ಹರಿಯಾಣದ ನುಹ್ನಲ್ಲಿ ಹಿಂಸಾಚಾರಕ್ಕೆ ಕಾರಣವೇನು? ಗುಪ್ತಚರ ಮಾಹಿತಿ ಇದ್ದರೂ ನಿರ್ಲಕ್ಷ್ಯ!
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಡೆಸಿದ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ಹರಿಯಾಣದ ನುಹ್ನಲ್ಲಿ ಸೋಮವಾರ ನಾಲ್ವರು ಸಾವನ್ನಪ್ಪಿದ್ದಾರೆ. ಹಿಂಸಾಚಾರ ಇದೀಗ ಗುರುಗ್ರಾಮಕ್ಕೂ ವ್ಯಾಪಿಸಿದ್ದು, ಮಂಗಳವಾರವೂ ವಿಧ್ವಂಸಕ ಘಟನೆಗಳು ನಡೆದಿವೆ. ನುಹ್ನಲ್ಲಿನ ಹಿಂಸಾಚಾರದ ಕುರಿತು ಇಂಡಿಯಾ ಟುಡೇ ನಡೆಸಿದ ತನಿಖೆಯು ಹಿಂಸಾಚಾರಕ್ಕೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದೆ.
ವಿಶ್ವ ಹಿಂದೂ ಪರಿಷತ್ನ 130-ಕಿಮೀ ಬ್ರಜ್ ಮಂಡಲ್ ಯಾತ್ರೆಯ ಮೆರವಣೆಗೆ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹಾದುಹೋಗುವ ಸಂಭವನೀಯ ತೊಂದರೆಗಳ ಬಗ್ಗೆ ತಮ್ಮ ಇಲಾಖೆಯು ಸ್ಥಳೀಯ ಅಧಿಕಾರಿಗಳಿಗೆ ಔಪಚಾರಿಕ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದು ಜಿಲ್ಲೆಯಾದ್ಯಂತ ಗುಪ್ತಚರ ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿರುವ ನುಹ್ ಜಿಲ್ಲಾ ಇನ್ಸ್ಪೆಕ್ಟರ್ (ಸಿಐಡಿ) ವಿಶ್ವಜೀತ್ ಹೇಳಿದ್ದಾರೆ.

ನಾವು ಈಗಾಗಲೇ ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ ಮೆರವಣಿಗೆ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹಾದುಹೋಗುತ್ತದೆ. ಅಲ್ಲಿ ಈ ಜನ ಘೋಷಣೆಗಳನ್ನು ಕೂಗುತ್ತಾ ಕತ್ತಿಗಳನ್ನು ಬೀಸಿದ್ದಾರೆ ಎಂದು ವಿಶ್ವಜೀತ್ ಇಂಡಿಯಾ ಟುಡೇ ವಿಶೇಷ ತನಿಖೆಗೆ ತಿಳಿಸಿದರು. "ನಾವು ಸುಮಾರು ಒಂದು ವಾರ ಅಥವಾ ಹತ್ತು ದಿನಗಳ ಹಿಂದೆ ಸರ್ಕಾರದೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದೇವೆ" ಎಂದು ಅವರು ಹೇಳಿದರು.
ಗೋರಕ್ಷಕರ ಮೇಲೆ ಕೋಪ
ಬಜರಂಗದಳಕ್ಕೆ ಸಂಬಂಧಿಸಿದ ಕುಖ್ಯಾತ ಗೋರಕ್ಷಕ ಮೋನು ಮಾನೇಸರ್ ಅವರು ಈ ಹಿಂದೆ ಯಾತ್ರೆಯಲ್ಲಿ ಭಾಗವಹಿಸುವ ಕುರಿತು ವೀಡಿಯೊ ಸಂದೇಶಗಳನ್ನು ನೀಡಿದ್ದರು. ಆದಾಗ್ಯೂ, ಅವರ ಉಪಸ್ಥಿತಿಯು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಗುಂಪು ಹೆದರಿದ ಕಾರಣ ಅವರು ವಿಎಚ್ಪಿಯ ಸಲಹೆಯ ಮೇರೆಗೆ ಭಾಗವಹಿಸಲಿಲ್ಲ. ಆದರೆ ಅವರ ಉಪಸ್ಥಿತಿಯ ಬಗ್ಗೆ ವದಂತಿಯು ಹಿಂಸಾಚಾರಕ್ಕೆ ಪ್ರಚೋದಕವಾಗಿ ಕಾರ್ಯನಿರ್ವಹಿಸಿತು.
"ಯಾರೋ ಅವರು (ಮೋನು ಮನೇಸರ್) ಬರುತ್ತಿದ್ದಾರೆ ಎಂದು ವದಂತಿಯನ್ನು ಹರಡಿದರು. ಹೀಗಾಗಿ ಒಂದು ಗುಂಪು (ಸ್ಥಳೀಯರು) ಯಾತ್ರೆಯನ್ನು ಮುಂದುವರಿಸುವುದನ್ನು ತಡೆಯಲು ತಯಾರಿ ನಡೆಸಿದರು. ಅವರು ಅದರ ಮಾರ್ಗವನ್ನು ನಿರ್ಬಂಧಿಸಲು ಬಯಸಿದ್ದರು" ಎಂದು ವಿಶ್ವಜೀತ್ ಹೇಳಿದರು.
"ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸಬಹುದು ಮತ್ತು ಜನಸಂದಣಿಯನ್ನು ಚದುರಿಸಬಹುದು ಎಂದು ಭಾವಿಸಿದ್ದರು (ತೊಂದರೆ ಉಂಟಾದರೆ). ಅವರು ಅದನ್ನು ಸಾಮಾನ್ಯವಾಗಿ ತೆಗೆದುಕೊಂಡರು. ಅವರು ಮೋನು ಮಾನೇಸರ್ ಕಾಣಿಸಿಕೊಳ್ಳಲಿಲ್ಲ ಎಂದು ಸ್ಥಳೀಯರಿಗೆ ಮನವರಿಕೆ ಮಾಡಬಹುದೆಂದು ಅವರು ಭಾವಿಸಿದರು. ಆದರೆ ಅದು ಸಾಧ್ಯವಾಗಿಲ್ಲ. ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ" ಅವರು ಇಂಡಿಯಾ ಟುಡೇಗೆ ತಿಳಿಸಿದರು.
ವಿಶ್ವಜೀತ್ ಪ್ರಕಾರ, ಮೋನು ಮಾನೇಸರ್ ಯಾತ್ರೆಗೆ ಹಾಜರಾಗುತ್ತಾರೆ ಎಂಬ ವದಂತಿ ಹರಡಿದ ನಂತರ ಸ್ಥಳೀಯರು ಗ್ರಾಮಗಳಲ್ಲಿ ತ್ವರಿತವಾಗಿ ಜಮಾಯಿಸಿದರು. ಅವರು ತಮ್ಮ ಬೈಕ್ಗಳಲ್ಲಿ ಯಾತ್ರೆಯ ಮಾರ್ಗಕ್ಕೆ ತೆರಳಿದರು. ದಾಳಿ ಮಾಡಿವರೆಲ್ಲರೂ 17-22 ವರ್ಷದೊಳಗಿನ ಯುವಕರು. ಅವರಲ್ಲಿ ಯಾರೂ ಪ್ರಬುದ್ಧರಾಗಿಲ್ಲ ಎಂದು ವಿಶ್ವಜೀತ್ ಹೇಳಿದ್ದಾರೆ.
ಸೈಬರ್ ಅಪರಾಧದ ಮೇಲೆ ಕ್ರ್ಯಾಕ್ಡೌನ್
ಈಗ ದೇಶದಲ್ಲಿ ಸೈಬರ್ ಅಪರಾಧದ ಕುಖ್ಯಾತ ಕೇಂದ್ರವಾಗಿರುವ ನುಹ್ನಲ್ಲಿನ ಸೈಬರ್ ಪೊಲೀಸ್ ಠಾಣೆಗೆ ಗಲಭೆಕೋರರು ಬಸ್ಸನ್ನು ನುಗ್ಗಿಸಿದ್ದಾರೆ. ವಿಶ್ವಜೀತ್ ಪ್ರಕಾರ, ಪೊಲೀಸ್ ಠಾಣೆಯ ಕ್ರಮಗಳು ಜಿಲ್ಲೆಯ ಗ್ರಾಮಸ್ಥರನ್ನು ಕೆರಳಿಸಿದೆ.
"ಸೈಬರ್ ಕ್ರೈಮ್ ವಿರುದ್ಧದ ದಮನವು ಅವರಿಗೆ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಿದೆ. ಹೆಚ್ಚುವರಿಯಾಗಿ, ಗೋಹತ್ಯೆಯ ಮೇಲೆ ನಿರ್ಬಂಧಗಳಿವೆ. ಪೊಲೀಸರು ತಮ್ಮ ಮನೆಗಳ ಮೇಲೆ ಏಕೆ ದಾಳಿ ಮಾಡುತ್ತಿದ್ದಾರೆ ಎಂದು ಅವರು (ಸ್ಥಳೀಯರು) ಆಶ್ಚರ್ಯ ಪಡುತ್ತಾರೆ" ಎಂದು ವಿಶ್ವಜೀತ್ ಹೇಳಿದರು.
ಇಂಟೆಲ್ ಸಮನ್ವಯವಿಲ್ಲ
ಹಿಂಸಾಚಾರ ತೆರೆದುಕೊಂಡ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಕಿಶನ್ ಕುಮಾರ್ ಅವರು ಯಾತ್ರೆಯ ಸಮಯದಲ್ಲಿ ಸಂಭವನೀಯ ತೊಂದರೆಗಳ ಬಗ್ಗೆ ತಮ್ಮ ಮೇಲಧಿಕಾರಿಗಳಿಂದ ಮಾಹಿತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸಂಭವಿಸಬಹುದಾದ ತೊಂದರೆಯ ಬಗ್ಗೆ ಈಗಾಗಲೇ ಮಾಹಿತಿ ಇದ್ದರೂ ರಕ್ಷಣೆ ಅಥವಾ ಘರ್ಷಣೆಯನ್ನು ತಪ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿದು ಬಂದಿದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications