Get Updates
Get notified of breaking news, exclusive insights, and must-see stories!

ಮೊದಲ ಬಾರಿ ಕೇದಾರನಾಥ, ಬದರಿನಾಥ ಧಾಮದಲ್ಲಿ ವಿಐಪಿ ಯಾತ್ರಿಕರಿಗೆ ದರ್ಶನಕ್ಕಾಗಿ ಹೆಚ್ಚುವರಿ ಶುಲ್ಕ

ಡೆಹ್ರಾಡೂನ್, ಮಾರ್ಚ್. 29: ಚಾರ್‌ ಧಾಮ್ ಯಾತ್ರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿಐಪಿ ಯಾತ್ರಿಕರು ಕೇದಾರನಾಥ ಮತ್ತು ಬದರಿನಾಥ ಧಾಮದಲ್ಲಿ ದರ್ಶನಕ್ಕಾಗಿ 300 ರೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಘೋಷಿಸಿದೆ.

ದೇಶದ ನಾಲ್ಕು ಪ್ರಮುಖ ದೇವಾಲಯಗಳಾದ ತಿರುಪತಿ ಬಾಲಾಜಿ, ವೈಷ್ಣೋದೇವಿ, ಮಹಾಕಾಳೇಶ್ವರ ಮತ್ತು ಸೋಮನಾಥ ದೇವಾಲಯಗಳಲ್ಲಿ 'ಪೂಜಾ ವ್ಯವಸ್ಥೆ' ಮತ್ತು ದರ್ಶನ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದ ನಂತರ, ಬದರಿನಾಥ್ ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಚಾರ್‌ ಧಾಮ್ ಯಾತ್ರೆಯಲ್ಲಿ ವಿಐಪಿ ಭಕ್ತರಿಗೆ ಶುಲ್ಕ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

VIP Pilgrims Have to Pay Rs 300 for Darshan At Kedarnath And Badrinath Dham

ಇದಲ್ಲದೇ ಕೇದಾರನಾಥ ದೇವಾಲಯದಲ್ಲಿ 100 ಕೆಜಿ ತೂಕದ ಅಷ್ಟಧಾತುಗಳಿಂದ ತಯಾರಿಸಿದ ತ್ರಿಶೂಲವನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆನಾಲ್ ರೋಡ್ ಕಚೇರಿಯಲ್ಲಿ ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೇದಾರನಾಥ ಮತ್ತು ಬದರಿನಾಥ ಧಾಮದ ಯಾತ್ರೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಮುಂಬರುವ ಹಣಕಾಸು ವರ್ಷ 2023-24ಕ್ಕೆ 76.26 ಕೋಟಿ ರೂ.ಗಳ ಬಜೆಟ್ ಅನ್ನು ಸಭೆ ಅಂಗೀಕರಿಸಿದೆ. ಇದಲ್ಲದೇ ಚಾರ್‌ ಧಾಮ್ ಯಾತ್ರೆಯ ಕ್ರಿಯಾ ಯೋಜನೆಗೂ ಅನುಮೋದನೆ ನೀಡಲಾಯಿತು. "ಈ ಶುಲ್ಕವನ್ನು ವಿಐಪಿ ಯಾತ್ರಿಕರಿಗೆ ಮಾತ್ರ ವಿಧಿಸಲಾಗುತ್ತದೆ. ಸಾಮಾನ್ಯ ಯಾತ್ರಿಕರ ಸಮಯ ಮತ್ತು ಲೈನ್‌ಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

VIP Pilgrims Have to Pay Rs 300 for Darshan At Kedarnath And Badrinath Dham

ದೇಶದ ಇತರ ಯಾತ್ರಾ ಸ್ಥಳಗಳಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ನಂತರ, ಈ ನಿರ್ಧಾರವು ಉತ್ತರಾಖಂಡಕ್ಕೆ ತುಲನಾತ್ಮಕವಾಗಿ ಉತ್ತಮವಾಗಿದೆ ಎಂದು ಕಂಡು ಬಂದಿದೆ. ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿದ ನಂತರ ಬಂದ ಒಮ್ಮತದ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮತ್ತಷ್ಟು ವಿವರಗಳನ್ನು ನೀಡಿದ್ದಾರೆ.

ವಿಐಪಿ ಭಕ್ತರನ್ನು ವ್ಯಾಖ್ಯಾನಿಸುತ್ತಾ, ಬದ್ರಿ ಕೇದಾರ್ ದೇವಾಲಯ ಸಮಿತಿಯ ಸಿಇಒ ಯೋಗೇಂದ್ರ ಸಿಂಗ್ , "ಪ್ರೋಟೋಕಾಲ್ ಅಡಿಯಲ್ಲಿ, ವಿಐಪಿ ಅಥವಾ ವಿಶೇಷ ವ್ಯಕ್ತಿಗಳ ವರ್ಗಕ್ಕೆ ಸೇರುವ ಮತ್ತು ಅವರ ಸಂಸ್ಥೆಯಿಂದ ವ್ಯಾಖ್ಯಾನಿಸಲಾದ ಯಾವುದೇ ವ್ಯಕ್ತಿಯನ್ನು ಬಿಕೆಟಿಸಿ ವಿಐಪಿ ಎಂದು ಪರಿಗಣಿಸಲಾಗುತ್ತದೆ. ಶಿಷ್ಟಾಚಾರದ ಪ್ರಕಾರ, ಬಿಕೆಟಿಸಿ ಸಿಬ್ಬಂದಿ ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ದರ್ಶನಕ್ಕೆ ಬರುವ ವಿಐಪಿಗಳಿಗೆ ಪ್ರಸಾದ ವಿತರಣೆ ಇತ್ಯಾದಿಗಳನ್ನು ನೋಡಿಕೊಳ್ಳುತ್ತಾರೆ. ಇದರಿಂದ ವಿಐಪಿ ಸೌಲಭ್ಯದ ಹೆಸರಿನಲ್ಲಿ ಅವ್ಯವಸ್ಥೆ ಉಂಟಾಗುವುದಿಲ್ಲ. ಈ ಕೆಲಸವನ್ನು ಪೊಲೀಸರು, ಆಡಳಿತ, ಬಿಕೆಟಿಸಿ ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತವೆ" ಎಂದಿದ್ದಾರೆ.

"ಭಕ್ತರು ದೇವಸ್ಥಾನಕ್ಕೆ ಯಾವುದೇ ದೇಣಿಗೆ ಅಥವಾ ಕಾಣಿಕೆಗಳನ್ನು ನೀಡಿದರೂ, ಸಂಬಳ ಪಡೆಯುವ ಅರ್ಚಕರು ಮತ್ತು ಬಿಕೆಟಿಸಿಯ ಸಿಬ್ಬಂದಿ ಅದನ್ನು ಸ್ವೀಕರಿಸುವುದಿಲ್ಲ. ಪೂಜಾ ವ್ಯವಸ್ಥೆಗೆ ಸಂಬಂಧಿಸಿದ ಸಿಬ್ಬಂದಿ ಭಕ್ತರನ್ನು ಕಾಣಿಕೆ ಪೆಟ್ಟಿಗೆಯಲ್ಲಿ ದೇಣಿಗೆ ಹಾಕಲು ಪ್ರೇರೇಪಿಸುತ್ತಾರೆ. ಇಲ್ಲದಿದ್ದರೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನಗಳಲ್ಲಿ ಕಾಣಿಕೆ ಎಣಿಕೆಗೆ ಪಾರದರ್ಶಕ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಎರಡೂ ಧಾಮಗಳಲ್ಲಿ ಪಾರದರ್ಶಕ ಗಾಜಿನ ಗುಡಿಸಲುಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು" ಎಂದು ಸಿಇಒ ಯೋಗೇಂದ್ರ ಸಿಂಗ್ ಹೇಳಿದ್ದಾರೆ.

ಇನ್ನು, ಏಪ್ರಿಲ್ 25 ರಂದು ಕೇದಾರನಾಥ ಧಾಮದ ದ್ವಾರಗಳು ತೆರೆಯಲಿದ್ದು, ಐಆರ್‌ಸಿಟಿಸಿ ಶೀಘ್ರದಲ್ಲೇ ದೇವಸ್ಥಾನಕ್ಕೆ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಬುಕಿಂಗ್ ಅನ್ನು ಪ್ರಾರಂಭಿಸಲಿದೆ. ಯಾತ್ರಾರ್ಥಿಗಳು ಈಗ ತಮ್ಮ ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಹೆಲಿಕಾಪ್ಟರ್ ಬುಕಿಂಗ್ ಏಪ್ರಿಲ್ 1 ರಿಂದ ತೆರೆಯುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+