Tirumala: ತಿಮ್ಮಪ್ಪನ 10 ಕೋಟಿ ರೂಪಾಯಿ ಮೌಲ್ಯದ ಜಮೀನು ಒತ್ತವರಿ ಮಾಡಿಕೊಂಡ ಭೂಗಳ್ಳರು..

ವಿಜಯವಾಡ ಆಗಸ್ಟ್ 28: ತಿರುಪತಿ ಜಿಲ್ಲೆಯ ನಾಗಲಾಪುರಂ ಗ್ರಾಮದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ (ಟಿಟಿಡಿ) ಸೇರಿದ 10 ಕೋಟಿ ರೂಪಾಯಿ ಮೌಲ್ಯದ ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತು ಜೆ.ಶ್ರೀನಿವಾಸ್ ಎಂಬುವರು ದೂರು ನೀಡಿದ್ದಾರೆ. ಶ್ರೀನಿವಾಸ್ ಅವರು ಮಂಗಳವಾರ ಪಕ್ಷದ ಕಚೇರಿಯಲ್ಲಿ ಬಿಜೆಪಿಯ 'ವಾರಾಧಿ' ಕಾರ್ಯಕ್ರಮದಲ್ಲಿ ಶಾಸಕ ನಲ್ಲಮಿಲ್ಲಿ ರಾಮಕೃಷ್ಣಾ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ವೈಎಸ್‌ಆರ್‌ಸಿಯ ಮಾಜಿ ವಿಆರ್‌ಒ ಮತ್ತು ಮಾಜಿ ಎಂಪಿಟಿಸಿ ಹಾಗೂ ಕೆಲವು ಸ್ಥಳೀಯ ನಿವಾಸಿಗಳು ಎರಡು ಎಕರೆ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂದು ಶ್ರೀನಿವಾಸ್ ಅವರು ಆರೋಪಿಸಿದ್ದಾರೆ. ಅಲ್ಲದೆ ಪಟ್ಟಣದ ಬಜಾರ್ ಬೀದಿಯಲ್ಲಿ 200 ಅಡಿ ಉದ್ದದ ರಸ್ತೆಯನ್ನು ನಿವೃತ್ತ ನೌಕರ ಚಿಂತಲಪುಡಿ ಮಣಿರತ್ನಂ ಮತ್ತು ಅವರ ಪುತ್ರ ಕೃಷ್ಣ ಎಂಬುವರು ನಕಲಿ ದಾಖಲೆಗಳನ್ನು ಬಳಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

Tirumala Andhra pradesh man alleges rs 10 crore ttd lands encroached in tirupati tirumala

ಈ ಹಿಂದೆ ಜಿಲ್ಲಾಧಿಕಾರಿ ಭರತ್ ಗುಪ್ತಾ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ. ಮತ್ತೊಬ್ಬ ಜಿಲ್ಲಾಧಿಕಾರಿ ವೆಂಕಟ ರಮಣ ರೆಡ್ಡಿ ಅವರಿಗೆ ಪುರಾವೆ ಸಮೇತ ಮನವಿ ಸಲ್ಲಿಸಿದ ನಂತರವೂ ಅಂದಿನ ಜಂಟಿ ಜಿಲ್ಲಾಧಿಕಾರಿ ಡಿ.ಕೆ. ಬಾಲಾಜಿ, ಯಾವುದೇ ಕ್ರಮ ಕೈಗೊಂಡಿಲ್ಲ.

ರಸ್ತೆ ಅತಿಕ್ರಮಣ ಕುರಿತು ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಆದೇಶ ಪಡೆದರೂ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಸ್ಮಶಾನವನ್ನೂ ಒತ್ತುವರಿ ಮಾಡಿಕೊಂಡಿಕೊಂಡಿದ್ದಾರೆ. ಇಂಥಹವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಬಿಡುಗಡೆ ಮಾಡುವಂತೆ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಈ ವೇಳೆ ಬಿಜೆಪಿ ಉಪಾಧ್ಯಕ್ಷ ಎಸ್.ವಿಷ್ಣುವರ್ಧನ್ ರೆಡ್ಡಿ, ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಪಾಕಾ ವೆಂಕಟ ಸತ್ಯನಾರಾಯಣ್, 'ವಾರಾಧಿ' ಸಂಯೋಜಕ ಕಿಲಾರಿ ದಿಲೀಪ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಿರುಮಲ ಶ್ರೀವಾರಿ ಭಕ್ತರಿಗೆ ಅದ್ಭುತ ಅವಕಾಶ.. ಉಚಿತ ದರ್ಶನದೊಂದಿಗೆ ವಸತಿ..

ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ತಿರುಮಲ ಶ್ರೀವಾರಿ ಸೇವೆಯ ನವೆಂಬರ್ ತಿಂಗಳ ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡಲಾಗಿದೆ. ತಿರುಮಲ - ತಿರುಪತಿ ಶ್ರೀವಾರಿ ಸೇವಾ ಕೋಟ ಮಂಗಳವಾರ (ಆಗಸ್ಟ್ 27) ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ.

Tirumala Andhra pradesh man alleges rs 10 crore ttd lands encroached in tirupati tirumala

ತಿರುಮಲ ಶ್ರೀವಾರಿ ನವನೀತ ಸೇವೆಗೆ ಸಂಬಂಧಿಸಿದ ಟಿಕೆಟ್‌ಗಳನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಟಿಟಿಡಿ ತಿಳಿಸಿದೆ. ತಿರುಮಲ ಶ್ರೀವಾರಿ ಭಕ್ತರು ಇದನ್ನು ಗಮನಿಸಿ ಸೇವೆಗೆ ಟಿಕೆಟ್ ಕಾಯ್ದಿರಿಸುವಂತೆ ಟಿಟಿಡಿ ಸೂಚಿಸಿದೆ. ಶ್ರೀವಾರಿ ಸೇವೆ ಮಾಡಲು ಬಯಸುವ ಭಕ್ತರಿಗೆ ಉಚಿತ ದರ್ಶನ ಮತ್ತು ವಸತಿ ಒದಗಿಸಲಾಗುತ್ತದೆ ಎಂದು ಟಿಟಿಡಿ ತಿಳಿದಿದೆ.

https://ttdevasthanams.ap.gov.in ವೆಬ್‌ಸೈಟ್ ಮೂಲಕ ದರ್ಶನ, ಸೇವೆಗಳು ಮತ್ತು ಇತರ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ ಸಲಹೆ ನೀಡಿದೆ. ದಲ್ಲಾಳಿಗಳನ್ನು ನಂಬಬೇಡಿ ಎಂದು ಟಿಟಿಡಿ ಭಕ್ತರಿಗೆ ಮನವಿ ಮಾಡಿದೆ. ಭಕ್ತರು ಈ ವಿಷಯವನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿಸಿದೆ.

ಇತ್ತೀಚೆಗಷ್ಟೇ ಕೆಲ ಭಕ್ತರು ದಲ್ಲಾಳಿಗಳ ದರ್ಶನ ಹಾಗೂ ಸೇವೆಗಾಗಿ ನಕಲಿ ಟಿಕೆಟ್‌ ಪಡೆದು ಬಂದು ಟಿಟಿಡಿ ವಿಜಿಲೆನ್ಸ್‌ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ. ಅದಕ್ಕಾಗಿಯೇ ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+