viral video: ತಾಂತ್ರಿಕ ದೋಷದಿಂದ 'ಪ್ರತಿನಿತ್ಯ ಗಾಂಜಾ ಸೇದು' ಎಂಬ ತಪ್ಪು ಸಂದೇಶ: ಕಂಪನಿ ಸ್ಪಷ್ಟನೆ
ಮುಂಬೈ, ಡಿಸೆಂಬರ್ 20: 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂಬ ನಾಮಫಲಕ ಕಂಡು ಪ್ರಯಾಣಿಕರು ಆಶ್ಚರ್ಯಗೊಂಡ ಘಟನೆ ಮುಂಬೈನ ಪ್ರಮುಖ ರಸ್ತೆಯೊಂದರಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಮುಂಬೈನ ಪ್ರಮುಖ ರಸ್ತೆಯೊಂದರಲ್ಲಿ ಅಳವಡಿಸಲಾಗಿದ್ದ ಎಲ್ಇಡಿ ಪರದೆಯಲ್ಲಿ ಈ ರೀತಿ 'ಪ್ರತಿನಿತ್ಯ ಗಾಂಜಾ ಸೇದು' ಎಂಬ ಸಂದೇಶ ಪ್ರದರ್ಶನವಾಗಿದೆ. ಈ ವೇಳೆ ಆ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಸಾವಿರಾರು ಪ್ರಯಾಣಿಕರು ಆಶ್ಚರ್ಯಗೊಂಡಿದ್ದಾರೆ. ಜೊತೆಗೆ ಈ ಘಟನೆಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ವಡಿಯೋ ಭಾರೀ ವೈರಲ್ ಆಗುತ್ತಿದೆ. ಮುಂಬೈನ ಹಾಜಿ ಅಲಿ ಕಡೆಯಿಂದ ವರ್ಲಿ-ಬೌಂಡ್ ರಸ್ತೆಯ ಕಡೆಗೆ ಸಾಗುವವ ಪ್ರಯಾಣಿಕರು ಈ ದೃಶ್ಯಕ್ಕೆ ಕಾರಣರಾಗಿದ್ದಾರೆ. ಆದರೆ ಈ ಘಟನೆಗೆ ತಾಂತ್ರಿಕ ದೋಷದಿಂದ ಎಲ್ಇಡಿ ಪರದೇ ಮೇಲೆ 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂದು ಕೆಂಪು ಅಕ್ಷರದಲ್ಲಿ ಸಂದೇಶ ಕಂಡು ಬಂದಿದೆ.

ನಗರದ ಹಾಜಿ ಅಲಿ ದರ್ಗಾದಿಂದ ಸಿಟಿ ಬೇಕರಿ/ವರ್ಲಿ ನಾಕಾ ಜಂಕ್ಷನ್ ಕಡೆಗೆ ಪ್ರಾರಂಭವಾಗುವ ರಸ್ತೆಯಲ್ಲಿ ಮುಂಬೈ ಕೊಸ್ಟಲ್ ರೋಡ್ ಪ್ರಾಜೆಕ್ಟ್ (ಎಂಸಿಆರ್ಪಿ) ನಡಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಲಾರ್ಸೆನ್ ಮತ್ತು ಟೂಬ್ರೊ ಕಂಪನಿ (ಎಲ್ ಆಂಡ್ ಟಿ)ಯಿಂದ ಕಾರ್ಯನಿರ್ವಹಿಸುತ್ತಿರುವ ಈ ಎಲ್ಇಡಿ ಪರದೇಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
ತಾಂತ್ರಿಕ ದೋಷದಿಂದ ತಪ್ಪು ಸಂದೇಶ
ಆದರೆ ಆ ಎಲ್ಇಡಿ ಪರದೆಯನ್ನು ಸ್ಥಗಿತಗೊಳಿಸದೇ ಕಾಮಗಾರಿ ಕೆಲಸ ನಡೆಯುತ್ತಿರುವ ಪ್ರಯುಕ್ತ ರಸ್ತೆ ಪಕ್ಕದಲ್ಲೇ ಹಾಗೇ ಬಿಡಲಾಗಿದೆ. ತಾಂತ್ರಿಕ ದೋಷದಿಂದಾಗಿ 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂಬ ಗ್ಲಿಚ್ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಪ್ರವೀಣ್ ಪಡವಾಲ್ ಮಾತನಾಡಿ, ಲಾರ್ಸೆನ್ ಮತ್ತು ಟೂಬ್ರೊ ಕಂಪಯು ಹಾಜಿ ಅಲಿಯಿಂದ ಲೋಟಸ್ ಜಂಕ್ಷನ್ವರೆಗೆ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಸಿದೆ. ಹೀಗಾಗಿ ಕಂಪನಿ ಸಿಬ್ಬಂದಿ ಜತೆಗೆ ಈ ಬಗ್ಗೆ ಚರ್ಚಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳು/ಗ್ಲಿಚ್ನಿಂದಾಗಿ ಎಲ್ಇಡಿ ಪರದೆ ಮೇಲೆ ತಪ್ಪು ಸಂದೇಶ ಕಂಡು ಬಂದಿದೆ. ಕೂಡಲೇ ಅದನ್ನು ಸರಿಪಡಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲಿಯವರೆಗೆ ಎಲ್ಇಡಿ ಪರದೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
-
Bengaluru BMTC: ಡ್ರೈವರ್ ಸಾಹೇಬ್ರೆ ಶಾಲಾ ಮಕ್ಕಳು ಕಾಣಿಸಿದರೆ ಬಸ್ ನಿಲ್ಲಿಸಿ: ಕಂಡಕ್ಟರ್ ವಿಡಿಯೋ ವೈರಲ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications