು ಎಸ್ಇಸಿ ಘೋಷಿಸಿತು. ಹಲವು ಸ್ಥಳಗಳಲ್ಲಿ ಮತದಾನದ ಮೇಲೆ ಪರಿಣಾಮ ಬೀರಿದ ಮತಗಟ್ಟೆಗಳಲ್ಲಿ ಹಿಂಸಾಚಾರದ ವರದಿಗಳನ್ನು ಪರಿಶೀಲಿಸಿದ ನಂತರ SEC ಈ ಆದೇಶವನ್ನು ಅಂಗೀಕರಿಸಿದೆ.
Congress MP Adhir Ranjan Chowdhury writes to West Bengal State Election Commission expressing concern over the violent situation in the State during the Panchayat elections and requests to ensure law & order during the re-polling for Panchayat elections on July 10. pic.twitter.com/l9AkAVKBqg
— ANI (@ANI) July 9, 2023
ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಗ್ರಾಮೀಣ ಚುನಾವಣೆಗೆ ಮತದಾನ ಅಸಿಂಧು ಎಂದು ಘೋಷಿಸಲಾದ 697 ಬೂತ್ಗಳಲ್ಲಿ ಮರು ಮತದಾನ ನಡೆಯಲಿದೆ. ಜಿಲ್ಲೆಗಳಲ್ಲಿ ಮುರ್ಷಿದಾಬಾದ್ ಅತಿ ಹೆಚ್ಚು ಮರುಮತದಾನದ 174 ಬೂತ್ಗಳನ್ನು ಹೊಂದಿದೆ. ನಂತರ 110 ಮಾಲ್ಡಾದ ಬೂತ್ಗಳಲ್ಲಿ ಮರು ಮತದಾನವನ್ನು ಘೋಷಿಸಲಾಗಿದೆ.
ಮರು ಮತದಾನದ ಘೋಷಣೆಯ ನಂತರ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂಸಾತ್ಮಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಚುನಾವಣೆಯ ಮರು ಮತದಾನದ ಸಮಯದಲ್ಲಿ (ಜುಲೈ 10) ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ವಿನಂತಿಸಿದ್ದಾರೆ.
ನವದೆಹಲಿಗೆ ಹಾರಿದ WB ಗವರ್ನರ್
ಶನಿವಾರ ನಡೆದ ಪಂಚಾಯತ್ ಚುನಾವಣೆ ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯದ ಹಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಬೋಸ್ ಭಾನುವಾರ ನವದೆಹಲಿಗೆ ತೆರಳಿದ್ದು, ಅಮಿತ್ ಶಾ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಅಧಿಕಾರಿಯೊಬ್ಬರ ಪ್ರಕಾರ, ಶಾ ಮತ್ತು ಬೋಸ್ ಶನಿವಾರ ವಿವಿಧ ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ 15 ಜನ ಸಾವು ಹಾಗೂ ರಾಜ್ಯದಲ್ಲಿ ಹಿಂಸಾಚಾರದ ಬಗ್ಗೆ ವಿವರವಾದ ಸಭೆ ನಡೆಸಲಿದ್ದಾರೆ.
ರಾಜ್ಯಪಾಲರು ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ
"ರಾಜ್ಯಪಾಲರು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಶನಿವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯ ವರದಿಯನ್ನು ಸಲ್ಲಿಸಲಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ವರದಿ ಸಿದ್ಧಪಡಿಸಿದ ಬೋಸ್
ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ರಾಜ್ಯಪಾಲರು ತಮ್ಮ ಅಭಿಪ್ರಾಯಗಳ ಕುರಿತು ಹಿಂಸಾಚಾರದ ವರದಿಯನ್ನು ಸಿದ್ಧಪಡಿಸಿದ್ದಾರೆ ಮತ್ತು ಸೋಮವಾರ ಬೆಳಿಗ್ಗೆ ಗೃಹ ಸಚಿವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮತದಾನದ ದಿನದಂದು ಉತ್ತರ 24 ಪರಗಣ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಬೋಸ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.












Click it and Unblock the Notifications