Vande Bharat Express: ಬೆಂಗಳೂರಿನಿಂದ ಮತ್ತೊಂದು ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಸಂಚಾರ?, ಅಪ್ಟೇಟ್ಸ್
Vande Bharat Express Train: ದೇಶದ ರೈಲ್ವೆ ಪ್ರಯಾಣಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವಿಸ್ತರಣೆ, ಹೊಸ ಮಾರ್ಗದಲ್ಲಿ ಕಾರ್ಯಾಚರಣೆ ಉಪಕ್ರಮ ಮುಂದುವರಿದಿದೆ. ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮತ್ತೊಂದು ಹೊಸ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಿದೆ. ಈ ಭಾಗದ ಜನರ ಬಹುದಿನಗಳ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ.
ರಾಜಧಾನಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಪ್ರಮುಖ ಪಟ್ಟಣವಾದ ವಿಜಯವಾಡಕ್ಕೆ (Bengaluru-Vijayawada Vande Bharat Express Train) ಹೊಸ ವಂದೇ ಭಾರತ್ ರೈಲು ಸೇವೆ ಎದುರು ನೋಡಲಾಗುತ್ತಿದೆ. ಈ ವರ್ಷದ ಆರಂಣಭದಲ್ಲೇ ಈ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ ಎನ್ನಲಾಗಿತ್ತು, ಆದರೆ ಆಗಿರಲಿಲ್ಲ. ದಕ್ಷಿಣ ಮಧ್ಯ ರೈಲ್ವೆ (SCR) ಮೂಲಗಳ ಪ್ರಕಾರ ಮುಂದಿನ ಡಿಸೆಂಬರ್ 10 ರಂದು ವಿಜಯವಾಡ ಮತ್ತು ಬೆಂಗಳೂರು ನಡುವೆ ತಿರುಪತಿ ಮೂಲಕ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಪ್ರಾರಂಭಿಸುವ ನಿರೀಕ್ಷೆ ಇದೆ.

ಈ ರೈಲು ವಾರದಲ್ಲಿ ಆರು ದಿನ ನಿತ್ಯ ಸಂಚಾರ ಮಾಡಲಿದೆ. ತಿರುಪತಿ ಸೇರಿದಂತೆ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ. ಇದರಿಂದ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೂ ಅನುಕೂಲವಾಗಲಿದೆ. ವಿಜಯವಾಡ-ಬೆಂಗಳೂರು ರೈಲು (20711) ಪ್ರಯಾಣಿಕರಿಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯು ಎರಡು ಪ್ರಮುಖ ನಗರಗಳ ಮಧ್ಯ ಅತ್ಯಾಧುನಿಕ ವಂದೇಭಾರತ್ ಎಕ್ಸ್ಪ್ರೆಸ್ ಸೇವೆ ಪರಿಚಯಿಸುವ ಉಪಕ್ರಮವನ್ನು ಅಂತಿಮಗೊಳಿಸಿದೆ. ಒಟ್ಟು ಒಂಬತ್ತು ಗಂಟೆಗಳ ಜರ್ನಿ ಇದಾಗಿರಲಿದೆ. ಇತರ ರೈಲುಗಳಿಗಿಂತ ಈ ರೈಲಿನಲ್ಲಿ ಆರಾಮದಾಯಕ, ವಿಶೇಷ ಮತ್ತು ಐಶಾರಾಮಿ ಅನುಭವ ಪ್ರಯಾಣಿಕರಿಗೆ ಸಿಗಲಿದೆ. ಈ ಭಾಗದ ಸಾರಿಗೆ, ಕೈಗಾರಿಕೆ, ಶಿಕ್ಷಣ ಮುಖ್ಯವಾಗಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ.
ಸದ್ಯಕ್ಕೆ ಕಡಿಮೆ ಬೋಗಿಗಳೊಂದಿಗೆ ಸಂಚಾರ
ಅರಂಭದಲ್ಲಿ ಈ ರೈಲು ಒಟ್ಟು 08 ಬೋಗಿಗಳೊಂದಿಗೆ ಸಂಚಾರ ಸೇವೆ ಆರಂಭಿಸಲಿದೆ. ಅದರಲ್ಲಿ ಏಳು ಎಸಿ ಚೇರ್ ಕಾರ್ಗಳು ಮತ್ತು ಒಂದು ಎಕ್ಸಿಕ್ಯುಟಿವ್ ಚೇರ್ ಕಾರ್ ಇರಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಭವಿಷ್ಯದಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿಸಲೂಬಹುದು.
ಬೆಂಗಳೂರು-ವಿಜಯವಾಡ ವಿಬಿ ರೈಲು ವೇಳಾಪಟ್ಟಿ
ವಿಜಯವಾಡದಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20711) ಬೆಳಗ್ಗೆ 5:15 ಗಂಟೆಗೆ ವಿಜಯವಾಡದಿಂದ ಹೊಡುತ್ತದೆ. ಅದೇ ದಿನ ಮಧ್ಯಾಹ್ನ 15 ಕ್ಕೆ SMVT ಬೆಂಗಳೂರು ನಿಲ್ದಾಣಕ್ಕೆ ಬಂದು ಸೇರುತ್ತದೆ. ಮಾರ್ಗ ಮಧ್ಯದಲ್ಲಿ ತೆನಾಲಿ (5:39ಕ್ಕೆ) ಓಂಗೋಲ್ (6:28ಕ್ಕೆ), ನೆಲ್ಲೂರು (7:43ಕ್ಕೆ), ತಿರುಪತಿ (9:45ಕ್ಕೆ), ಚಿತ್ತೂರು (10:27), ಕಟ್ಪಾಡಿ (11:13) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಮಧ್ಯಾಹ್ನ 1:38 ಗಂಟೆಗೆ ಕೆ.ಆರ್.ಪುರಂ ಹಾದು ಬೆಂಗಳೂರಿಗೆ ಬರಲಿದೆ.
ಬೆಂಗಳೂರಿನಿಂದ ವಿಜಯವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20712) ಅದೇ ದಿನ ಮಧ್ಯಾಹ್ನ 2:45 ಗಂಟೆಗೆ ರಾಜಧಾನಿಯಿಂದ ಪ್ರಯಾಣ ಆರಂಭಿಸಿ ರಾತ್ರಿ 11:45 ಕ್ಕೆ ವಿಜಯವಾಡ ತಲುಪುತ್ತದೆ. ಮಾರ್ಗ ಮಧ್ಯ ಕೃಷ್ಣರಾಜಪುರಂ (ಮಧ್ಯಾಹ್ನ 2:58ಕ್ಕೆ), ಕಟ್ಪಾಡಿ (ಸಂಜೆ 5:23ಕ್ಕೆ), ಚಿತ್ತೂರು (5:49), ತಿರುಪತಿ (6:55), ನೆಲ್ಲೂರು (ರಾತ್ರಿ 8:18ಕ್ಕೆ), ಓಂಗೋಲ್ (ರಾತ್ರಿ 9:29), ತೆನಾಲಿ (ರಾತ್ರಿ 10:42) ನಲ್ಲಿ ನಿಲುಗಡೆ ನೀಡಿ ರಾತ್ರಿ 11:45ಕ್ಕೆ ವಿಜಯವಾಡ ತಲುಪುತ್ತದೆ. ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಸೇವೆ ಅಧಿಕೃತವಾಗುತ್ತಿದ್ದಂತೆ ರೈಲ್ವೆ ಇಲಾಖೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಿದೆ.
ಹಾಲಿ ಬೆಂಗಳೂರಿಗೆ ವಿಜಯವಾಡದಿಂದ ಏಕೈಕ ನೇರ ರೈಲು ಆಯ್ಕೆಯೆಂದರೆ ಮಚಲಿಪಟ್ನಂ-ಯಶವಂತಪುರ ಕೊಂಡವೀಡು ಎಕ್ಸ್ಪ್ರೆಸ್ ರೈಲು. ಈ ರೈಲು ವಾರದಲ್ಲಿ ಮೂರು ಸಲ ಕಾರ್ಯಾಚರಣೆ ಮಾಡುತ್ತುದೆ. ಇದರೊಂದಿಗೆ ಇದೇ ಡಿಸೆಂಬರ್ ಇಲ್ಲವೇ 2026ರ ಜನವರಿಗೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭಿಸುವ ನಿರೀಕ್ಷೆಗಳು ಇವೆ.
-
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ












Click it and Unblock the Notifications