ಸೇನೆ ಬತ್ತಳಿಕೆ ಸೇರಿದ ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್
ನವದೆಹಲಿ, ಸೆ. 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಬಾಲಕೋಟ್ ಮೇಲೆ ಭಾರತ ಪ್ರತಿ ದಾಳಿ ನಡೆಸಿತ್ತು. ಜೈಷ್ ಎ ಮೊಹಮ್ಮದ್ ಉಗ್ರರನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿತ್ತು. ಉಗ್ರರ ದಮನಕ್ಕೆ ಅಂದು ಬಳಸಿದ್ದು ಸ್ಪೈಸ್ ಬಾಂಬ್. ಇಂದು ಇದೇ ಸ್ಪೈಸ್ ಬಾಂಬ್ ಗಳನ್ನು ಇಸ್ರೇಲ್ ದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಹೊಸ ಸುಧಾರಿತ ಬಾಂಬ್ ಬಗ್ಗೆ ಮಾಹಿತಿ ಇಲ್ಲಿದೆ...
ಭಾರತೀಯ ಸೇನೆ ತನ್ನ ಬತ್ತಳಿಕೆಯನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲು ಇಸ್ರೇಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, 100 ಸ್ಪೈಸ್ ಬಾಂಬ್ ಖರೀದಿಗೆ ಜೂನ್ ತಿಂಗಳಲ್ಲಿ ಮುಂದಾಗಿತ್ತು. ತಿಂಗಳುಗಳ ಸ್ಪೈಸ್ ಬಾಂಬ್ 2000 ಮೊದಲ ಬ್ಯಾಚ್ ಗ್ವಾಲಿಯರ್ ಏರ್ ಬೇಸ್ ತಲುಪಿದೆ. ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿಗೆ ಈ ಸುಧಾರಿತ ಬಾಂಬ್ ಸಹಕಾರಿಯಾಗಿತ್ತು,
ಇಸ್ರೇಲ್ ದೇಶದ ರಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಉತ್ಪಾದಿಸುವ ಈ ಸ್ಪೈಸ್ ಬಾಂಬ್ ಕೃತಕ ಬುದ್ಧಿಮತ್ತೆ(AI) ಹೊಂದಿದ್ದು, ತನ್ನ ಗುರಿಯನ್ನು ಯಾವುದೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ತಲುಪಿ ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ.

ರಿಯಲ್ ಟೈಮ್ ನಲ್ಲಿ ಎಲೆಕ್ಟ್ರೋ ಆಪ್ಟಿಕಲ್ ಇಮೇಜ್ ನೊಂದಿಗೆ ಹೊಂದಾಣಿಕೆ ನಡೆಸಿ ಸುಮಾರು 60 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಈ ಸ್ಪೈಸ್ ಬಾಂಬ್ ಗಿದೆ. ಬಾಂಬಿನ ಕಂಪ್ಯೂಟರ್ ಮೆಮೋರಿಯಲ್ಲಿ ಗುರಿ, ಗುರಿ ಸಾಗಬೇಕಾದ ಪಥ ಸೇರಿದಂತೆ ಹಲವು ರಿಫರೆನ್ಸ್ ಮಾಹಿತಿಯನ್ನು ಫೀಡ್ ಮಾಡಲಾಗಿರುತ್ತದೆ. ಗುರಿ ಸಾಗುವ ಹಾದಿಯನ್ನು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಲ್ಲ ನಿಪುಣ ಬಾಂಬ್ ಇದಾಗಿದೆ.
ಸ್ಪೈಸ್ ಬಾಂಬ್ ಗಳು ಮೂರು ವಿಧಗಳಲ್ಲಿ ಲಭ್ಯವಿದ್ದು, ಸ್ಪೈಸ್ 2000, ಸ್ಪೈಸ್ 1000 ಹಾಗೂ ಸ್ಪೈಸ್ 250. ಈ ಸ್ಪೈಸ್ 2000 ಬಿಲ್ಡಿಂಘ್ ಬ್ಲಾಸ್ಟರ್ ಬಾಂಬ್ ಗಳಾಗಿದ್ದು, ಒಂದು ದೊಡ್ಡ ಕಟ್ಟಡವನ್ನೇ ಧ್ವಂಸಗೊಳಿಸಬಲ್ಲವು. ಭಾರತೀಯ ವಾಯುಸೇನೆ ಸೇರಿರುವ ಈ ಸ್ಪೈಸ್ ಬಾಂಬ್ ಜೊತೆಗೆ ಎಂಕೆ84, ಬಿಎಲ್ ಯು 109, ಎಪಿಡಬ್ಲ್ಯೂ ಹಾಗೂ ಆರ್ ಎಪಿ2000 ಆಡ್ ಆನ್ ಕಿಟ್ ಇದೆ.
ಐಎಎಫ್ ನ ಯುದ್ಧ ವಿಮಾನ ಮಿರಾಜ್ 2000 ನೊಂದಿಗೆ ಸ್ಪೈಸ್ 2000 ಬಾಂಬ್ ಹೊಂದಿಸಲಾಗಿದೆ. SPICE (smart precise impact and cost-effective) ಅಣ್ವಸ್ತ್ರ ರಹಿತ ಅತ್ಯಂತ ಪ್ರಬಲ ಬಾಂಬ್ ಎಂದು ಪರಿಗಣಿಸಲಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications