ಗುಜರಾತ್ : ವಡೋದರಾದಲ್ಲಿ ಪಾನಿಪೂರಿ ಮಾರಾಟ ನಿಷೇಧ!
ಗಾಂಧಿನಗರ, ಜುಲೈ 27 : ಸಂಜೆಯ ರಸ್ತೆ ಬದಿಯಲ್ಲಿ ನಿಂತು ಪಾನಿಪೂರಿ, ಮಸಾಲೆ ಪೂರಿ ಸವಿಯುವುದೇ ಒಂದು ಸಂತಸದ ವಿಷಯ. ಆದರೆ, ಗುಜರಾತ್ನ ವಡೋದರದಲ್ಲಿ ಪಾನಿಪೂರಿ ಮಾರಾಟವನ್ನು ನಿಷೇಧಿಸಲಾಗಿದೆ.
ಸ್ಥಳೀಯ ಜನರ ಹಿತದೃಷ್ಟಿಯಿಂದ ವಡೋದರಾದ ಮುನ್ಸಿಪಲ್ ಕಾರ್ಪೊರೇಷನ್ ಇಂತಹ ನಿರ್ಧಾರವನ್ನು ಕೈಗೊಂಡಿದೆ. ಪಾನಿಪೂರಿ, ಮಸಾಲೆ ಪೂರಿ ಮುಂತಾದವುಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಪಾನಿಪುರಿಯ ಮಸಾಲೆ ನೀರಿಗೆ ಈತ ಬೆರೆಸುತ್ತಿದ್ದ ಟಾಯ್ಲೆಟ್ ಕ್ಲೀನರ್!
ಅವೈಜ್ಞಾನಿಕವಾಗಿ, ಯಾವುದೇ ಶುಚಿತ್ವವಿಲ್ಲದೇ ಪಾನಿಪೂರಿ ತಯಾರು ಮಾಡಲಾಗುತ್ತಿತ್ತು. ಇದರಿಂದ ಜನರ ಆರೋಗ್ಯದ ಹದಗೆಡಲಿದೆ, ಆದ್ದರಿಂದ ಮಾರಾಟಕ್ಕೆ ತಡೆ ನೀಡಿದ್ದು, ಪಾನಿಪೂರಿ ತಯಾರಿಕಾ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ನೂರಾರು ಜನರು ಪಾನಿಪೂರಿ, ಮಸಾಲೆಪೂರಿ ಮುಂತಾದವುಗಳನ್ನು ಸವಿಯುತ್ತಿದ್ದರು. ಇದರಿಂದ ಜನರ ಆರೋಗ್ಯ ಹದಗೆಡುತ್ತಿತ್ತು. ಆದ್ದರಿಂದ ಪಾನಿಪೂರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ
ವಡೋದರಾದ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ಘಟಕ ನಗರದ ವಿವಿಧ ಕಡೆ ದಾಳಿ ನಡೆಸಿದ್ದು, ಪಾನಿಪೂರಿ ತಯಾರು ಮಾಡುತ್ತಿದ್ದ ಕಚ್ಚಾ ವಸ್ತಗಳನ್ನು ನಾಶ ಪಡಿಸಿದೆ. ಹಲವು ಲೀಟರ್ ಪಾನಿಯನ್ನು ಚರಂಡಿಗೆ ಸುರಿದಿದೆ.
ಆರೋಗ್ಯ ಘಟಕದ ಅಧಿಕಾರಿಗಳು ಸುಮಾರು 4 ಸಾವಿರ ಕೆಜಿ ಪೂರಿ, 3500 ಕೆಜಿ ಆಲೂಗೆಡ್ಡೆಯನ್ನು ವಶಕ್ಕೆ ಪಡೆದುಕೊಂಡಿದೆ. ಮಳೆಗಾಲ ಮುಗಿಯುವ ತನಕ ಪಾನಿಪೂರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.