ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!
ಲಕ್ನೊ, ಜನವರಿ 20: ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಮತ್ತು ಸಮಾಜವಾದಿ ಮೈತ್ರಿಕೂಟ ಶೇಕಡಾ 35-37 ಮತಗಳ ಮೇಲೆ ಕಣ್ಣಿಟ್ಟಿದೆ. ಎರಡೂ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸಿದ್ದು, ಶೇಕಡಾ 18 ರಷ್ಟಿರುವ ಮುಸ್ಲಿಮರ ಮತಗಳು ಹಾಗೂ ಮುಸ್ಲೇಮೇತರರ ಶೇಕಡಾ 25 ಮತಗಳನ್ನು ಪಡೆದರೆ ತಮ್ಮ ಗೆಲವು ನಿಶ್ಚಿತ ಅಂದುಕೊಂಡಿವೆ.
ಮುಖ್ಯವಾಗಿ ಚುನಾವಣೆಯಲ್ಲಿ ಬಲಪಂಥೀಯ ಬಿಜೆಪಿ ಮತ್ತು ದಲಿತ ಮುಖ ಹೊತ್ತ ಬಿಎಸ್ಪಿಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮುಖಾಮುಖಿಯಾಗಬೇಕಾಗಿದೆ. ಹೀಗಾಗಿ ಮುಸ್ಲಿಂ ಮತ್ತು ಇತರ ಸ್ವಲ್ಪ ಮತಗಳನ್ನು ಪಡೆದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಎರಡೂ ಪಕ್ಷಗಳು ಅಂದುಕೊಂಡಿವೆ.[ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು]

ಉತ್ತರ ಪ್ರದೇಶದಲ್ಲಿ ಜಾತಿವಾರು ಮತಗಳನ್ನು ನೋಡುವುದಾದರೆ,
ಮೇಲ್ವರ್ಗ - 25%
ಯಾದವ - 10%
ಒಬಿಸಿ (ಯಾದವ ಹೊರತುಪಡಿಸಿ) 26%
ಮುಸ್ಲಿಂ - 18%
ದಲಿತ -21%
ಇದರಲ್ಲಿ ಬಿಜೆಪಿ ಹೆಚ್ಚಾಗಿ ಮೇಲ್ವರ್ಗದವರ ಮತಗಳನ್ನು ನೆಚ್ಚಿಕೊಂಡಿದ್ದರೆ, ಬಿಎಸ್ಪಿ ದಲಿತರ ಮತಗಳ ಮೇಲೆ ಕಣ್ನಿಟ್ಟಿದೆ. ಇದರ ಮಧ್ಯೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮುಸ್ಲಿ, ಯಾದವ್ ಮತ್ತು ಇತರ ಒಂದಷ್ಟು ಮತಗಳನ್ನು ಸೆಳೆಯಲು ಯೋಜನೆ ಹಾಕಿಕೊಂಡಿದೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ನಡುವೆ ಸೀಟು ಹಂಚಿಕೆ ಕಾದಾಟ]
ಯಾದವ ನಾಯಕರೇ ಸಮಾಜವಾದಿ ಪಕ್ಷದಲ್ಲಿರುವುದರಿಂದ ಯಾದವರ ಮತಗಳನ್ನು ಸೆಳೆಯುವುದು ಕಷ್ಟವಾಗಲಾರದು. ಆದರೆ ಮುಸ್ಲಿಂ ಮತಗಳನ್ನು ಬಿಎಸ್ಪಿ ಕಡೆಗೆ ಹೋಗದಂತೆ ತಡೆಯವ ಬಹುದೊಡ್ಡ ಸವಾಲು ಅವುಗಳ ಮುಂದಿದೆ. ಇದೇ ವೇಳೆ ಗೆಲುವಿಗಾಗಿ ಮೇಲ್ವರ್ಗ ಮತ್ತು ಒಬಿಸಿಯ ಒಂದಷ್ಟು ಮತಗಳನ್ನು ಸೆಳೆಯಲೇಬೇಕಾಗಿದೆ.
ಇದರ ನಡುವೆ ರಾಜ್ಯದಲ್ಲಿ ಯುವಕರ ಐಕನ್ ಆಗಿ ಬಿಂಬಿತವಾಗಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಂದಷ್ಟು ಮತಗಳನ್ನು ತರಲಿದ್ದಾರೆ ಎಂದುಕೊಳ್ಳಲಾಗಿದೆ. ಒಂದೊಮ್ಮೆ ಅದರಲ್ಲಿಯೂ ಎಸ್ಪಿ ಯಶಸ್ವಿಯಾದಲ್ಲಿ ಬಿಜೆಪಿ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷಕ್ಕೆ ಗೆಲುವು ಕಷ್ಟವಾಗಬಹುದು ಎಂದು ಚುನಾವಣಾ ಪಂಡಿತರು ವಿಶ್ಲೇಷಿಸಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications