Get Updates
Get notified of breaking news, exclusive insights, and must-see stories!

ಯುಪಿ: ರಹಸ್ಯ ಬಯಲಾಗುವ ಭೀತಿ- ಅತೀಕ್‌ ಹತ್ಯೆಯ ಹಿಂದೆ ವಿರೋಧ ಪಕ್ಷಗಳ ಕೈವಾಡ- ಯುಪಿ ಸಚಿವರ ಆರೋಪ

ಲಕ್ನೋ ಏಪ್ರಿಲ್ 23: ಕೆಲವು ರಹಸ್ಯಗಳು ಬಯಲಾಗುವ ಭಯದಿಂದ ವಿರೋಧ ಪಕ್ಷಗಳು ಅತೀಕ್‌ನನ್ನು ಕೊಂದಿವೆ ಎಂದು ಯುಪಿ ಸಚಿವರೊಬ್ಬರು ಆರೋಪ ಮಾಡಿದ್ದಾರೆ. ಚಂಡೌಸಿ ನಗರ ಚುನಾವಣೆಗಾಗಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಪಾಲ್ ಸಿಂಗ್ ವಿಪಕ್ಷಗಳ ವಿರುದ್ಧ ಹಲವು ಆರೋಪ ಮಾಡಿದರು.

ಕ್ರಿಮಿನಲ್ ಅತಿಕ್ ಅಹ್ಮದ್ ಅವರ ಹತ್ಯೆಯಲ್ಲಿ ಪ್ರತಿಪಕ್ಷಗಳ ಕೈವಾಡವಿದೆ ಎಂದು ಭಾನುವಾರ ಉತ್ತರ ಪ್ರದೇಶದ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಧರ್ಮಪಾಲ್ ಸಿಂಗ್ ಅವರು ಪ್ರತಿಪಾದಿಸಿದ್ದಾರೆ. ಅಹ್ಮದ್ ಬಂಧನದ ನಂತರ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲು ಹೊರಟಿದ್ದನು. ಇದು ಅವರ ಹತ್ಯೆಗೆ ಕಾರಣವಾಯಿತು ಎಂದು ಸಿಂಗ್ ಆರೋಪಿಸಿದ್ದಾರೆ.

UP: Opposition parties behind Atiqs murder - UP Minister alleges

ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕಳೆದ ವಾರ ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್‌ಗೆ ಕರೆದೊಯ್ಯುತ್ತಿದ್ದಾಗ ಹತ್ಯೆ ಮಾಡಲಾಗಿತ್ತು. 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜುಪಾಲ್‌ ಹತ್ಯೆ ಹಾಗೂ ಈ ವರ್ಷದ ಫೆಬ್ರುವರಿಯಲ್ಲಿ ಬಿಎಸ್‌ಪಿ ನಾಯಕ ರಾಜುಪಾಲ್‌ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದಲ್ಲಿ ಅತೀಕ್‌ ಆರೋಪಿಯಾಗಿದ್ದನು.

"ಅತೀಕ್‌ನನ್ನು ಕೊಲ್ಲುವಲ್ಲಿ ಪ್ರತಿಪಕ್ಷಗಳು ಭಾಗಿಯಾಗಿವೆ ಎಂಬುದು ಸತ್ಯ. ಅತೀಕ್‌ನಿಂದ ಕೆಲವು ಗಂಭೀರ ರಹಸ್ಯಗಳು ಬಹಿರಂಗಗೊಳ್ಳಬೇಕಿತ್ತು. ಈ ಬೆದರಿಕೆಯಿಂದಾಗಿ ಪ್ರತಿಪಕ್ಷಗಳು ಅವರನ್ನು ಹತ್ಯೆ ಮಾಡಿದೆ" ಎಂದು ಶುಕ್ರವಾರ ಇಲ್ಲಿಗೆ ಆಗಮಿಸಿದ ರಾಜ್ಯ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಸಿಂಗ್ ಹೇಳಿದ್ದಾರೆ.

UP: Opposition parties behind Atiqs murder - UP Minister alleges

ಪ್ರಯಾಗ್‌ರಾಜ್‌ನ ಆಸ್ಪತ್ರೆಯೊಂದರ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅತೀಕ್ ಮಾತನಾಡುತ್ತಿದ್ದಾಗ ಪತ್ರಕರ್ತರಂತೆ ಕಾಣಿಸಿಕೊಂಡಿದ್ದ ಮೂವರು ವ್ಯಕ್ತಿಗಳು ಅತೀಕ್ ಮತ್ತು ಅಶ್ರಫ್ ಮೇಲೆ ಗುಂಡು ಹಾರಿಸಿದರು. ಶೂಟರ್‌ಗಳನ್ನು ಶೀಘ್ರದಲ್ಲೇ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಮತ್ತು ನಂತರ ಅವರನ್ನು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ.

ಗುರುವಾರ ಮುಂಜಾನೆ, ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ನ್ಯಾಯಾಂಗ ಸಮಿತಿಯು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿತು. ವಿಶೇಷ ತನಿಖಾ ತಂಡ ಅತೀಕ್ ಮತ್ತು ಅವನ ಸಹೋದರನನ್ನು ಗುಂಡಿಕ್ಕಿ ಕೊಂದ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಿತು. ಹೆಚ್ಚಿನ ತನಿಖೆಗಾಗಿ ಪೊಲೀಸ್ ತಂಡ ಕೊಲೆಗೂ ಮುನ್ನ ಅತಿಕ್ ಹಂತಕರು ತಂಗಿದ್ದ ಹೋಟೆಲ್‌ಗೆ ತಲುಪಿತು.

UP: Opposition parties behind Atiqs murder - UP Minister alleges

ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಲವ್ಲೇಶ್ ತಿವಾರಿಯ ಮೂವರು ಸ್ನೇಹಿತರನ್ನು ಎಸ್‌ಐಟಿ ತಂಡ ಬಂಧಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಎಸ್‌ಐಟಿ ತಂಡವು ಹಮೀರ್‌ಪುರ ಮತ್ತು ಕಾಸ್‌ಗಂಜ್‌ಗೂ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+