ತಮಿಳುನಾಡು ರೈಲು ಅಪಘಾತ: ಕರ್ನಾಟಕದ ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ!
ದಕ್ಷಿಣ ಭಾರತದಲ್ಲಿ ಘೋರ ರೈಲು ದುರಂತ ಒಂದು ಸಂಭವಿಸಿ, ನಡುಕ ಶುರುವಾಗಿದೆ. ಈ ರೀತಿ ರೈಲು ದುರಂತಗಳು ಸಾಮಾನ್ಯವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು. ಆದರೆ, ದಕ್ಷಿಣ ಭಾರತದಲ್ಲಿ ರೈಲು ದುರಂತಗಳು ಸಾಮಾನ್ಯವಾಗಿ ಕಡಿಮೆ. ಹೀಗಿದ್ದರೂ ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಭೀಕರ ರೈಲು ದುರಂತ ಸಂಭಿವಿಸಿ, ದಕ್ಷಿಣ ಭಾರತದಲ್ಲೇ ಭಯದ ವಾತಾವರಣ ಶುರುವಾಗಿತ್ತು. ಇಂತಹ ಸ್ಥಿತಿಯಲ್ಲಿ ಈಗ ಕರ್ನಾಟಕದಿಂದ ಹೊರಡುವ ರೈಲುಗಳಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.
ಮೈಸೂರು ಟು ದರ್ಭಂಗಾ ಎಕ್ಸ್ಪ್ರೆಸ್ ರೈಲು ನೇರವಾಗಿ ಗೂಡ್ಸ್ ರೈಲಿಗೆ ಢಿಕ್ಕಿಯಾದ ಹಿನ್ನೆಲೆ ದೊಡ್ಡ ಅನಾಹುತ ಸಂಭವಿಸಿತ್ತು. ಪ್ಯಾಸೆಂಜರ್ ರೈಲಿನ ಒಟ್ಟು 2 ಬೋಗಿಗಳು ಈ ಆಘಾತದ ಬೆಂಕಿಗೆ ಆಹುತಿಯಾಗಿವೆ. ಮತ್ತೊಂದು ಕಡೆ ಹಲವು ಬೋಗಿಗಳು ಹಳಿತಪ್ಪಿದ ಕಾರಣ ಭಾರಿ ದೊಡ್ಡ ಅನಾಹುತ ಎದುರಾಗಿತ್ತು. ಹೀಗಾಗಿ ಕರ್ನಾಟಕ ರಾಜ್ಯದಿಂದ ತಮಿಳುನಾಡಿನ ಕಡೆ ಹೊರಟಿದ್ದ ರೈಲುಗಳ ಓಡಾಟವನ್ನು ಬದಲಾವಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ರೈಲುಗಳ ಮಾರ್ಗ ಬದಲಾವಣೆ ಆಗಿದೆ? ಮುಂದೆ ಓದಿ.

ರೈಲುಗಳ ಮಾರ್ಗ ಬದಲಾವಣೆ
ಅಂದಹಾಗೆ ಚೆನ್ನೈ ವಿಭಾಗದ ಪೊನ್ನೇರಿ ಟು ಕವರಪ್ಪೆಟ್ಟೈ ರೈಲು ನಿಲ್ದಾಣಗಳ ನಡುವೆ ಈ ಭೀಕರ ರೈಲು ದುರಂತ ಸಂಭವಿಸಿತ್ತು. ಹೀಗಾಗಿ ರೈಲು ಸಂಖ್ಯೆ 12296, ಡಣಾಪುರ ಟು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮಾರ್ಗದ ರೈಲು ಪ್ರಯಾಣವನ್ನು ಡಣಾಪುರ ಮೂಲಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗೇ ಮತ್ತೊಂದು ಕಡೆ ರೈಲನ್ನು ಗುಡೂರು, ರೇಣುಗುಂಟಾ ಮತ್ತು ಮೇಲ್ಪಕ್ಕಂ ಮೂಲಕ ಸಂಚರಿಸಲು ಇದೀಗ ನಿರ್ಧಾರ ಕೈಗೊಳ್ಳಲಾಗಿದ್ದು ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಾಗುವುದು. ಆದರೆ ಪೆರಂಬೂರ್ & ಅರಕ್ಕೋಣಂ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
ಪಾಟ್ನಾ ರೈಲು ಸಂಚಾರದಲ್ಲೂ ಬದಲಾವಣೆ
ರೈಲು ಸಂಖ್ಯೆ 12296ರ ಜೊತೆಗೆ ರೈಲು ಸಂಖ್ಯೆ 22353ರ ಮಾರ್ಗವನ್ನು ಕೂಡ ಬದಲಾವಣೆ ಮಾಡಲಾಗಿದೆ. ಅಷ್ಟಕ್ಕೂ ಪಾಟ್ನಾ ಟು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಮಾರ್ಗದಲ್ಲಿ ಇರುವ ಪ್ರಯಾಣವನ್ನ ಪಾಟ್ನಾದಿಂದ ಆರಂಭಿಸಿ. ರೈಲನ್ನು ಮುಂದೆ ಗುಡೂರು, ರೇಣುಗುಂಟಾ ಮತ್ತು ಮೇಲ್ಪಾಕ್ಕಂ ಮೂಲಕ ಸಂಚರಿಸಲು ನಿರ್ಧರಿಸಲಾಗಿದೆ. ಹಾಗೇ ರೈಲನ್ನು ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ನಿರ್ಧರಿಸಿದ್ದು, ಪೆರಂಬೂರ್ ರೈಲು ನಿಲ್ದಾಣದಲ್ಲಿ ಸ್ಟಾಪ್ ಇರುವುದಿಲ್ಲ.
ಇದೇ ರೀತಿಯಾಗಿ ಮತ್ತೊಂದು ಕಡೆ ರೈಲು ಸಂಖ್ಯೆ 22306 ಕೂಡ ಸಂಚಾರದಲ್ಲಿ ಬದಲಾವಣೆ ಕಾಣಲಿದೆ. ಈ ರೈಲನ್ನು ಕೂಡ ಗುಡೂರು, ರೇಣುಗುಂಟಾ ಮತ್ತು ಮೇಲ್ಪಾಕ್ಕಂ ಮೂಲಕ ಸಂಚರಿಸಲು ನಿರ್ಧರಿಸಲಾಗಿದೆ. ತಿರುತ್ತಣಿ ರೈಲ್ವೆ ಸ್ಟೇಷನ್ನಲ್ಲಿ ಈ ರೈಲನ್ನು ಹೆಚ್ಚುವರಿಯಾಗಿ ನಿಲುಗಡೆ ಮಾಡಿದರೂ ಪೆರಂಬೂರ್ ರೈಲು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
-
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications