ಮತ್ತೆ ಎಡವಿದ ತೆಹಲ್ಕಾ 'ತರುಣ'ನ ಕೈಗೆ ಭಗವದ್ಗೀತೆ!

'ತಮ್ಮಿಬ್ಬರದೂ ಸಹಮತದ ಕ್ರಿಯೆ. ಅದು ಆರೋಗ್ಯಕರ ಪ್ರಣಯಚೇಷ್ಟೆಯ ಕ್ರಿಯೆಯಾಗಿತ್ತು. ಇದರಿಂದಾಗಿ ಯುವತಿಯೂ ಹಿರಿಹಿರಿ ಹಿಗ್ಗಿದ್ದಳು. ಅಂಥದ್ದರಲ್ಲಿ ನನ್ನದೇನೂ ತಪ್ಪಿಲ್ಲ' ಎಂದು ಆರೋಪಿ ತೇಜಪಾಲ್ ಹೇಳಿಕೊಂಡಿದ್ದಾರೆ ಎಂದು ಗೋವಾ ಕ್ರೈಂ ಬ್ರಾಂಚ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮೊದಲು 'ತನ್ನಿಂದ ತಪ್ಪಾಗಿದೆ' ಎಂದು ಹೇಳಿಕೆ ನೀಡಿದ್ದ ತೇಜಪಾಲ್ ನಂತರ ಅದು 'ಸಹಮತದ ಕ್ರಿಯೆ' ಎಂದು ಪತ್ರಿಕಾ ಹೇಳಿಕೆ ನೀಡಿ ನಿಲುವು ಬದಲಿಸಿದ್ದರು. ಈಗ ಬಂಧನದ ನಂತರವೂ ತೇಜಪಾಲ್ ತಮ್ಮ ಬದಲಾದ ನಿಲುವನ್ನೇ ಮುಂದುವರಿಸಿದ್ದಾರೆ. ಇದರೊಂದಿಗೆ ತಾವು ಮಾಡಿರುವ ಗಂಭೀರವಾದ ಅಪರಾಧವನ್ನು ಪೊಲೀಸರ ಮುಂದೆ ದಾಖಲಾರ್ಹ ರೀತಿಯಲ್ಲಿ ಒಪ್ಪಿಕೊಳ್ಳುವ ಮೂಲಕ ತಮಗೆ ತಾವೇ ಮುಳುಗುನೀರು ತಂದುಕೊಂಡಿದ್ದಾರೆ.
23ರ ಹರೆಯದ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ 50 ವರ್ಷದ ತೇಜಪಾಲರನ್ನು ಬಾಂಬೋಲಿಂನ ಗ್ರ್ಯಾಂಡ್ ಹಯಾತ್ ಪಂಚತಾರಾ ಹೋಟೆಲಿಗೆ ಮಂಗಳವಾರ ಕರೆದೊಯ್ದ ಪೊಲೀಸರು, ಘಟನೆಯ ಮರುಸೃಷ್ಟಿ ಮಾಡಿದರು. ತೇಜ್ಪಾಲ್ ಭಾನುವಾರದಿಂದ 6 ದಿನಗಳ ಕಾಲ ಪೊಲೀಸ್ ವಶದಲ್ಲಿದ್ದಾರೆ. ಸೋಮವಾರ ಅವರು ಪುರುಷತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರು. ಈ ಮಧ್ಯೆ, ಬುಧವಾರ ತೇಜಪಾಲರನ್ನು 2ನೇ ಸುತ್ತಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು, ತಾವಿರುವ ಜೈಲು ಕೋಣೆಗೆ ಫ್ಯಾನ್ ಹಾಕಿಸಿಕೊಡಿ ಎಂದು ತೇಜ್ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ತರುಣ್ ತೇಜಪಾಲ್ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆ ಸಲ್ಲಿಸುವಂತೆ ಸೂಚಿಸಿ, ತೆಹೆಲ್ಕಾ ಪತ್ರಿಕೆಯ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧುರಿ ಹಾಗೂ ಇತರೆ ಮೂವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ತೇಜಪಾಲ್ ಕೈಗೆ ಶ್ರೀರಾಮ ಸೇನೆಯಿಂದ ಭಗವದ್ಗೀತೆ !:
ಈ ಮಧ್ಯೆ, ತೆಹೆಲ್ಕಾ ಕಾಮಕಾಂಡದ ತೇಜಪಾಲರಿಗೆ ಕರ್ನಾಟಕದ ಶ್ರೀರಾಮ ಸೇನೆ ಸಂಘಟನೆ ವಿನೂತನ ಕೊಡುಗೆ ನೀಡಿದೆ. ಕಾಮಕಾಂಡದ ನಂತರ ತೇಜಪಾಲರ ಮಾನಸಿಕ ನಡುವಳಿಕೆ ಮತ್ತು ನೈತಿಕತೆಯನ್ನು ಬದಲಾಯಿಸಲು ನೆರವಾಗುವಂತೆ ಭಗವದ್ಗೀತೆ ಪುಸ್ತಕವನ್ನು ನೀಡಿದೆ. ಗೋವಾದ ಜೈಲು ಅಧಿಕಾರಿಗಳನ್ನು ಭೇಟಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ಭಗವದ್ಗೀತೆ ಪುಸ್ತಕವನ್ನು ಅಧಿಕಾರಿಗಳ ಕೈಗಿತ್ತು ಅದನ್ನು ತೇಜಪಾಲರಿಗೆ ಹಸ್ತಾಂತರಿಸುವಂತೆ ಕೋರಿದ್ದಾರೆ. ದಂಗೆಯೊಂದನ್ನು ಆಯೋಜಿಸಲು ಶ್ರೀರಾಮ ಸೇನೆ ಹಣ ಕೇಳಿದೆ ಎಂದು ತೆಹಲ್ಕಾ ಪತ್ರಿಕೆ 2010ರಲ್ಲಿ ವರದಿ ಮಾಡಿತ್ತು.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications