ಕೈಲಾಸ್ ಮಾನಸ ಸರೋವರ ವಾರ್ಷಿಕ ಯಾತ್ರೆಗೆ ಸುಷ್ಮಾ ಸ್ವರಾಜ್ ಚಾಲನೆ
ನವದೆಹಲಿ, ಜೂನ್ 11: ಮೊದಲ ಗುಂಪಿನ ಭಕ್ತಾದಿಗಳನ್ನು ಒಳಗೊಂಡ ಕೈಲಾಸ್ ಮಾನಸ ಸರೋವರ ವಾರ್ಷಿಕ ಯಾತ್ರೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಚಾಲನೆ ನೀಡಿದರು. ಈ ಯಾತ್ರೆಯ ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಶುಚಿತ್ವಕ್ಕೂ ಮಹತ್ವ ನೀಡುವಂತೆ ಹೇಳಿದರು.
ಶಿವನಿಗೆ ಎಷ್ಟು ಭಕ್ತಿ, ಗೌರವ ನೀಡುತ್ತೇವೋ ಆತನ ವಾಸಸ್ಥಳಕ್ಕೂ ಅಷ್ಟೇ ಮಹತ್ವ ನೀಡಬೇಕು. ಆದ್ದರಿಂದ ಅಲ್ಲಿಗೆ ತೆರಳುವ ದಾರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಾವಿರದ ನಾನೂರಾ ಮೂವತ್ತು ಭಕ್ತರು ಇಪ್ಪತ್ತೈದು ಗುಂಪುಗಳಲ್ಲಿ ಈ ವರ್ಷ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಅರವತ್ತು ಭಕ್ತರನ್ನು ಒಳಗೊಂಡ ಹದಿನೆಂಟು ಗುಂಪು ಲಿಪುಲೆಕ್ ಪಾಸ್ ಮಾರ್ಗದಲ್ಲಿ ಹಾಗೂ ಐವತ್ತು ಭಕ್ತರನ್ನು ಒಳಗೊಂಡ ಏಳು ಗುಂಪು ಹೊಸದಾಗಿ ಅರಂಭವಾಗಿರುವ ನಾಥು ಲಾ ಮಾರ್ಗದಲ್ಲಿ ಮಾನಸ ಕೈಲಾಸ ಮಾನಸ ಸರೋವರಕ್ಕೆ ತೆರಳಲಿದೆ.
ಮುಂದಿನ ನಾಲ್ಕು ತಿಂಗಳ ಕಾಲ ಈ ಯಾತ್ರೆ ಮುಂದುವರಿಯಲಿದೆ. ಈ ವರ್ಷ ನಾಲ್ಕು ಸಾವಿರದ ನಾನೂರಾ ನಲವತ್ತೆರಡು ಅರ್ಜಿಗಳು ಬಂದಿದ್ದವು. ಕಳೆದ ವರ್ಷ ಈ ಸಂಖ್ಯೆ ಎರಡು ಸಾವಿರದ ಆರು ನೂರು ಅರ್ಜಿಗಳು ಬಂದಿದ್ದವು. ಕಂಪ್ಯೂಟರ್ ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಕಳೆದ ತಿಂಗಳು ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಆ ದೇವರ ದಯೆಯಿಂದ ಬೇಗ ಚೇತರಿಸಿಕೊಂಡೆ. ನನ್ನ ಪರವಾಗಿ ಆ ದೇವರನ್ನು ಪ್ರಾರ್ಥಿಸಿ. ನಾನು ಈ ವರೆಗೆ ಮಾನಸ ಸರೋವರಕ್ಕೆ ಹೋಗಿಲ್ಲ. ಮುಂದೆ ಹೋಗುವುದಕ್ಕೆ ಆಗುತ್ತದೋ-ಇಲ್ಲವೋ ಗೊತ್ತಿಲ್ಲ ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications