Thiruvonam Bumper Lottery 2024: ಕೇರಳದ ಬಂಪರ್ ಲಾಟರಿ ಡ್ರಾನಲ್ಲಿ 25 ಕೋಟಿ ರೂಪಾಯಿ ಗೆದ್ದ ವ್ಯಕ್ತಿ ಯಾರು ಗೊತ್ತೇ?
ಕೇರಳ ಸರ್ಕಾರ ತಿರುವೋಣಂ ಲಾಟರಿ ಟಿಕೆಟ್ನ ಬಹುಮಾನ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿರುವ ಎನ್ಜಿಆರ್ ಲಾಟರಿ ಅಂಗಡಿಯಲ್ಲಿ ಮಾರಾಟವಾದ 'ಟಿಜಿ 434222' ಟಿಕೆಟ್ ನಂಬರ್ಗೆ ಬಂಪರ್ ಬಹುಮಾನ ರೂಪದಲ್ಲಿ 25 ಕೋಟಿ ರೂಪಾಯಿ ನೀಡಲಾಗುತ್ತಿದೆ. ಈ ಬಹುಮಾನ ಮೈಸೂರು ಮೂಲದ ನಾಗರಾಜು ಅವರಿಗೆ ಲಭಿಸಿದೆ.
ಹೌದು... ಒಂದು ತಿಂಗಳ ಹಿಂದೆ ಈ ಲಾಟರಿ ಟಿಕೆಟ್ ಮಾರಾಟವಾಗಿತ್ತು. ಇದನ್ನು ಮೈಸೂರು ಮೂಲದ ನಾಗರಾಜು ಖರೀದಿ ಮಾಡಿದ್ದರು. ನಾಗರಾಜು ಅವರು 15 ವರ್ಷಗಳಿಂದ ಲೇಬರ್ ಕೆಲಸ ಮಾಡುತ್ತಿದ್ದಾರೆ. ತಿಂಗಳ ಹಿಂದೆ ಅವರು ಲೇಬರ್ ಕೆಲಸ ಮಾಡಲು ವಯನಾಡಿಗೆ ಹೋಗಿದ್ದರು. ಈ ವೇಳೆ ಲಾಟರಿ ಟಿಕೆಟ್ ಪಡೆದುಕೊಂಡಿದ್ದರು. ಅವರಿಗೆ ಲಾಟರಿ ಕಮಿಷನ್ ಆಗಿ 2.5 ಕೋಟಿ ರೂಪಾಯಿ ಸಿಗಲಿದೆ.

ಇದರಿಂದಾಗಿ ದಿಢೀರ್ ಶ್ರೀಮಂತರಾಗುವ ಅದೃಷ್ಟವನ್ನು ನಾಗರಾಜು ಪಡೆದುಕೊಂಡಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಗೆ ಪ್ರತಿ ವರ್ಷದಂತೆ ತಿರುವೋಣಂ ಲಾಟರಿಯ ಲಕ್ಕಿ ಡ್ರಾ ನಡೆಯಿತು. ಬಳಿಕ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಬಾರಿ 7,135,938 ಲಾಟರಿ ಟಿಕೆಟ್ಗಳು ಮಾರಾಟವಾಗಿವೆ. ಅತಿ ಹೆಚ್ಚು ಟಿಕೆಟ್ಗಳು ಪಾಲಕ್ಕಾಡ್ ಜಿಲ್ಲೆಯಲ್ಲಿ ಮಾರಾಟವಾಗಿವೆ. ತಿರುವನಂತಪುರದಲ್ಲಿ 9,46,260 ಟಿಕೆಟ್ಗಳು ಮಾರಾಟವಾಗಿವೆ. ತ್ರಿಶೂರ್ನಲ್ಲಿ 8,61,000 ಟಿಕೆಟ್ಗಳು ಮಾರಾಟವಾಗಿವೆ.
ಲಾಟರಿ ಚೀಟಿಗಳ ಮೇಲೆ ಚಿತ್ರಿಸಿದ ಸಂಖ್ಯೆಗಳ ಆಧಾರದ ಮೇಲೆ ಭಾಗವಹಿಸುವವರು ಗೆಲ್ಲುವ ಆಟ ಇದಾಗಿದೆ. ಈ ಲಾಟರಿ ಆಟದೊಂದಿಗೆ ಹಲವಾರು ಜನ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಮಾರಾಟಗಾರರಿಂದ 500 ರೂಪಾಯಿಗೆ ಟಿಕೆಟ್ ಖರೀದಿಸಿದರೆ ಅದರ ಮೇಲೆ ಇರುವ ನಂಬರ್ ಘೋಷಣೆ ವೇಳೆ ಇದ್ದರೆ ಆ ಟಿಕೆಟ್ ಖರೀದಿದಾರ ವಿಜೇತರಾಗುತ್ತಾರೆ.
ವಿಜೇತರಿಗೆ ಮೂರನೇ ಬಹುಮಾನಗಳು ಘೋಷಣೆಯಾದ ಬಳಿಕ 20 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿದರೆ, 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂಪಾಯಿ ಹಾಗೂ ಮೊದಲ ಬಹುಮಾನ ಗೆಲ್ಲುವ ಒಬ್ಬರಿಗೆ 25 ಕೋಟಿ ರೂ. ನೀಡಲಾಗುತ್ತದೆ.
ಇನ್ನೂ 4ಮೇ ಬಹುಮಾನವಾಗಿ 5 ಲಕ್ಷ, 5ನೇ ಬಹುಮಾನವಾಗಿ 2 ಲಕ್ಷ, 6ನೇ ಬಹುಮಾನವಾಗಿ 5 ಸಾವಿರ ರೂ, 7ನೇ ಬಹುಮಾನವಾಗಿ 1,000 ರೂಪಾಯಿ, 8ನೇ ಬಹುಮಾನ 1 ಸಾವಿರ, 9ನೇ ಬಹುಮಾನವಾಗಿ 500 ರೂ.ಗಳನ್ನು ನೀಡಲಾಗುತ್ತದೆ.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications