'ತೇಜಪಾಲ್ ಲೈಂಗಿಕ ಪರೀಕ್ಷೆ ಫೇಲಾದ್ರೆ ದುರಂತವೇ ಸರಿ'
ಗೋವಾ, ಡಿ.2-ಅತ್ತ, ತೆಹೆಲ್ಕಾ ಕಾಮಕಾಂಡದಲ್ಲಿ ಆರೋಪಿ ತೇಜಪಾಲ್ ರನ್ನು ಲೈಂಗಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿಂದ್ದಂತೆ ವಿವಾದಿತ ಮಹಿಳಾ ಸಾಹಿತಿ ತಸ್ಲೀಮಾ ನಸ್ರೀನ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
'ಅಸಾರಾಮ್ ಬಾಪುವೇ 75ರ ಹರಯದಲ್ಲೂ ಲೈಂಗಿಕವಾಗಿ ಸಮರ್ಥ ಎಂಬುದು ದೃಢಪಟ್ಟಿದೆ. ಹಾಗಿರುವಾಗ ತೆಹಲ್ಕಾ 'ತರುಣ' ತೇಜಪಾಲ್ 50ರ ಹರೆಯದಲ್ಲಿ ಲೈಂಗಿಕವಾಗಿ ಅಸಮರ್ಥ ಎಂದು ಸಾಬೀತಾದರೆ ನಿಜಕ್ಕೂ ಅದು ದುರಂತವೇ ಸರಿ' ಎಂದು ತಸ್ಲೀಮಾ ಟ್ವೀಟ್ ಮಾಡಿದ್ದಾರೆ.
Asaram is sexually potent at 75. It would be disaster if Tejpal is not sexually potent at 50.
— taslima nasreen (@taslimanasreen) December 2, 2013 ಮುಂದುವರಿದು ಎರಡನೆಯ ಟ್ವೀಟ್ ಸಹ ಮಾಡಿರುವ ತಸ್ಲೀಮಾ, ಅತ್ಯಾಚಾರ ಎಂಬುದು ಲೈಂಗಿಕ ಸಾಮರ್ಥ್ಯ ಆಧರಿಸುವಂತಹುದಲ್ಲ. ಲೈಂಗಿಕ ಅಸಮರ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಬಹುದು. ಆಕೆಯ ಮಾನಭಂಗ ಮಾಡಬಹುದು ಎಂದು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲು ತೇಜಪಾಲರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಆ ನಂತರ ಘಟನಾ ಸ್ಥಳಕ್ಕೂ (ಥಿಂಕ್ ಫೆಸ್ಟಿವ್ ನಡೆದ ಹಯಾತ್ ಹೋಟೆಲ್ ) ಕರೆದೊಯ್ದು ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ತೇಜಪಾಲ್ ಗೆ ಲೈಂಗಿಕ ಸಾಮರ್ಥ್ಯ ಪರೀಕ್ಷೆ : ಈ ಮಧ್ಯೆ, ತರುಣ್ ತೇಜಪಾಲರನ್ನು ಗೋವಾ ಪೊಲೀಸರು ಸೋಮವಾರ ಲೈಂಗಿಕ ಸಾಮರ್ಥ್ಯ ಪರೀಕ್ಷೆಗೊಳಪಡಿಸಿದ್ದಾರೆ.ನೂತನ ಅತ್ಯಾಚಾರ ಕಾನೂನು ಅಡಿಯಲ್ಲಿ ತೇಜಪಾಲರನ್ನು ಇಂದು ಗೋವಾದ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳ ಮುಂದೆ ಪೊಲೀಸರು ಹಾಜರುಪಡಿಸಿದರು. ಆರೋಪಿ ಲೈಂಗಿಕ ದೌರ್ಜನ್ಯ ಎಸಗಲು ಸಮರ್ಥನೋ, ಇಲ್ವೋ ಎಂಬುದನ್ನು ಆರೋಪಪಟ್ಟಿಯಲ್ಲಿ ದಾಖಲಿಸಬೇಕಾಗಿರುವುದರಿಂದ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಪ್ರಕರಣದ Investigation Officer ಆಗಿ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ನಿಯುಕ್ತಿಗೊಂಡಿದ್ದಾರೆ. ಇವರು ಗೋವಾ ಕ್ರೈಂ ಬ್ರಾಂಚ್ ವಿಭಾಗದಲ್ಲಿ ಅತ್ಯಂತ ಕಠಿಣ/ ಕುಶಾಗ್ರಮತಿ ಇನ್ಸ್ ಪೆಕ್ಟರ್ ಎಂಬ ಹೆಸರು ಗಳಿಸಿದ್ದಾರೆ.
ಮಾಜಿ ಪ್ರವಾಸೋದ್ಯಮ ಸಚಿವ, NCP MLA ಮಿಖೆ ಪಚೆಕೊರನ್ನು ಪ್ರಕರಣವೊಂದರಲ್ಲಿ (ನಾಡಿಯಾ ಟೊರ್ರಾಡೊ ಆತ್ಮಹತ್ಯೆ) 10 ಗಂಟೆ ಕಾಲ ವಿಚಾರಣೆಗೊಳಪಡಿಸಿ, ನೀರು ಇಳಿಸಿದ್ದರು. ಇನ್ನು ಗೋವಾದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತನಿಖೆಯನ್ನೂ ಸುನೀತಾ ಸಾವಂತ್ ನಡೆಸಿದ್ದಾರೆ.
'ಸತ್ಯ ಬಾಯ್ಬಿಡಿಸುವುದು ಆಕೆಗೆ ಸಿದ್ಧಿಸಿದೆ. ಅನೇಕ ಹೈಪ್ರೊಫೈಲ್ ಕೇಸುಗಳನ್ನು ಅವರು ಲೀಲಾಜಾಲವಾಗಿ ಬಿಡಿಸಿದ್ದಾರೆ. ಮುಖ್ಯವಾಗಿ ಆಕೆ ಕರಪ್ಟ್ ಅಲ್ಲ' ಎಂದು crime branchನಲ್ಲಿರುವ ಸಹೋದ್ಯೋಗಿಗಳು ಸುನೀತಾ ಬಗ್ಗೆ ಸರ್ಟಿಫಿಕೇಟ್ ನೀಡುತ್ತಾರೆ.
ರಾಸಾಯನ ಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಸುನೀತಾ ಸಾವಂತ್, 1990ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆಗೆ ಜಾಯಿನ್ ಆಗಿದ್ದಾರೆ. 2001ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಸುನೀತಾ, ಸದ್ಯದಲ್ಲೇ deputy superintendent of police ಆಗುವ ಸೂಚನೆಗಳಿವೆ.
ಇನ್ನು, ತರುಣ್ ತೇಜಪಾಲ್ ಸಂಸ್ಥಾಪಿತ ತೆಹಲ್ಕಾದ ಭಾನಗಡಿಗಳು ಒಂದೊಂದಾಗಿ ಹೊರಬರುತ್ತಿವೆ. ಪುಣ್ಯಾತ್ಮ ತೇಜಪಾಲ್ ಕೋಟ್ಯಂತರ ರೂಪಾಯಿ ಸೇವಾ ತೆರಿಗೆಯನ್ನು ಪಾವತಿಸಿಲ್ಲ. ಬಂಧನದಲ್ಲಿರುವ ತರುಣ್ ತೇಜಪಾಲ್ ನಿನ್ನೆ, ಇಂದು ಲಘು ಆಹಾರ ತೆಗೆದುಕೊಂಡಿದ್ದಾರೆ. ನಿನ್ನೆ ಸಂಜೆ ಬನ್ನು ಮತ್ತು ಚಹಾ ತೆಗೆದುಕೊಂಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications