ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆ ವಿಮಾನದ ಅವಶೇಷ ಬಂಗಾಳಕೊಲ್ಲಿಯಲ್ಲಿ ಪತ್ತೆ?

By Madhusoodhan
|
Google Oneindia Kannada News

ರಾಮೇಶ್ವರ, ಜುಲೈ, 27: ನಾಪತ್ತೆಯಾಗಿರುವ ವಾಯುಪಡೆಯ ಎಎನ್-32 ವಿಮಾನಕ್ಕಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು ಬಂಗಾಳಕೊಲ್ಲಿಯಲ್ಲಿ ಕೆಲ ವಸ್ತುಗಳು ಪತ್ತೆಯಾಗಿವೆ.

ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಹಡಗುಗಳಿಗೆ ಬಂಗಾಳಕೊಲ್ಲಿಯಲ್ಲಿ ಕೆಲವು ವಸ್ತುಗಳು ಸಿಕ್ಕಿದ್ದು, ಅದು ಕಾಣೆಯಾದ ವಿಮಾನಕ್ಕೆ ಸೇರಿದ್ದೇ ಅಥವಾ ಇಲ್ಲವೇ ಎನ್ನುವದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ತಿಳಿಸಿದ್ದಾರೆ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]

indian army

ವಾಯುಪಡೆ, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ವಿಮಾನಕ್ಕಾಗಿ ಶೋಧ ಕಾರ್ಯ ಮುಂದುವರೆಸಿವೆ. ಜುಲೈ 22 ರಂದು ಚೆನ್ನೈ ನಿಂದ ಅಂಡಮಾನ್ ಕಡೆ ಹೊರಟಿದ್ದ ವಿಮಾನ ನಾಪತ್ತೆಯಾಗಿತ್ತು.[ವಾಯುಸೇನೆ ವಿಮಾನದಲ್ಲಿದ್ದರೆ ಮಂಗಳೂರ ಸೈನಿಕ?]

ಚೆನ್ನೈನಿಂದ ಹೊರಟ ಎಎನ್ 32 ವಾಯುಸೇನೆ ವಿಮಾನದಲ್ಲಿ 29 ಜನರಿದ್ದರು. ಎಲ್ಲರೂ ಪೋರ್ಟ್ ಬ್ಲೇರ್ ಕಡೆ ಪ್ರಯಾಣ ಬೆಳೆಸುತ್ತಿದ್ದರು. ನಾಪತ್ತೆಯಾದ ವಾಯುಸೇನೆ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಏಕನಾಥ್ ಶೆಟ್ಟಿ ಎಂಬ ಯೋಧ ಸಹ ಇದ್ದರು.

English summary
As the search for the missing AN-32 aircraft with 29 defence personnel on board entered the sixth day on Wednesday, Defence MinisterManohar Parrikar said some objects have been found in the Bay of Bengal and search teams have been asked to verify if they were of the ill-fated plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X