ಆಧಾರ್ ಬಳಕೆ ಹಾಗೂ ಅದರ ಸುತ್ತ ಇರುವ ವಿವಾದಗಳು...
ಆಧಾರ್ ಬಗ್ಗೆ ನನಗೆ ಎಲ್ಲ ಗೊತ್ತಿದೆ ಅನ್ನುವವರಿಗೂ ಕೆಲವು ತಪ್ಪು ಮಾಹಿತಿ, ಅಭಿಪ್ರಾಯಗಳಿವೆ. ಆಧಾರ್ ಬಗ್ಗೆ ಹಲವು ವಿಶಿಷ್ಟ ವಿವರಗಳು ಹಾಗೂ ಅದರ ಮಿತಿಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯಿದೆ
ಆಧಾರ್ ಹಾಗೂ ಆದರ ದುರ್ಬಳಕೆ ಬಗ್ಗೆ ಹಲವು ಮಾಧ್ಯಮಗಳು ಚರ್ಚಿಸುತ್ತಿವೆ. ಜನರಿಗೆ ನಾನಾ ಅಭಿಪ್ರಾಯಗಳಿದ್ದರೂ ಆಧಾರ್ ಬಗ್ಗೆ ಎಲ್ಲ ವಿವರಗಳನ್ನು ತಿಳಿದಿರಬೇಕು. ಇಂದಿನ ನನ್ನ ಲೇಖನದಲ್ಲಿ ಸಾಮಾನ್ಯವಾಗಿ ಏಳುವ ಪ್ರಶ್ನೆಗಳಿಗೆ ಆಧಾರ್ ನ ಪ್ರಮುಖ ಅಂಶಗಳನ್ನು ವಿವರಿಸಲು ಪ್ರಯತ್ನಿಸುತ್ತಾ ಇದ್ದೀನಿ.
ಆಧಾರ್ ಬಗ್ಗೆ ಈಗಾಗಲೇ ಪರಿಚಯ ಇದ್ದರೂ ಇದು ಸ್ವಲ್ಪ ವಿಭಿನ್ನ. ಈ ಬಗ್ಗೆ ಕೆಲವು ತಪ್ಪಾದ ಅಭಿಪ್ರಾಯ ಇರುವವರು ಸಹ ತಮಗೆ ಎಲ್ಲ ಗೊತ್ತಿದೆ ಎಂಬ ನಂಬಿಕೆಯಲ್ಲಿದ್ದಾರೆ. ಭಾರತೀಯ ನಿವಾಸಿಗಳಿಗೆ ಯುಐಡಿಎಐನಿಂದ ಯುನಿಕ್ ಐಡಿ ವಿತರಿಸುವುದೊಂದೇ ಅಲ್ಲ. ಆನ್ ಲೈನ್ ವೆರಿಫಿಕೇಷನ್ ಸೇವೆ ಒದಗಿಸುತ್ತದೆ. ಅಷ್ಟು ಬಿಟ್ಟರೆ ಆಧಾರ್ ಗೆ ಸಂಬಂಧಿಸಿದ ಯಾವುದೇ ಸೇವೆಯನ್ನು ಯುಐಡಿಎಐ ಒದಗಿಸಲ್ಲ.[ಜಾರ್ಖಂಡ್: 14 ಲಕ್ಷ ಜನರ ಆಧಾರ್ ಬಹಿರಂಗವಾದರೂ ಕ್ರಮವಿಲ್ಲ]

ಆಧಾರ್ ಬಗ್ಗೆ ನಿಮಗೆ ತುಂಬ ಸುಲಭವಾಗಿ ಅರ್ಥವಾಗುವಂತೆ ಕೆಲವು ಅಂಶಗಳನ್ನು ಇಲ್ಲಿ ವಿವರಿಸ್ತೀನಿ
* ಆಧಾರ್ ಅನ್ನೋದನ್ನು ಗುರುತಿಗಾಗಿಯೇ ರೂಪಿಸಲಾಗಿದೆ. ಅದು ಪಾಸ್ ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ನಂತಲ್ಲ. ಈ ವ್ಯವಸ್ಥೆ ಕೆಲವು ವಾಸ್ತವದ ಜತೆಗೆ ಮಿತಿಗಳನ್ನು ಕೂಡ ಹೊಂದಿದೆ. ಈ ಸತ್ಯವನ್ನು ಸೇವೆ ಒದಗಿಸುವ ಬ್ಯಾಂಕ್ ನಂಥವು ಅರ್ಥ ಮಾಡಿಕೊಳ್ಳಬೇಕು. ನೀವಿದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂದರೆ, ಆಧಾರ್ ಒಂಥರಾ ವಿದ್ಯುತ್ ಇದ್ದ ಹಾಗೆ, ಕೆಲವು ಸಲ ಕೆಲಸ ಮಾಡಲ್ಲ. ಅದೇ ರೀತಿ ಕೆಲವು ಸನ್ನಿವೇಶಗಳಲ್ಲಿ ಆಧಾರ್ ಕೂಡ ಕೆಲಸ ಮಾಡಲ್ಲ.
ಅದ್ದರಿಂದ ಒಂದೋ ವಿದ್ಯುತ್ ಬಳಕೆಯೇ ಮಾಡಬಾರದು. ಅಥವಾ ಅದು ಯಾವಾಗೆಲ್ಲ ಬಳಕೆ ಆಗುತ್ತದೆ ಎಂದು ತಿಳಿದಿರಬೇಕು. ಇನ್ನೊಂದು ಸರಳ ಉದಾಹರಣೆ ಅಂದರೆ, ಬೆರಳಿನ ಗುರುತು ಹಾಗೂ ಐರಿಸ್ ಗುರುತು ಇಲ್ಲದವರಿಗೆ ಬಯೋಮೆಟ್ರಿಕ್ ರಹಿತವಾದ ವ್ಯವಸ್ಥೆಯೊಂದನ್ನು ಮಾಡಿದೆ. ಆ ಪ್ರಕಾರ ಯಾವುದೇ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಿ, ಆಧಾರ್ ವಿತರಿಸಲಾಗುತ್ತದೆ.[ಆಧಾರ್ ಪ್ರಚಾರಕ್ಕೆ ಮಕ್ಕಳಿಗಾಗಿ ವಿಡಿಯೋ ಸ್ಪರ್ಧೆ, ನಗದು ಬಹುಮಾನ]
ಅಂಥ ವ್ಯಕ್ತಿಗಳನ್ನು ಬಯೋಮೆಟ್ರಿಕ್ ಮೂಲಕ ಗುರುತು ಹಿಡಿಯಲು ಸಾಧ್ಯವೇ ಇಲ್ಲ. ಅಂತಹವರು ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಮೂಲಕ ತಮ್ಮ ಗುರುತನ್ನು ಖಾತ್ರಿ ಪಡಿಸಬಹುದು. ಒಂದುವೇಳೆ ಅಂಥವರ ಬಳಿ ಮೊಬೈಲ್ ಫೋನ್ ಇಲ್ಲ ಅಂದುಕೊಳ್ಳಿ (ಆಧಾರ್ ಗೆ ನೋಂದಣಿ ಮಾಡಿಸಲು ಮೊಬೈಲ್ ಫೋನ್ ಕಡ್ಡಾಯವಲ್ಲ). ಅಂಥ ಸಂದರ್ಭದಲ್ಲಿ ಕೆಲವು ಸೂಕ್ಷ್ಮ ಪರ್ಯಾಯಗಳನ್ನು ರೂಪಿಸಬೇಕಾಗುತ್ತದೆ.
ಆಧಾರ್ ವಿತರಣೆಗೂ ಮುನ್ನ ಹೇಗೆ ಪರಿಸ್ಥಿತಿ ನಿಭಾಯಿಸುತ್ತಿದ್ದರೂ ಅದೇ ರೀತಿ ಯಾವುದಾದರೂ ಫೋಟೋ ಐಡೆಂಟಿಟಿ ಬಳಸಬೇಕಾಗುತ್ತದೆ. ಇಲ್ಲಿ ಮತ್ತೊಂದು ಸೂಕ್ಷ್ಮ ಸಂಗತಿ ಇದೆ. ಅಂಥ ಸಂದರ್ಭದಲ್ಲೂ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.
* ಆಧಾರ್ ಥರ ಜಗತ್ತಿನ ಯಾವ ಭಾಗದಲ್ಲಾದರೂ ನಿಮ್ಮನ್ನು ಗುರುತಿಸಬಹುದಾದ ಮತ್ತೊಂದು ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಜನ್ಮ ದಿನದ ನೋಂದಣಿ ಮಾಡಿಸುವುದು ಹಲವು ದೇಶಗಳಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಭಾರತದಲ್ಲಂತೂ ಅಂಥ ವ್ಯವಸ್ಥೆ ಇಲ್ಲ. ಏಕೆಂದರೆ ಮನೆಯಲ್ಲೇ ಹೆರಿಗೆಗಳಾಗುತ್ತವೆ.[ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಸಿದ್ಧತೆ]
ಭಾರತದಂಥ ದೇಶದಲ್ಲಿ ಎಲ್ಲ ಕಡೆಯೂ ನೋಡಲಿಕ್ಕೆ ಸಿಗಬಹುದಾದ ಜನ್ಮ ದಿನಾಂಕ ನೋಂದಣಿ ವ್ಯವಸ್ಥೆ ಇಲ್ಲವಾದ್ದರಿಂದ ಮತ್ತೊಂದು ಐಡಿ ಬೇಕಾಗುತ್ತದೆ. ಆದ್ದರಿಂದ ಯುಐಎಡಿಐ ಬಯೋಮೆಟ್ರಿಕ್ಸ್ ನ ಆಯ್ಕೆ ಮಾಡಿಕೊಂಡಿದೆ. ಒಂದು ವೇಳೆ ಸೇವೆ ಒದಗಿಸುವ ಸಂಸ್ಥೆ ನಿರ್ಧರಿಸಿದರೆ ಎಲ್ಲಕ್ಕೂ ಆಧಾರ್ ಜೋಡಣೆ ಮಾಡಿ ನಕಲಿ ಅನಿಸುವಂಥದ್ದನ್ನೆಲ್ಲ ಇಲ್ಲದಂತೆ ಮಾಡಬಹುದು.
ಇಂಥ ಹಲವು ಸಂಗತಿಗಳು ಆಧಾರ್ ನ ಸುತ್ತ ಹೆಣೆದುಕೊಂಡಿವೆ. ಆದರೆ ಈ ಬಗ್ಗೆ ಗೊತ್ತಿರಲೇಬೇಕು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications