ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಸುಪ್ರೀಂ ನಲ್ಲಿ ಅರ್ಜಿ

ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಸುಪ್ರೀ ಕೋರ್ಟ್ ಗೆ ಅರ್ಜಿ. ಹೆಚ್ಚುವರಿ ನೀಡು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 5: ಕರ್ನಾಟಕದಿಂದ ತಮಿಳುನಾಡಿಗೆ ಬಿಡಲಾಗುವ ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದೆ.

ಕಳೆದ ವರ್ಷ ಬಿಡಬೇಕಿದ್ದ ನೀರಿನಲ್ಲಿ 5.966 ಟಿಎಂಸಿಯಷ್ಟು ನೀರು ಕಡಿಮೆಯಾಗಿತ್ತು. ಈ ವರ್ಷ ಬಿಡಬೇಕಿರುವ ನೀರಿನ ಕೋಟಾದಲ್ಲಿ ಹಿಂದಿನ ವರ್ಷದ ಕೊರೆತೆಯನ್ನೂ ಸೇರಿಸಿ ಹೆಚ್ಚುವರಿಯಾಗಿ 5 ಟಿಎಂಸಿ ನೀರು ಬಿಡಬೇಕೆಂದು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.

ಸರಕಾರಕ್ಕೆ ಗೊತ್ತಿಲ್ಲವಂತೆ, ತಮಿಳುನಾಡಿಗೆ ನೀರು ಬಿಟ್ಟಿದ್ದು ಯಾರು?ಸರಕಾರಕ್ಕೆ ಗೊತ್ತಿಲ್ಲವಂತೆ, ತಮಿಳುನಾಡಿಗೆ ನೀರು ಬಿಟ್ಟಿದ್ದು ಯಾರು?

Tamilnadu government submits plea to Supreme court regarding Cauvery Water

ಕಳೆದೊಂದು ವಾರದಿಂದಲೇ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನೀರು ಬಿಡಲಾರಂಭಿಸಿದೆ. ಇದರ ವಿರುದ್ಧ ಈಗಾಗಲೇ ರಾಜ್ಯದ ರೈತರು ಪ್ರತಿಭಟನೆಗಿಳಿದಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ವ್ಯಾಜ್ಯ ನ್ಯಾಯಾಧೀಕರಣದ ನಿರ್ದೇಶನದಂತೆಯೇ ನೀರು ಬಿಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಇದೆಲ್ಲರ ನಡುವೆಯೇ ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಹೆಚ್ಚುವರಿ ನೀರಿಗೆ ಮನವಿ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

English summary
Tamilnadu government submits plea regarding Cauveri Water Crisis in Supreme Court on Wednessday (July 5th) and it urges the apex court to direct Karnataka Government to release excess of 5 TMC of Water to Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X