ಟೆಕ್ಕಿ ಅನೈತಿಕ ಸಂಬಂಧ: ಹಸುಗೂಸು, ಅಜ್ಜಿ ಹತ್ಯೆ
ತಿರುವನಂತಪುರಂ, ಏ.18: ಮೂರೂವರೆ ವರ್ಷದ ಬಾಲಕಿ ಮತ್ತು ಆ ಮಗುವಿನ ಅಜ್ಜಿಯನ್ನು ಟೆಕ್ಕಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ತಿರುವನಂತಪುರದಿಂದ 37 ಕಿಮೀ ದೂರದಲ್ಲಿರುವ ಅತ್ತಿಂಗಳ್ ಬಳಿಯಿರುವ ಅಲಂಕೋಡ್ ಸಮೀಪ ಬುಧವಾರ ಈ ಹತ್ಯೆಗಳು ನಡೆದಿವೆ.
ಅನೈತಿಕ ಸಂಬಂಧ ಹೊಂದಿದ ಟೆಕ್ಕಿ ಮಹಿಳೆಯೊಬ್ಬಳು ತನ್ನ ಟೆಕ್ಕಿ ಪ್ರಿಯಕರನ ಸಹಾಯದಿಂದ ಈ ಹೇಯ ಹತ್ಯೆಗಳನ್ನು ಮಾಡಿಸಿದ್ದಾಳೆ. ಅನು ಶಾಂತಿ (30) ಆರೋಪಿ ಮಹಿಳೆ. ಘಟನೆಯಲ್ಲಿ ಅನು ಶಾಂತಿಯ ಗಂಡ ಲಿಜೀಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆತನಿಗೂ ಗಂಭೀರ ಗಾಯಗಳಾಗಿವೆ. ಲಿಜೀಶ್ ರಾಜ್ಯ ವಿದ್ಯುತ್ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್.
ಪೊಲೀಸರು ಈ ಅನು ಶಾಂತಿ ಹಾಗೂ ಕೊಲೆ ಆರೋಪಿ ನಿನೋ ಮ್ಯಾಥ್ಯೂನನ್ನು ಬಂಧಿಸಿದ್ಧಾರೆ. ಮೃತಪಟ್ಟವರು ಸ್ವಸ್ತಿಕಾ ಮತ್ತು ಲಿಜೀಶ್ ತಾಯಿ 60 ವರ್ಷದ ಒಮಾನಾ. (ಚಿತ್ರದಲ್ಲಿ ಲಿಜೀಶ್, ಅನು ಶಾಂತಿ ಮತ್ತು ಮೃತ ಸ್ವಸ್ತಿಕಾ)

ಸ್ವಸ್ತಿಕಾ ಮತ್ತು ಒಮಾನಾ ಇಬ್ಬರೇ ಮನೆಯಲ್ಲಿದ್ದಾಗ ನಿನೋ ಮ್ಯಾಥ್ಯೂ ಅವರನ್ನು ಹತ್ಯೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತನ್ನ ಮೇಲೆ ಅನುಮಾನ ಬರಬಾರದೆಂದು ಶಾಂತಿ ತನ್ನ ಕಚೇರಿಯಲ್ಲೇ ಕೆಲಸದಲ್ಲಿ ತೊಡಗಿದ್ದಳು. ಹತ್ಯೆಯ ನಂತರ ಮನೆಗೆ ಬಂದ ಶಾಂತಿಯ ಪತಿ ಲಿಜೀಶ್ ಮೇಲೆ ಮುಂಬಾಗಿಲ ಹಿಂದೆ ಬಚ್ಚಿಟ್ಟುಕೊಂಡಿದ್ದ ಮ್ಯಾಥ್ಯೂ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಲಿಜೀಶ್ ಜೋರಾಗಿ ಕೂಗಿಕೊಂಡಿದ್ದರಿಂದ ಮ್ಯಾಥ್ಯೂ ಪರಾರಿಯಾಗಿದ್ದಾನೆ.
ಲಿಜೀಶ್ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಆತನ ನೆರವಿಗೆ ಧಾವಿಸಿದ್ದಾರೆ. ಆಗ ಅಡುಗೆ ಮನೆಯೊಳಗೆ ಅಜ್ಜಿ ಮತ್ತು ಮೊಮ್ಮಗಳು ಇನ್ನೂ ಜೀವಂತವಾಗಿದ್ದರಂತೆ. ಆದರೆ ಕೆಲ ಹೊತ್ತಿನಲ್ಲೇ ಅಸುನೀಗಿದ್ದಾರೆ. ಈ ಮಧ್ಯೆ ನೆರೆಮನೆಯವರು ಲಿಜೀಶ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮಾರ್ಗ ಮಧ್ಯೆ ಲಿಜೀಶ್ ಹಂತಕನ ಬಗ್ಗೆ ಸುಳಿವು ನೀಡಿದ್ದಾನೆ. ಆ ಮಾಹಿತಿ ಪೊಲೀಸರ ಕಿವಿಗೆ ಬೀಳುತ್ತಿದ್ದಂತೆ ಪೊಲೀಸರು ಸೀದಾ ಮ್ಯಾಥ್ಯೂ ಮನೆಗೆ ತೆರಳಿ ಅವನನ್ನು ಬಂಧಿಸಿದ್ದಾರೆ.
ಹೆಚ್ಚಿನ ವಿಚಾರಣೆಯ ನಂತರ ಮ್ಯಾಥ್ಯೂ ಹತ್ಯೆಯಲ್ಲಿ ಅನು ಶಾಂತಿ ಸಹ ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಅದರಂತೆ ಪೊಲೀಸರು ಶಾಂತಿಯನ್ನು ಸಹ ಬಂಧಿಸಿದ್ದಾರೆ. ಮ್ಯಾಥ್ಯೂ ಮತ್ತು ಶಾಂತಿ ಒಂದೇ ಕಂಪನಿಯಲ್ಲಿ ಟೆಕ್ಕಿಗಳು. ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಮ್ಯಾಥ್ಯೂಗೆ ಮದುವೆಯಾಗಿದ್ದು, ನಾಲ್ಕು ವರ್ಷದ ಮಗು ಸಹ ಇದೆ.
ಮ್ಯಾಥ್ಯೂನ ಹೆಂಡತಿ ಕೂಡ ಟೆಕ್ಕಿ. ಆದರೆ ಆಕೆಯ ಜತೆ ಮ್ಯಾಥ್ಯೂ ಸಂಬಂಧ ಹಳಸಿತ್ತು. ಶಾಂತಿ ಜತೆ ಮ್ಯಾಥ್ಯೂಗೆ ಅಕ್ರಮ ಸಂಬಂಧವಿರುವುದು ಗೊತ್ತಾದ ಬಳಿಕ ನಿನೋ ಮ್ಯಾಥ್ಯೂ ಸಂಸಾರದಲ್ಲಿ ಇನ್ನಷ್ಟು ಬಿರುಕು ಮೂಡಿತ್ತು. ಅವರಿಬ್ಬರೂ ಒಂದೇ ಕಟ್ಟಡದಲ್ಲಿದ್ದರೂ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದರು.
ಇನ್ನು ಶಾಂತಿ ಅದೇ ಕಂಪನಿಯಲ್ಲಿ ಟೀಂ ಲೀಡರ್. ಮೃತ ಅಜ್ಜಿ ಒಮಾನಾ ತಾಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದು, ನಿವೃತ್ತಿ ಹೊಂದಿದ್ದರು. ಒಮಾನಾ ಪತಿ ಅಂದರೆ ಲಿಜೀಶ್ ತಂದೆ ತಂಗಪ್ಪನ್ ಆಹಾರ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದವರು. ಹತ್ಯೆಗಳು ನಡೆದಾಗ ತಂಗಪ್ಪನ್ ಸಹ ಮನೆಯಲ್ಲಿರಲಿಲ್ಲ. ಒಮಾನಾ ಮತ್ತು ತಂಗಪ್ಪನ್ ದಂಪತಿಗೆ ಇನ್ನೂ ಒಬ್ಬ ಕಿರಿಯ ಪುತ್ರನಿದ್ದು, ಆತ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸದಲ್ಲಿದ್ದಾನೆ.
ಸ್ವಸ್ತಿಕಾ, ಒಮಾನಾ ಮತ್ತು ಲಿಜೀಶ್ - ಮೂವರನ್ನೂ ಹತ್ಯೆ ಮಾಡಿ ಹೊಸ ಸಂಸಾರ ಹೂಡಲು ಪ್ಲಾನ್ ಮಾಡಿದ್ದೆವು. ಹತ್ಯೆಗಳ ಬಗ್ಗೆ ಎಂಬ ಅನುಮಾನ ಬರಕೂಡದೆಂದು ಮರ್ಡರ್ ಫಾ್ ಗೇನ್ ಎಂದು ನಿರೂಪಿಸಲು ಸ್ವಸ್ತಿಕಾ ಮತ್ತು ಒಮಾನಾ ಮೈಮೇಲಿದ್ದ ಒಡವೆಗಳನ್ನ ತೆಗೆದುಕೊಂಡುಹೋಗಿದ್ದೆ. ಆದರೆ, ಲಿಜೀಶ್ ಪ್ರಾಣಾಪಾಯದಿಂದ ಪಾರಾಗಿದ್ದು ಎಲ್ಲಾ ಯೋಜನೆಗಳು ತಲೆಕೆಳಗಾದವು ಎಂದು ಹತ್ಯೆ ಆರೋಪಿ ಮ್ಯಾಥ್ಯೂ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.
-
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ












Click it and Unblock the Notifications