‘ಹಿಂದೂಗಳನ್ನು ಬಲೆಗೆ ಬೀಳಿಸು ಯತ್ನ': ದೆಹಲಿ ಉಚಿತ ಬೈಬಲ್ ವಿತರಣೆ ವಿರುದ್ಧ ವಿಎಚ್ಪಿ ಗಂಭೀರ ಆರೋಪ
ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಮಾಡಲಾದ ಬೈಬಲ್ಗಳ ಉಚಿತ ವಿತರಣೆ ಗೊಂದಲವನ್ನು ಸೃಷ್ಟಿ ಮಾಡಿದೆ.
ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಮಾಡಲಾದ ಬೈಬಲ್ಗಳ ಉಚಿತ ವಿತರಣೆ ಗೊಂದಲವನ್ನು ಸೃಷ್ಟಿ ಮಾಡಿದೆ. ಪುಸ್ತಕ ಮೇಳದಲ್ಲಿ ಬೈಬಲ್ಗಳ ಉಚಿತ ವಿತರಣೆ ವಿರೋಧಿಸಿ ನಡೆದ ಪ್ರತಿಭಟನೆಯ ನಂತರವೂ ವಿರೋಧ ವ್ಯಕ್ತವಾಗಿದೆ. ಹಿಂದೂ ಬಲಪಂಥೀಯ ಸಂಘಟನೆ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗುಂಪುಗಳು ಬೈಬಲ್ಗಳ ಉಚಿತ ವಿತರಣೆ ಮಾಡಿದ ಕ್ರಿಶ್ಚಿಯನ್ ಗುಂಪುಗಳು ಮತ್ತು ಮಿಷನರಿಗಳು ಮೇಲೆ "ಹಿಂದೂಗಳನ್ನು ಬಲೆಗೆ ಬೀಳಿಸುತ್ತಿವೆ" ಎಂದು ಆರೋಪಿಸಿವೆ.
ಈ ಬಗ್ಗೆ ಮಾತನಾಡಿದ ವಿಎಚ್ಪಿ ವಕ್ತಾರ ವಿನೋದ್ ಬನ್ಸಾಲ್, ಪ್ರತಿಭಟಿಸುವ ಸದಸ್ಯರು ನಮಗೆ ನೇರವಾಗಿ ಸಂಬಂಧಿಸಿಲ್ಲ. ಉಚಿತ ಪುಸ್ತಕಗಳನ್ನು ವಿತರಿಸುವುದು ವಿಷಯವಲ್ಲ. ಇದು ಮನಸ್ಥಿತಿಯ ಪ್ರಶ್ನೆಯಾಗಿದೆ. ಇದು ಜನರಿಗೆ ಪುಸ್ತಕಗಳನ್ನು ಹಂಚುವ, ಪುಸ್ತಕವನ್ನು ಹಿಂಬಾಲಿಸುವ ಅಥವಾ ಮೋಸ ಮಾಡುವ, ಇತರ ಧರ್ಮಗಳನ್ನು ಅವಹೇಳನ ಮಾಡುವ ವಿಧಾನವಾಗಿದೆ ಎಂದು ಹೇಳಿದರು. ಜೊತೆಗೆ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರಾಕರಿಸುತ್ತದೆ ಎಂದಿದ್ದಾರೆ.

ನವದೆಹಲಿ ವಿಶ್ವ ಪುಸ್ತಕ ಮೇಳವೊಂದು (ಎನ್ಡಿಡಬ್ಲ್ಯುಬಿಎಫ್) ನಡೆಯುತ್ತಿದೆ. ಇಲ್ಲಿ ಬೈಬಲ್ ಪ್ರತಿಗಳನ್ನು ಉಚಿತವಾಗಿ ವಿತರಿಸುವುದನ್ನು ವಿರೋಧಿಸಿ ಜನರ ಗುಂಪು ಕ್ರಿಶ್ಚಿಯನ್ ಸಂಘಟನೆಯೊಂದರಲ್ಲಿ ಪ್ರತಿಭಟನೆ ನಡೆಸಿದೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಗಿಡಿಯನ್ಸ್ ಇಂಟರ್ನ್ಯಾಶನಲ್ ಎಂಬ ಕ್ರಿಶ್ಚಿಯನ್ ಸಂಸ್ಥೆಯು ನಡೆಸುತ್ತಿರುವ ಸ್ಟಾಲ್ನಲ್ಲಿ ಕೆಲವು ಪುರುಷರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಉಚಿತ ಬೈಬಲ್ಗಳ ವಿತರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸುವುದನ್ನು ವಿಡಿಯೊ ತೋರಿಸಿದೆ.
ಪೊಲೀಸರ ಪ್ರಕಾರ, ಪುಸ್ತಕ ಮೇಳದ ಆಯೋಜಕರು ಅಥವಾ ಗಿಡಿಯನ್ಸ್ ಇಂಟರ್ನ್ಯಾಷನಲ್ ಈ ವಿಷಯದಲ್ಲಿ ಯಾವುದೇ ದೂರು ದಾಖಲಿಸಿಲ್ಲ. "ಪ್ರತಿಭಟನೆಯಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ ಅಥವಾ ಯಾವುದೇ ಪುಸ್ತಕಗಳನ್ನು ಹರಿದು ಹಾಕಲಾಗಿಲ್ಲ" ಎಂದು ತಿಳಿಸಿದ್ದಾರೆ.

ಗಿಡಿಯನ್ಸ್ ಇಂಟರ್ನ್ಯಾಶನಲ್ 1899ರಲ್ಲಿ ಸ್ಥಾಪಿಸಲಾದ ಇವಾಂಜೆಲಿಕಲ್ ಕ್ರಿಶ್ಚಿಯನ್ ಅಸೋಸಿಯೇಷನ್ ಆಗಿದೆ. ಅದರ ಪ್ರಾಥಮಿಕ ಚಟುವಟಿಕೆಯು ಬೈಬಲ್ನ ಪ್ರತಿಗಳನ್ನು ಉಚಿತವಾಗಿ ವಿತರಿಸುತ್ತಿದೆ ಎಂದು ಅದರ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಗಿಡಿಯನ್ಸ್ ಇಂಟರ್ನ್ಯಾಶನಲ್ನಿಂದ ಯಾವುದೇ ತಕ್ಷಣದ ಕಾಮೆಂಟ್ ಇಲ್ಲ.
ಪ್ರತಿಭಟನಾನಿರತ ಸದಸ್ಯರಲ್ಲಿ ಒಬ್ಬರು 'ಹಿಂದೂ ಯುನೈಟೆಡ್ ಫ್ರಂಟ್' ನ ದೆಹಲಿ ಮುಖ್ಯಸ್ಥ ಎಂದು ಹೇಳಿಕೊಂಡ ವಿಡಿಯೊ, ಜನರು ಅವರೊಂದಿಗೆ ವಾಗ್ವಾದ ಮಾಡುವುದನ್ನು ಮತ್ತು ಸಂವಿಧಾನ ಹಾಗೂ ಅದರ ಅಡಿಯಲ್ಲಿ ಪ್ರತಿಪಾದಿಸಲಾದ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ತೋರಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications