Get Updates
Get notified of breaking news, exclusive insights, and must-see stories!

Coconut: ಎಳನೀರು ತಾಜಾವಾಗಿಡಲು ಚರಂಡಿ ನೀರು ಚುಮುಕಿಸಿದ ವ್ಯಾಪಾರಿ- ವಿಡಿಯೋ ವೈರಲ್

ಲಕ್ನೋ ಜೂನ್ 6: ಇತ್ತೀಚೆಗೆ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ನೀರಿನ ದಾಹವನ್ನು ಕಡಿಮೆ ಮಾಡಲು ಹಲವಾರು ಜನ ತಂಪು ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಅದರಲ್ಲೂ ನೈಸರ್ಗಿಕವಾಗಿ ಲಭ್ಯವಿರುವ ಎಳನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಎಳನೀರನ್ನು ಕುಡಿಯುವಂತೆ ವೈದ್ಯರು ಕೂಡ ಹೆಚ್ಚಾಗಿ ಸಲಹೆ ನೀಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ರಸ್ತೆ ಬದಿ ಮಾರಾಟವಾಗುವ ಎಳನೀರು ಕುಡಿಯುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡಿದೆ.

ಸಾಮಾನ್ಯವಾಗಿ ಜನ ಎಳನೀರು ಮಾರಾಟ ಮಾಡುವ ಸ್ಥಳಗಳು ಕಂಡು ಬಂದರೆ ಸಾಕು ತಮ್ಮ ವಾಹನವನ್ನು ನಿಲ್ಲಿಸಿ ಎಳನೀರು ಕುಡಿದು, ಬೇಕಾದರೆ ಖರೀದಿ ಕೂಡ ಮಾಡಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ವೈರಲ್ ಆದ ವಿಡಿಯೋದಲ್ಲಿ ವ್ಯಾಪಾರಿಯೊಬ್ಬ ಎಳನೀರು ಕಾಯಿ ಮೇಲೆ ಚರಂಡಿ ನೀರು ಚುಮುಕಿಸಿದ್ದು ಕಂಡುಬಂದಿದೆ. ಈ ವೈರಲ್ ವಿಡಿಯೋ ಆಕ್ರೋಶಕ್ಕೆ ಗುರಿಯಾಗಿದೆ.

Trader sprinkle sewage water on coconut

ಈ ಘಟನೆಯ ವಿಡಿಯೋವನ್ನು ಉತ್ತರಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ ತೆಂಗಿನಕಾಯಿ ಮಾರಾಟಗಾರರೊಬ್ಬರು ತೆಂಗಿನಕಾಯಿಗಳನ್ನು ತಾಜಾ ಮತ್ತು ಸ್ವಚ್ಛವಾಗಿರಿಸಲು ಚರಂಡಿ ನೀರನ್ನು ಚುಮುಕಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ 25 ಸೆಕೆಂಡ್‌ಗಳಾಗಿದ್ದು, ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಧಾ ಸ್ಕೈ ಗಾರ್ಡನ್ ಸೊಸೈಟಿಯ ಹೊರಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಸಮೀರ್ ಎಂಬ ವ್ಯಾಪಾರಿ ದೀರ್ಘಕಾಲದವರೆಗೆ ಸಮಾಜದ ಹೊರಗೆ ತೆಂಗಿನ ನೀರನ್ನು ಮಾರಾಟ ಮಾಡುತ್ತಿದ್ದನು. ಈತ ತೆಂಗಿನಕಾಯಿಯನ್ನು ತಾಜಾವಾಗಿಡಲು ಚರಂಡಿ ನೀರನ್ನು ಎರಚುವುದು ಕಂಡು ಬಂದಿದೆ. ತನ್ನ ಎಳನೀರು ಬಂಡಿಯ ಪಕ್ಕದಲ್ಲೇ ಇದ್ದ ಚರಂಡಿ ನೀರನ್ನು ತುಂಬಿಕೊಂಡು ಬಂದು ಎಳನೀರಿಗೆ ಚುಮುಕಿಸುತ್ತಾನೆ.

ಈ ದೃಶ್ಯವನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಎಳನೀರು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈ ಬಗ್ಗೆ ಬಿಸ್ರಖ್ ಪೊಲೀಸ್ ಠಾಣೆಯ ಪ್ರಭಾರಿ ಅನಿಲ್ ರಜಪೂತ್ ಅವರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿತ್ತು. ಇದನ್ನು ಆಧರಿಸಿ ನಾವು ಎಳನೀರು ವ್ಯಾಪಾರಿಯನ್ನು ಬಂಧಿಸಿದ್ದೇವೆ. ವಿಡಿಯೋದಲ್ಲಿ ವ್ಯಾಪಾರಿ ಎಳನೀರು ಮೇಲೆ ಚರಂಡಿ ನೀರು ಎರಚುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾವು ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದರು.

ಪೊಲೀಸರ ಪ್ರಕಾರ, ಬಂಧಿತನ ಹೆಸರು ಸಮೀರ್. ಅವನು ಬರೇಲಿಯ ತಿಗಡಿ ಗ್ರಾಮದ ನಿವಾಸಿ. ನೋಯ್ಡಾದ ಸ್ಕೈ ಗಾರ್ಡನ್ ಸೊಸೈಟಿ ಬಳಿಯ ಕೊಳೆಗೇರಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸಮೀರ್ ವಿರುದ್ಧ ಐಪಿಸಿ ಸೆಕ್ಷನ್ 270, 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರತಿದಿನ ಎಳನೀರು ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ ದೇಹದ ತೂಕ ಕಡಿಮೆ ಮಾಡುತ್ತದೆ. ಹೀಗೆ ಎಳನೀರು ಕುಡಿಯುವುದರಲ್ಲಿ ಹಲವಾರು ಪ್ರಯೋಜನಗಳು ಇವೆ. ಕೆಲ ಪ್ರಯೋಜನಗಳ ನಡುವೆ ಎಳನೀರಿನ ಈ ರೀತಿಯ ಬಳಕೆ ಅಪಾಯವನ್ನು ತಂದೊಡ್ಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+