ಸಿ.ಎನ್. ರಾಮಚಂದ್ರನ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನವದೆಹಲಿ, ಡಿ.18: 2013ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡದ ಹಿರಿಯ ವಿಮರ್ಶಕ, ಸಂಸ್ಕೃತಿ ಚಿಂತಕರೂ ಆಗಿರುವ ಸಿ.ಎನ್. ರಾಮಚಂದ್ರನ್ ಅವರು ಸೇರಿದಂತೆ ಸಾಹಿತ್ಯ ಕ್ಷೇತ್ರದ 22 ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೊಂಕಣಿ ಸಾಹಿತಿ ತುಕಾರಾಂ ರಾಮಾ ಶೇಟ್ ಅವರಿಗೂ ಈ ಸಾಲಿನ ಅಕಾಡೆಮಿ ಗೌರವ ಲಭಿಸಿದೆ.
ಒಟ್ಟಾರೆ, ಪ್ರಸಕ್ತ ಸಾಲಿನಲ್ಲಿ 8 ಕವನ ಸಂಕಲನ, 4 ಪ್ರಬಂಧ, ಮೂರು ಕಾದಂಬರಿ, ತಲಾ 2 ಸಣ್ಣ ಕತೆ ಮತ್ತು ಪ್ರವಾಸ ಕಥನ, ಒಂದು ಆತ್ಮಕಥನ, ಜೀವನ ಚರಿತ್ರೆ ಮತ್ತು ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಡಾ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ನೇತೃತ್ವದಲ್ಲಿ ಸುಮಾರು 22 ಭಾರತೀಯ ಭಾಷೆಗಳನ್ನು ಪ್ರತಿನಿಧಿಸುವ ಜ್ಯೂರಿ ಸದಸ್ಯರು ಪ್ರಶಸ್ತಿ ಪಡೆದವರನ್ನು ಆಯ್ಕೆ ಮಾಡಿದ್ದಾರೆ. ಕನ್ನಡದಿಂದ ಡಾ. ಕೆ ಚಿನ್ನಪ್ಪ ಗೌಡ, ಡಾ. ಎಚ್ ಸಿ ಬೋರಲಿಂಗಯ್ಯ, ಟಿ.ಪಿ ಅಶೋಕ ಅವರು ಜ್ಯೂರಿ ಸದಸ್ಯರಾಗಿದ್ದರು. ಗುಜರಾತಿ ಹಾಗೂ ಅಸ್ಸಾಮಿ ವಿಭಾಗದ ಪ್ರಶಸ್ತಿಗಳನ್ನು ನಂತರ ಪ್ರಕಟಿಸಲಾಗುತ್ತದೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1,00,000 ನಗದು ಬಹುಮಾನದ ಚೆಕ್, ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 11, 2014ರಂದು ನಡೆಯಲಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಪ್ರಶಸ್ತಿ ಪಡೆದವರ ಹೆಸರು, ಕೃತಿ ಮತ್ತು ಭಾಷೆ ಈ ಕೆಳಗಿನಂತಿದೆ:

ಕವಿತಾ ವಿಭಾಗ
* ಸುಭೋದ್ ಸರ್ಕಾರ್ -ಧ್ವೈಪಾಯನ್ ಹ್ರಾದೇರ್ ಧಾರೇ( ಬಂಗಾಳಿ),
* ಅನಿಲ್ ಬೋರೋ - ದೆಲ್ಫಿನಿ ಒಂಥಾಯ್ ಮಾದ್ವೈ ಆರೋ ಗುಬಾನ್ ಗುಬಾನ್ ಕೊಂತಾಯಿ (ಬೋಡೋ)
* ಸೀತಾರಾಂ ಸಪೊಲಿಯಾ- ದೋಹಾ ಸಾತ್ ಸಾಯಿ(ಡೋಗ್ರಿ),
* ಅಂಬಿಕಾ ದತ್ - ಅಂತ್ ಹೋಯಿ ನಹೀ ದಿನ್ ಹಾಲ್(ರಾಜಸ್ತಾನಿ)
* ರಾಧಾಕಾಂತ್ ಠಾಕೂರ್ - ಚಲದೂರವಾಣಿ(ಸಂಸ್ಕೃತ)
* ಅರ್ಜುನ್ ಚರಣ್ ಹೆಂಬ್ರಂ -ಚಂದ ಬೋಂಗಾ(ಸಂತಾಲಿ )
* ನಾಮ್ದೇವ್ ತಾರಾಚಂದಾನಿ - ಮನ್ಶ್-ನಗರಿ(ಸಿಂಧಿ)
* ಜಾವೇದ್ ಅಖ್ತರ್ -ಲಾವಾ(ಉರ್ದು)
ಕಾದಂಬರಿ ವಿಭಾಗ
* ಮೃದುಲಾ ಗಾರ್ಗ್- ಮಿಲ್ಜುಲ್ ಮನ್ (ಹಿಂದಿ)
* ಮನ್ ಮೋಹನ್ -ನಿರ್ವಾಣ್(ಪಂಜಾಬಿ)
* ಆರ್.ಎನ್, ಜೋ ಡಿ ಕ್ರೂಜ್- ಕೋರ್ಕೈ(ತಮಿಳು)
ಪ್ರಬಂಧ, ವಿಮರ್ಶೆ
* ಸಿ.ಎನ್ ರಾಮಚಂದ್ರನ್- ಆಖ್ಯಾನ -ವ್ಯಾಖ್ಯಾನ (ಕನ್ನಡ),
* ತುಕಾರಾಂ ರಾಮಾ ಶೇಟ್ -ಮನ್ ಮೋತಯಂ (ಕೊಂಕಣಿ),
* ಸತೀಶ್ ಕಲಾಸೇಖರ್- ವಚನಾರ್ಯಾಚಿ ರಾಜೋನಿಶಿ( ಮರಾಠಿ)
* ಕಾತ್ಯಾಯಿನಿ ವಿದ್ಮಹೆ - ಸಾಹಿತ್ಯಾಕಾಶ್ಮೊಲೋ ಸಂಗಂ(ತೆಲುಗು)
ಆತ್ಮ ಕಥನ
* ಎಂ.ಎನ್ ಪಾಲೂರ್ -'ಕಥೆಯಿಲ್ಲಾದವಂಡೆ ಕಥಾ' (ಮಲಯಾಳಂ)
ಜೀವನ ಚರಿತ್ರೆ
* ಸುರೇಶ್ವರ್ ಜಾ - ಸಂಗ್ ಹರ್ಷ್ ಆ ಸೆಹಂತಾ (ಮೈಥಿಲಿ)
ನಾಟಕ
* ಬಿಜೋಯ್ ಮಿಶ್ರಾ - ಬಾನಪ್ರಸ್ಥಾ(ಒಡಿಯಾ)
ಸಣ್ಣ ಕತೆ
* ತೆಮ್ ಸುಲಾ ಓ - ಲಾಬರ್ ನಂ ಫಾರ್ ಮೈ ಹೆಡ್(ಇಂಗ್ಲಿಷ್)
* ಮೋಹಿ ಉದ್ ದಿನ್ ರೇಶಿ - ಆಯಿನಾ ಅತಾಶ್(ಕಶ್ಮೀರಿ)
ಪ್ರವಾಸ ಕಥನ
* ಮಕೋನ್ಮನಿ ಮೋಂಗ್ ಸಭಾ - ಚಿಂಗ್ ಲಾಂಗ್ ಅಮಾದಗಿ ಅಮಾದಾ (ಮಣಿಪುರಿ)
* ಮನ್ ಬಹಾದೂರ್ ಪ್ರದಾನ್ - ಮಂಕಾ ಲಹರ್ ರಾ ರಹಾರ್ ಹಾರು (ನೇಪಾಳಿ)
-
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ












Click it and Unblock the Notifications