ಅರಬ್ಬಿ ಸಮುದ್ರದಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ
ನವದೆಹಲಿ, ಸೆಪ್ಟೆಂಬರ್ 26: ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಾಗರ ಸಮರಾಭ್ಯಾಸ ಜಿಮೆಕ್ಸ್ನ ನಾಲ್ಕನೆಯ ಆವೃತ್ತಿಯು ಸೆ. 26 ರಿಂದ 28ವರೆಗೆ ನಡೆಯುತ್ತಿದೆ. ಭಾರತೀಯ ನೌಕಾ ಪಡೆ ಮತ್ತು ಜಪಾನ್ ಸಾಗರ ಸ್ವಯಂ ರಕ್ಷಣಾ ದಳ (ಜೆಐಎಂಎಸ್ಡಿಎಫ್) ಜತೆಗೂಡಿ ಉತ್ತರ ಅರಬ್ಬಿ ಸಮುದ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಜಂಟಿ ಸಾಗರ ಸಮರಾಭ್ಯಾಸ ನಡೆಸುತ್ತವೆ.
ಕಡಲ ಭದ್ರತಾ ಸಹಕಾರದ ಮೇಲೆ ವಿಶೇಷ ಗಮನ ಹರಿಸುವ ಸಲುವಾಗಿ 2012ರ ಜನವರಿಯಲ್ಲಿ ಜಿಮೆಕ್ಸ್ ಸರಣಿಯ ಸಮರಾಭ್ಯಾಸವನ್ನು ಆರಂಭಿಸಲಾಗಿತ್ತು. ಕಳೆದ ಆವೃತ್ತಿಯು 2018ರ ಅಕ್ಟೋಬರ್ನಲ್ಲಿ ವಿಶಾಖಪಟ್ಟಣದಲ್ಲಿ ನಡೆದಿತ್ತು.
ಭಾರತ ಮತ್ತು ಜಪಾನ್ ನಡುವೆ ನೌಕಾ ಸಹಕಾರವು ಕಳೆದ ಕೆಲವು ವರ್ಷಗಳಿಂದ ಪ್ರಗತಿ ಕಂಡಿದೆ. ಜಿಮೆಕ್ಸ್-20 ವೇಳೆ ಅತ್ಯಾಧುನಿಕ ಮಟ್ಟದ ಕಾರ್ಯಾಚರಣೆ ಹಾಗೂ ಸಮರಾಭ್ಯಾಸವನ್ನು ಯೋಜಿಸಲಾಗಿದೆ. ಈ ಮೂಲಕ ಭಾರತ-ಜಪಾನ್ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ಮತ್ತಷ್ಟು ಭದ್ರ, ಮುಕ್ತ ಹಾಗೂ ಜಾಗತಿಕ ಸಮುದಾಯವನ್ನು ಒಳಗೊಳ್ಳುವ ಸಲುವಾಗಿ ಉಭಯ ಸರ್ಕಾರಗಳು ಹತ್ತಿರದಿಂದ ಕೆಲಸ ಮಾಡುವ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ನೌಕಾಪಡೆ ಹೇಳಿಕೆ ತಿಳಿಸಿದೆ.

ಕಡಲ ಕಾರ್ಯಾಚರಣೆಯಲ್ಲಿ ಉನ್ನತ ಮಟ್ಟದ ಅಂತರ್ ಶಸ್ತ್ರಕ್ರಿಯಾ ಸಾಮರ್ಥ್ಯವನ್ನು ಮತ್ತು ಬಹು ವಿಧದ ಅತ್ಯಾಧುನಿಕ ಅಭ್ಯಾಸದ ಮೂಲಕ ಜಂಟಿ ಕಾರ್ಯಾಚರಣೆಯ ಕೌಶಲವನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಉಭಯ ದೇಶಗಳ ನೌಕಾಪಡೆಗಳು ಅಭಿವೃದ್ಧಿಪಡಿಸಿದ ಸಂಯೋಜನೆಯಡಿ ಶಸ್ತ್ರಾಸ್ತ್ರಗಳ ಉಡಾವಣೆ, ಕ್ರಾಸ್ ಡೆಕ್ ಹಲಿಕಾಪ್ಟರ್ ಕಾರ್ಯಾಚರಣೆ, ಜಲಾಂತರ್ಗಾಮಿ ನಿಗ್ರಹ, ವೈಮಾನಿಕ ಯುದ್ಧ ಅಭ್ಯಾಸಗಳು ಜಿಮೆಕ್ಸ್ 20ರಲ್ಲಿ ನಡೆಯಲಿವೆ.
ಮೂರು ದಿನಗಳ ಕಾಲ ಜಿಮೆಕ್ಸ್ 20 ನಡೆಯಲಿದ್ದು, ಕೊರೊನಾ ವೈರಸ್ ಪಿಡುಗಿನ ಕಾರಣದಿಂದ ಉಭಯ ದೇಶಗಳ ನೌಕಾ ಪಡೆಗಳು ಪರಸ್ಪರ ಸಂಪರ್ಕಕ್ಕೆ ಬಾರದೆ ಸಮುದ್ರದಲ್ಲಿ ಅಭ್ಯಾಸ ನಡೆಸಲಿವೆ.
ಸ್ವದೇಶಿ ನಿರ್ಮಿತ ಗುಪ್ತ ನಾಶ ನೌಕೆ ಚೆನ್ನೈ, ತರ್ಕಾಶ್ ಮತ್ತು ದೀಪಕ್ ನೌಕೆಗಳು ರಿಯರ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಯಲಿವೆ. ಜಪಾನ್ನ ಜೆಎಂಎಸ್ಡಿಎಫ್ ನೌಕೆ ಕಾಗಾ, ಹೆಲಿಕಾಪ್ಟರ್ ವಿಧ್ವಂಸಕ ಇಜುಮೋ ಮತ್ತು ಕ್ಷಿಪಣಿ ವಿಧ್ವಂಸಕ ಇಕಾಜುಚಿ ಪಾಲ್ಗೊಳ್ಳಲಿವೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications