Bengaluru- Chennai ಸೇರಿ ಭಾರತದಲ್ಲಿ ಮುಂಬರುವ ಎಕ್ಸ್ಪ್ರೆಸ್ವೇಗಳು: ಅಂಕಿಅಂಶ, ಮಾಹಿತಿ, ವಿವರ, ಮಾರ್ಗ ತಿಳಿಯಿರಿ
2025 ರ ವೇಳೆಗೆ ಭಾರತವು 1.8 ಲಕ್ಷ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಲಿದೆ. ಮುಂಬರುವ ಪ್ರಮುಖ ಎಕ್ಸ್ಪ್ರೆಸ್ವೇ ಯೋಜನೆಗಳ ಬಗ್ಗೆ ಇಲ್ಲಿ ತಿಳಿಯಿರಿ.
ನವದೆಹಲಿ, ಮಾರ್ಚ್ 16: 2025 ರ ವೇಳೆಗೆ ಭಾರತವು 1.8 ಲಕ್ಷ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಲಿದೆ. ಇದು ದೇಶಾದ್ಯಂತ ನಿಮ್ಮ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ದೇಶದ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಭಾರತದಲ್ಲಿ ಮುಂಬರುವ ಎಕ್ಸ್ಪ್ರೆಸ್ವೇ ಯೋಜನೆಗಳ ಕುರಿತು ತಿಳಿಯಲು ಈ ವರದಿಯನ್ನು ಓದಿ. ಇಲ್ಲಿ ಅಂಕಿಅಂಶ, ಮಾಹಿತಿ, ವಿವರಗಳನ್ನು ನೀಡಲಾಗಿದೆ.

ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇದು ಪೂರ್ಣಗೊಂಡರೆ, ದೇಶದ ಎರಡು ಮಹಾನಗರಗಳ ನಡುವಿನ ಪ್ರಯಾಣದ ಸಮಯ ಕೇವಲ 12 ಗಂಟೆಗಳಾಗಲಿದೆ. ಇದು ದೆಹಲಿ ಮತ್ತು ಗೋವಾ ನಡುವಿನ ಅಂತರವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
ಇದು ಈ ಮಾರ್ಗದ ಮತ್ತೊಂದು ಪ್ರಮುಖ ಅಂಶವಾಗಿದೆ. ದಾಖಲೆಗಳ ಪ್ರಕಾರ, ದೆಹಲಿ ಮತ್ತು ಗೋವಾ ನಡುವಿನ ಪ್ರಸ್ತುತ ಪ್ರಯಾಣದ ಸಮಯವು ರಸ್ತೆಯ ಮೂಲಕ ಸುಮಾರು 35 ಗಂಟೆಗಳಾಗಿವೆ. ದೆಹಲಿ, ಮುಂಬೈ ಮತ್ತು ಗೋವಾದಲ್ಲಿ ಹೊಸ ಎಕ್ಸ್ಪ್ರೆಸ್ವೇ ಕಾರ್ಯಾರಂಭ ಮಾಡಿದ ನಂತರ, ದೆಹಲಿ ಮತ್ತು ಗೋವಾ ನಡುವಿನ ಪ್ರಯಾಣದ ಸಮಯವನ್ನು 15 ಗಂಟೆಗಳಿಗೆ ಕಡಿತಗೊಳಿಸಬಹುದಾಗಿದೆ.

ಮುಂಬೈ- ನಾಗ್ಪುರ ಎಕ್ಸ್ಪ್ರೆಸ್ವೇ
ಈ ಎಕ್ಸ್ಪ್ರೆಸ್ವೇ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮುಂಬೈನಿಂದ ನಾಗ್ಪುರದ ದೂರವನ್ನು ಕೇವಲ 8 ಗಂಟೆಗಳಲ್ಲಿ ಕ್ರಮಿಸಲು ಜನರಿಗೆ ಸಹಾಯ ಮಾಡುತ್ತದೆ. ಈ ಮಾರ್ಗವು ಸುಮಾರು 701 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, 10 ಜಿಲ್ಲೆಗಳು ಮತ್ತು ಸುಮಾರು 390 ಹಳ್ಳಿಗಳನ್ನು ಸಂಪರ್ಕಿಸುತ್ತದೆ.
ಕಲ್ಯಾಣ್, ನಾಗ್ಪುರ, ನಾಸಿಕ್, ವಾರ್ಧಾ, ಭಿವಂಡಿ, ಔರಂಗಾಬಾದ್ ಮತ್ತು ಶಿರಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳಗಳು ಈ ಮಾರ್ಗದಲ್ಲಿ ಬರಲಿವೆ. ಮಾರ್ಗವು ಸುಮಾರು 5 ಫ್ಲೈಓವರ್ಗಳು, 33 ಪ್ರಮುಖ ಸೇತುವೆಗಳು, 25 ಇಂಟರ್ಚೇಂಜ್ಗಳು, 189 ಅಂಡರ್ಪಾಸ್ಗಳು, 6 ಸುರಂಗಗಳು, ಲಘು ವಾಹನಗಳಿಗೆ 110 ಅಂಡರ್ಪಾಸ್ಗಳು ಮತ್ತು ಪ್ರಾಣಿಗಳು ಮತ್ತು ಪಾದಚಾರಿಗಳಿಗೆ 209 ಅಂಡರ್ಪಾಸ್ಗಳನ್ನು ಹೊಂದಿರುತ್ತದೆ.

ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ
ಇದು ದಕ್ಷಿಣ ಭಾರತದಲ್ಲಿ ಮುಂಬರುವ ಪ್ರಮುಖ ಎಕ್ಸ್ಪ್ರೆಸ್ವೇ ಆಗಿದೆ. ಈ ನಾಲ್ಕು-ಪಥದ ಎಕ್ಸ್ಪ್ರೆಸ್ವೇ ದಕ್ಷಿಣ ಭಾರತದ ಎರಡು ರಾಜಧಾನಿ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಮಾರ್ಗವು 260 ಕಿಲೋಮೀಟರ್ಗಳಾಗಿದ್ದು, ಕರ್ನಾಟಕದ ಹೊಸಕೋಟೆ ಮತ್ತು ಬಂಗಾರಪೇಟೆ, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು, ಹಾಗೂ ತಮಿಳುನಾಡಿನ ಶ್ರೀಪೆರಂಬದೂರ್ ಮೂಲಕ ಹಾದು ಹೋಗುತ್ತದೆ.

ದೆಹಲಿ- ಅಮೃತಸರ- ಕತ್ರಾ ಎಕ್ಸ್ಪ್ರೆಸ್ವೇ
ದೆಹಲಿ- ಅಮೃತಸರ- ಕತ್ರಾ ಎಕ್ಸ್ಪ್ರೆಸ್ವೇ 650 ಕಿ.ಮೀ ವರೆಗೆ ವ್ಯಾಪಿಸಿದೆ. ದೆಹಲಿಯ ಬಹದ್ದೂರ್ಗಢ್ ಗಡಿಯ ಮೂಲಕ ಜಮ್ಮುವಿನ ಕತ್ರಾಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಎಕ್ಸ್ಪ್ರೆಸ್ವೇ ಕಾರ್ಯಾರಂಭ ಮಾಡಿದ ಬಳಿಕ, ಅಮೃತಸರ, ನೋಕದಾರ್ ಮತ್ತು ಗುರುದಾಸ್ಪುರದಂತಹ ನಗರಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.
ಇವು ಪ್ರಮುಖ ನಗರಗಳೂ ಹೌದು. ಇದಲ್ಲದೆ, ಈ ನಾಲ್ಕು-ಲೇನ್ ಎಕ್ಸ್ಪ್ರೆಸ್ವೇ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇದು ವೈಷ್ಣೋ ದೇವಿ ದೇವಸ್ಥಾನ ಮತ್ತು ಗೋಲ್ಡನ್ ಟೆಂಪಲ್ ಸೇರಿದಂತೆ ಯಾತ್ರಿಕ ಸ್ಥಳಗಳನ್ನು ಸಂಪರ್ಕಿಸುತ್ತದೆ.

ರಾಯ್ಪುರ- ವಿಶಾಖಪಟ್ಟಣಂ ಎಕ್ಸ್ಪ್ರೆಸ್ವೇ
ರಾಯ್ಪುರ- ವಿಶಾಖಪಟ್ಟಣಂ ಎಕ್ಸ್ಪ್ರೆಸ್ವೇ, ರಾಯ್ಪುರ- ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್ನ ಒಂದು ಭಾಗವಾಗಿದೆ. ಈ ಆರು-ಪಥದ ಎಕ್ಸ್ಪ್ರೆಸ್ವೇ 464 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಮಧ್ಯ ಮತ್ತು ಪೂರ್ವ-ಮಧ್ಯ ಭಾರತದಲ್ಲಿ ಒಡಿಶಾ, ಛತ್ತೀಸ್ಗಢ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಎಲ್ಲವೂ ಸರಿಯಾಗಿ ನಡೆದರೆ, ಈ ಮಾರ್ಗವು 2025 ರ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯಿದೆ.

ಗಂಗಾ ಎಕ್ಸ್ಪ್ರೆಸ್ವೇ
ಇದು 6-ಲೇನ್ ಎಕ್ಸ್ಪ್ರೆಸ್ವೇ ಆಗಿದ್ದು, ಬುಲಂದ್ಶಹರ್, ಹಾಪುರ್, ಸಂಭಾಲ್, ಅಮ್ರೋಹಾ, ಬದೌನ್, ಷಹಜಹಾನ್ಪುರ, ಉನ್ನಾವೋ, ಹರ್ದೋಯಿ, ರಾಯ್ಬರೇಲಿ ಮತ್ತು ಪ್ರತಾಪ್ಗಢ ಸೇರಿದಂತೆ 12 ನಗರಗಳ ಮೂಲಕ 94 ಕಿಮೀ ಉದ್ದದ ಕಾರಿಡಾರ್ ಅನ್ನು ಒಳಗೊಂಡಿದೆ.
ಕುತೂಹಲಕಾರಿ ಅಂಶವೆಂದರೆ ಈ ಎಕ್ಸ್ಪ್ರೆಸ್ವೇ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ, ಪ್ರಯಾಗರಾಜ್-ವಾರಣಾಸಿ ಎಕ್ಸ್ಪ್ರೆಸ್ವೇ ಮತ್ತು ಮೀರತ್-ಹರಿದ್ವಾರ ಹೆದ್ದಾರಿಯೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ. ಎಲ್ಲವೂ ಯೋಜನೆಯಂತೆ ನಡೆದರೆ, ಈ ಎಕ್ಸ್ಪ್ರೆಸ್ವೇ 2025 ರ ಮಹಾಕುಂಭದ ಮೊದಲು ಪೂರ್ಣಗೊಳ್ಳುತ್ತದೆ. ಆಗ್ರಾ ಎಕ್ಸ್ಪ್ರೆಸ್ವೇ ಮತ್ತು ಯಮುನಾ ಎಕ್ಸ್ಪ್ರೆಸ್ವೇ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications