Video Viral: ಮಾವುತನ ಮೇಲೆ ಹತ್ತಿ ನಿಂತು ಕೊಂದ ಆನೆ, ಭಯಾನಕ ಘಟನೆ ಸೆರೆ
ಕೇರಳ, ಜೂನ್ 23: ಗಜರಾಜ, ಗಾಂಭೀರ್ಯ ನಡಿಗೆಗೆ ಹೆಸರಾದ ಆನೆಗಳು (Elephants) ತನ್ನ ದೇಹ, ದೊಡ್ಡ ಸೊಂಡಿಲು ಮತ್ತು ಕಿವಿಗಳು ಹಾಗೂ ಘೀಳಿಡುವ ಶೈಲಿಯಿಂದಲೇ ಇತರ ಪ್ರಾಣಿಗಳಿಗಿಂತಲೂ ವಿಶೇಷವಾಗಿ ಕಾಣಿಸುತ್ತವೆ. ಅತ್ಯಂತ ಸೂಕ್ಷ್ಮ, ಸೌಮ್ಯ ಸ್ವಭಾವದ ಪ್ರಾಣಿ ಅಂತಲೂ ಕೆರೆಯುವ ಈ ಆನೆಗಳಿಗೆ ಸಿಟ್ಟು ಬಂದರೆ ಎದುರಿಗಿನ ಮನುಷ್ಯರಾಗಲಿ, ಅಂಗಡಿ, ಮುಂಗಟ್ಟು, ವಾಹನಗಳು ಯಾವುದು ಉಳಿಯಲ್ಲ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಕೇರಳದಲ್ಲಿ ಇಂತದ್ದೆ ಮನಕಲಕುವ ಘಟನೆಯೊಂದು ಭಾನುವಾರ ನಡೆದಿದೆ.
ಕಟ್ಟಾಕಿದ್ದ ಆನೆಗೆ ಮುಂದೆ ಮಾವುತ ಎಂದಿನಂತೆ ಅದರತ್ತ ತೆರಳಿದ್ದಾನೆ. ಆದರೆ ಆತನನ್ನು ನೂಕಿದ ಕ್ಷಣಮಾತ್ರದಲ್ಲಿ ಆತನ ಮೇಲೆ ಹತ್ತಿ ನಿಂತು ಜೀವ ತೆಗೆದ ಭಯಾನಕ ವಿಡಿಯೋ ಸೆರೆಯಾಗಿದೆ. ಇದನ್ನು ನೋಡಿದರೆ ಎಂಥವರಿಗೂ ಎದೆ ಝಲ್ ಅನ್ನಿಸುವಂತಿದೆ. ಏನಾಯಿತೆಂದು ಅಕ್ಕಪಕ್ಕದವರು ನೋಡುವಷ್ಟರಲ್ಲೇ ಮಾವುತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ವಿಡಿಯೋದಲ್ಲಿ ಸೆರೆಯಾಗಿರುವ ಪ್ರಕಾರ, ಆನೆ ನೋಡಿದರೆ ಈಗಾಗಲೇ ತರಬೇತಿ ಪಡೆದಿರುವ, ಮಾವುತರೊಂದಿಗೆ ಒಡನಾಡಿಯಾಗಿದ್ದ ಆನೆಯಂತೆ ಕಾಣಿಸುತ್ತದೆ. ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್ನಲ್ಲಿ ನಡೆದ ಘಟನೆ ಇದಾಗಿದೆ. ನೀಲೇಶ್ವರಂ ನಿವಾಸಿ ಮಾವುತ ಬಾಲಕೃಷ್ಣ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಮಾವುತನ ಮೇಲೆ ಹತ್ತಿ ನಿಂತ ಆನೆ
ಎಂದಿನಂತೆ ಮೃತ ಮಾವುತ ಕೈಯಲ್ಲಿದ್ದ ಸಲಕರಣೆಯಿಂದ ಆನೆಯನ್ನು ಸರಿಯಾಗಿ ನಿಲ್ಲುವಂತೆ ತಿವಿದು ಹೇಳುತ್ತಾನೆ. ಆಗ ಅಡ್ಡಲಾಗಿ ನಿಂತಿದ್ದ ಆನೆ ಆತನ ಮಾತಿಗೆ ಸಮ್ಮತಿಸಿದವರಂತೆ ಒಂದು ಬದಿಗೆ ಸರಿಯಾಗಿ ನಿಲ್ಲುತ್ತದೆ. ಈ ವೇಳೆ ಮಾವುತ ಆನೆಯ ಸೊಂಡಿಲ ಪಕ್ಕದಲ್ಲೇ ನಿಂತು ಸೂಚನೆ ಕೊಡುತ್ತಿರುತ್ತಾನೆ.
ನೋಡ ನೋಡುತ್ತಿದ್ದಂತೆ ಆ ಕಟ್ಟಾಕಿದ್ದ ಆನೆಗೆ ಏನನ್ನಿಸಿತೋ ಗೊತ್ತಿಲ್ಲ, ಆ ಮಾವುತನನ್ನು ನೂಕಿ ಕೆಳಗೆ ಕೆಡವಿ ಹಾಕಿ ಬಿಡುತ್ತದೆ. ಸಾಲದೆಂಬಂತೆ ಕೆಳಗೆ ಬಿದ್ದ ಆತನ ಎಡ ತೊಡೆಯ ಮೇಲೆ ಒಂದು ಕಾಲಿಟ್ಟು ನಿಂತು ಬಿಡುತ್ತದೆ. ಇನ್ನೇನು ಆನೆಯ ಕೆಳಗೆ ಸಿಲುಕಿದ್ದ ಮಾವುತ ಸಹಾಯಕ್ಕೆ ಕರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಆತನ ಬೆನ್ನಿನ ಮೇಲೆ ಮತ್ತೊಂದು ಕಾಲಿಟ್ಟು ಬಿಡುತ್ತದೆ.

ಒಮ್ಮೆ ಕೆಳಗಿಳಿಯುವ ಆನೆ ಮಾವುತನ ಸೊಂಟದ ಮೇಲೆ ಒಂದು, ಭುಜದ ಕೆಳಭಾಗಕ್ಕೆ ಮತ್ತೊಂದು ಕಾಲು ಇಟ್ಟು ನಿಲ್ಲುತ್ತಿದ್ದಂತೆ ಆತನ ಮೃತಪಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಷ್ಟಕ್ಕೆ ಸುಮ್ಮನಿರದ ಆನೆ, ಸೊಂಡಿಲಿನಿಂದ ಆತನನ್ನು ಎತ್ತಿಕೊಂಡು ಬಿಸಾಡುತ್ತದೆ.
ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್ನಲ್ಲಿ ನಡೆದ ಘಟನೆ. ನೀಲೇಶ್ವರಂ ನಿವಾಸಿ ಮಾವುತ ಬಾಲಕೃಷ್ಣ ಮೃತ ದುರ್ದೈವಿ. pic.twitter.com/4BWBLv8VLa
— ಸನಾತನ (@sanatan_kannada) June 23, 2024
ಬೊಂಬೆಯಂತೆ ಸೊಂಡಿಲಿನಿಂತ ಮೃತನನ್ನು ಬಿಸಾಕಿದ ಆನೆ
ಅಷ್ಟೊತ್ತಿಗಾಗಲೇ ಆತನ ಜೀವ ಹಾರಿ ಹೋಗಿದೆ. ಆನೆ ಸೊಂಡಿಲಿನಲ್ಲಿದ್ದಾಗ ಮೃತ ಕೈ ಕಾಲುಗಳೂ ಬೊಂಬೆಯ ಕೈಕಾಲುಗಳಂತೆ ನಿರ್ಜಿವ ವಸ್ತುಗಳಂತೆ ವಾಲಾಡುವುದನ್ನು ಕಾಣಬಹುದು. ಎತ್ತಿ ನೆಲಕ್ಕೆ ಬೀಸುತ್ತಿದ್ದಂತೆ ಮತ್ತೊಬ್ಬ ಮಾವು ಆನೆಯ ಬಳಿ ಬರುವ ದೃಶ್ಯಗಳು ಸೆರೆಯಾಗಿದೆ. ಈ ಕುರಿತು ವಿಡಿಯೋವನ್ನು ಸನಾತನ ಟ್ವಿಟ್ಟರ್ (ಎಕ್ಸ್) ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಾಗಿದೆ.
ಹೀಗೆ ಕಾಡು ಪ್ರಾಣಿಗಳಲ್ಲಿ ಸೂಕ್ಷ್ಮ, ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಆನೆಯು ರೊಚ್ಚಿಗೆದ್ದರೆ ಏನೆಲ್ಲ ಆಗುತ್ತದೆ. ಕ್ಷಣಮಾತ್ರದಲ್ಲಿ ಎಂತವರನ್ನು ನಡುಗಿಸಿ, ಜೀವ ತೆಗೆಯುವ ಶಕ್ತಿ ಆನೆಗಿದೆ ಎಂಬ ಸತ್ಯ ಈ ವಿಡಿಯೋದಿಂದ ಮತ್ತೊಮ್ಮೆ ಮನವರಿಕೆ ಆಗುತ್ತದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications