Samudrayaan: 6,000 ಅಡಿಗಳಷ್ಟು ಸಮುದ್ರದ ಆಳಕ್ಕೆ ಜನರನ್ನು ಕೊಂಡೊಯ್ಯಲಿದೆ ಭಾರತದ ನೌಕೆ- ಉದ್ದೇಶ, ಪ್ರಾಮುಖ್ಯತೆ, ವೆಚ್ಚ ತಿಳಿಯ
ನವದೆಹಲಿ, ಆಗಸ್ಟ್ 04: ಮಾನವಸಹಿತ ಸಬ್ಮರ್ಸಿಬಲ್ ಮಿಷನ್ 'ಸಮುದ್ರಯಾನ' ಯೋಜನೆಯನ್ನು ಭಾರತ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿದೆ. ಈ ಯೋಜನೆ ಅಡಿಯಲ್ಲಿ 'ಮತ್ಸ್ಯ 6000' ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಾಗರದ ಆಳವನ್ನು ಅನ್ವೇಷಿಸಲು ಈ ನೌಕೆ ಸಜ್ಜಾಗಿದೆ. ಸಮುದ್ರದ 6,000 ಅಡಿಗಳಷ್ಟು ಆಳಕ್ಕೆ ಮೂವರನ್ನು ಸಾಗಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.
ಯೋಜನೆಯ ಮೊದಲ ಹಂತವು 2024 ರ ವೇಳೆಗೆ ಪೂರ್ಣಗೊಳ್ಳಲಿದೆ. ನೌಕೆಯು 2026 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಅಕ್ಟೋಬರ್ 2021 ರಲ್ಲಿ, ಸುಧಾರಿತ ಸಬ್ಮರ್ಸಿಬಲ್ ಸಾಮರ್ಥ್ಯಗಳೊಂದಿಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ದೇಶಗಳ ಆಯ್ದ ಕ್ಲಬ್ಗೆ ಭಾರತ ಸೇರಿಕೊಂಡಿತು. ಈ ಮೂಲಕ ವಿಶಿಷ್ಟವಾದ 'ಸಮುದ್ರಯಾನ' ಮಿಷನ್ ಉಡಾವಣೆಯ ಭಾಗವಾಗಿತು.
ಯೋಜನೆಯ ಪ್ರಮುಖ ಉದ್ದೇಶವೇನು?
ಸಮುದ್ರಯಾನ ಮಿಷನ್ ಸ್ವಯಂ ಚಾಲಿತ ಮಾನವಸಹಿತ ಸಬ್ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸುತ್ತದೆ. ಇದು ವೈಜ್ಞಾನಿಕ ಸಂವೇದಕಗಳು ಮತ್ತು ಉಪಕರಣಗಳ ಸೆಟ್ನೊಂದಿಗೆ ಸಾಗರದಲ್ಲಿ 6,000 ಮೀಟರ್ಗಳಷ್ಟು ಆಳವನ್ನು ಅನ್ವೇಷಿಸುವ ಸಾಮರ್ಥ್ಯವನ್ನು ಹೊಂದಿದೆ. ಸಬ್ಮರ್ಸಿಬಲ್ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ 96 ಗಂಟೆಗಳವರೆಗೆ ಇರುತ್ತದೆ.

ಸಮುದ್ರದ ಆಳವನ್ನು ಅನ್ವೇಷಿಸುವ ಪ್ರಾಮುಖ್ಯತೆ ಏನು?
ಪ್ರಪಂಚವು ಸುಮಾರು ಶೇ 70 ಸಾಗರಗಳಿಂದ ಆವೃತವಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಆಳದ ಪರಿಶೋಧನೆಯು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಸರಿಸುಮಾರು ಶೇ 95 ರಷ್ಟು ಸಾಗರದ ಆಳವನ್ನು ಇನ್ನೂ ಪರಿಶೋಧಿಸಲಾಗಿಲ್ಲ. ಭಾರತದ ಕರಾವಳಿಗಳು ಮೂರು ಪ್ರಮುಖ ಸಾಗರಗಳಿಂದ ಜಲಾವೃತವಾಗಿವೆ.
ಸುಮಾರು ಶೇ 30ರಷ್ಟು ಜನಸಂಖ್ಯೆಯು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಗಮನಾರ್ಹ ಆರ್ಥಿಕತೆಯನ್ನು ಬೆಂಬಲಿಸುತ್ತದೆ. ಮೀನುಗಾರಿಕೆ, ಕಡಲ ಕೃಷಿ, ಪ್ರವಾಸೋದ್ಯಮ, ಜೀವನೋಪಾಯಗಳಿಗೆ ಸಹಾಯ ಮಾಡುತ್ತದೆ.

'ಸಮುದ್ರಯಾನ' ಮಿಷನ್ ಆಳವಾದ ಸಮುದ್ರದ ಪರಿಸರದ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅನ್ವೇಷಿಸದ ಅಂಶಗಳು, ಖನಿಜಗಳು ಮತ್ತು ಸಂಪನ್ಮೂಲಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಹೊತ್ತು ತರುತ್ತದೆ.
ಯೋಜನೆಯ ಒಟ್ಟು ವೆಚ್ಚ
ಸಂಪೂರ್ಣ ಐದು ವರ್ಷಗಳ ಮಿಷನ್ನ ಅಂದಾಜು ವೆಚ್ಚ 4077 ಕೋಟಿ ರೂಪಾಯಿಗಳಾಗಿದೆ. ಮೊದಲ ಹಂತಕ್ಕೆ ( 2021-2024 ) ಸರಿಸುಮಾರು 2823.4 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
-
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ












Click it and Unblock the Notifications