ಉಪರಾಷ್ಟ್ರಪತಿ: ಗೋಪಾಲಕೃಷ್ಣ ಗಾಂಧಿ ಸ್ಪರ್ಧೆ ಟೀಕಿಸಿದ ಶಿವಸೇನೆ
ನವದೆಹಲಿ, ಜುಲೈ 17: ಉಪರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿಯವರನ್ನು ಆಯ್ಕೆ ಮಾಡಿದ್ದಕ್ಕೆ ಶಿವಸೇನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಕಿಡಿಕಾರಿದೆ.
ಈ ಕುರಿತು ಹೇಳಿಕೆ ನೀಡಿರುವ ಶಿವಸೇನೆಯ ಸಂಜಯ್ ರಾವತ್, "ಗೋಪಾಲಕೃಷ್ಣ ಗಾಂಧಿ ಯಾಕೂಬ್ ಮೆಮೊನ್ ರನ್ನು ಉಳಿಸಲು ತಮ್ಮೆಲ್ಲಾ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಅವರನ್ನು ಯಾಕೆ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಿರಿ ಮೇಡಮ್ (ಸೋನಿಯಾ ಗಾಂಧಿ)," ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ಮಹಾತ್ಮ ಗಾಂಧಿ ಮೊಮ್ಮಗನಾಗಿರುವ ಗೋಪಾಲ ಕೃಷ್ಣ ಗಾಂಧಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ವೇಳೆ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಗಲ್ಲು ಶಿಕ್ಷೆ ರದ್ದು ಕೋರಿ ಯಾಕೂಬ್ ಮೆಮೊನ್ ಸಲ್ಲಿಸದ್ದ ಅರ್ಜಿಯನ್ನು ತಿರಸ್ಕರಿಸಿದ ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಎಂದು ಕೋರಿಕೊಂಡಿದ್ದರು.
Recommended Video
Madam ji(Sonia Gandhi)you elected Gopalkrishna Gandhi
— ANI (@ANI_news) July 17, 2017
as VP candidate, he used all his power to save Yakub Memon from death penalty: S.Raut pic.twitter.com/tHOfKjAzKL