ಪಂಜಾಬ್ ನಲ್ಲಿ ಗುಂಡಿಕ್ಕಿ ಆರ್.ಎಸ್.ಎಸ್ ನಾಯಕರ ಹತ್ಯೆ
ಚಂಡೀಗಢ, ಅಕ್ಟೋಬರ್ 17: ಪಂಜಾಬ್ ನ ನಗರ ಲುಧಿಯಾನದಲ್ಲಿ ಆರ್.ಎಸ್.ಎಸ್ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆರ್.ಎಸ್.ಎಸ್ ನಾಯಕ ರವೀಂದ್ರ ಗೋಸಾಯಿ ಅವರನ್ನು ಅಪರಿಚಿತರು ಇಂದು ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಲುಧಿಯಾನದ ಕೈಲಾಶ್ ನಗರದಲ್ಲಿ ಈ ಹತ್ಯೆ ನಡೆದಿದೆ. ರವೀಂದ್ರ ಗೋಸಾಯಿ ಹಿರಿಯ ಆರ್.ಎಸ್.ಎಸ್ ನಾಯಕರಾಗಿದ್ದರು.

ರವೀಂದ್ರ ಗೋಸಾಯಿ ಇಂದು ಬೆಳಿಗ್ಗೆ ಆರ್.ಎಸ್.ಎಸ್ ಶಾಖೆ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಗೋಸಾಯಿ ಅಸುನೀಗಿದ್ದಾರೆ ಎಂದು ಲುಧಿಯಾನ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ.












Click it and Unblock the Notifications