Stock Markert Holiday: ಆಗಸ್ಟ್ 27ರಂದು ಬುಧವಾರ ಷೇರುಪೇಟೆ ರಜೆನಾ? 2025ರ ರಜೆಗಳ ಪಟ್ಟಿ
ಬೆಂಗಳೂರು, ಆಗಸ್ಟ್ 26: ಭಾರತಾದ್ಯಂತ ಗಣೇಶನನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ಈ ವರ್ಷ ಆಗಸ್ಟ್ 27 ರ ಬುಧವಾರ ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಭಾರತೀಯ ಷೇರು ಮಾರುಕಟ್ಟೆಗೆ (Stock Market Holidays) ರಜೆ ಇರುತ್ತೋ ಇಲ್ಲವೋ? ಎಂಬ ಅನುಮಾನ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ. ಜೊತೆಗೆ ಮುಂದಿನ ಹಬ್ಬಗಳು ಹಾಗೂ ಪ್ರಮುಖ ದಿನಗಳಲ್ಲಿ ಯಾವಾಗೆಲ್ಲ ಸ್ಟಾಕ್ ಮಾರುಕಟ್ಟೆ ರಜೆ ಇರುತ್ತದೆ ಎಂಬದರ ಪಟ್ಟಿ ಇಲ್ಲಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ಆಗಸ್ಟ್ 27ರ ಬುಧವಾರ ಗಣೇಶ ಹಬ್ಬದಾಚರಣೆ ರಜೆ ಹೊಂದಿವೆ. ಯಾವುದೇ ವ್ಯಾಪಾರ, ಇತ್ಯರ್ಥಗಳು ನಡೆಯುವುದಿಲ್ಲ ಎಂದು ರಜೆ ವೇಳಾಪಟ್ಟಿ ಮಾಹಿತಿ ನೀಡಿದೆ. ಷೇರುಗಳು, ಉತ್ಪನ್ನಗಳು, ಭದ್ರತಾ ಸಾಲ ಮತ್ತು ಸಾಲ (SLB) ವಿಭಾಗಗಳಲ್ಲಿ ಯಾವುದೇ ವಹೀವಾಟು ಇರುವುದಿಲ್ಲ. ಸ್ಟಾರ್ ಮಾರಾಟ, ಖರೀದಿ ಏನಾದರು ಷೇರು ಪೇಟೆಗೆ ಸಂಬಂಧಿಸಿದ ಕೆಲಸಗಳಿದ್ದರೆ ಇಂದೇ ಮಾಡಿಕೊಂಡು ಬಿಡಿ.

ಗಣೇಶ ಹಬ್ಬದಲ್ಲಿ ಮಾತ್ರವಲ್ಲದೇ ಮುಂದಿನ ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಜಯಂತಿ, ದಸರಾ ಹಬ್ಬದ ಪ್ರಯುಕ್ತ ಅಂದು ಸಹ ರಜೆ ನೀಡಲಾಗಿದೆ. 2025ರಲ್ಲಿ ಯಾವೆಲ್ಲ ದಿನ ರಜೆ ಇದೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.
ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ
* ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ/ದಸರಾ ಗುರುವಾರ
* ಅಕ್ಟೋಬರ್ 21: ದೀಪಾವಳಿ ಮತ್ತು ಲಕ್ಷ್ಮಿ ಪೂಜೆ
* ಅಕ್ಟೋಬರ್ 22: ದೀಪಾವಳಿ ಬಲಿಪ್ರತಿಪದ
* ನವೆಂಬರ್ 5: ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್
* ಡಿಸೆಂಬರ್ 25: ಕ್ರಿಸ್ಮಸ್
ಷೇರು ಮಾರುಕಟ್ಟೆ ಸಮಯಗಳು
ದೇಶೀಯ ಷೇರು ಮಾರುಕಟ್ಟೆ ಸಾಮಾನ್ಯ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ಕಾರ್ಯ ತೆರೆದಿರುತ್ತದೆ. ನಿಯಮಿತ ವ್ಯಾಪಾರ ದಿನಗಳಲ್ಲಿ ಬೆಳಗ್ಗೆ 9 ರಿಂದ 9:15 ರವರೆಗೆ ಪೂರ್ವ-ಮುಕ್ತ ಅವಧಿಯೂ ಇರುತ್ತದೆ. ಶನಿವಾರ ಮತ್ತು ಭಾನುವಾರದಂದು ಮಾರುಕಟ್ಟೆ ಸ್ಥಗಿತಗೊಂಡಿರುತ್ತದೆ.
ಬುಧವಾರ ಸರಕು ಮಾರುಕಟ್ಟೆ ಸ್ಥಿತಿ
ನಾಳೆ ಬುಧವಾರ ಆಗಸ್ಟ್ 27 ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಬಂದ್ ಆಗಿರುತ್ತದೆ. ಸಂಜೆ ವ್ಯಾಪಾರ ಅವಧಿಯು ಸಂಜೆ 5 ರಿಂದ ರಾತ್ರಿ 11:55 ರವರೆಗೆ ತೆರೆದಿರಲಿದೆ. ಭಾರತದ ಅತಿದೊಡ್ಡ ಕೃಷಿ ಸರಕು ವಿನಿಮಯ ಕೇಂದ್ರವಾದ ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಕೇಂದ್ರ (NCDEX) ಬಂದ್ ಆಗಿರಲಿದೆ.
ಭಾರತೀಯ ಷೇರು ಮಾರುಕಟ್ಟೆಯು ಆಗಸ್ಟ್ 25 ಲಾಭದೊಂದಿಗೆ ಕೊನೆಗೊಳ್ಳಲಿದೆ. ಮುಕ್ತಾಯದ ವೇಳೆಗೆ, ಬಿಎಸ್ಇ ಸೆನ್ಸೆಕ್ಸ್ 329.06 ಪಾಯಿಂಟ್ (0.40%) ಏರಿಕೆ ಆಯಿತು. 81,635.91 ಕ್ಕೆ ತಲುಪಿತು, ಮತ್ತು ಎನ್ಎಸ್ಇ ನಿಫ್ಟಿ 50 97.65 ಪಾಯಿಂಟ್ಗಳು ಅಥವಾ 0.39 ಪ್ರತಿಶತದಷ್ಟು ಏರಿಕೆಯಾಗಿ 24,967.75 ಆಗಿದೆ. ಬಂದವು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications