ಗರ್ಭದಲ್ಲಿರುವ ಶಿಶುವಿಗೂ ಭಗವದ್ಗೀತಾ, ರಾಮಾಯಣ ಬೋಧಿಸುವಂತೆ ಆರ್ಎಸ್ಎಸ್ ಕರೆ
ಸಂವರ್ಧಿನಿ ನ್ಯಾಸ್ ಸ್ತ್ರೀರೋಗತಜ್ಞರು, ಆಯುರ್ವೇದ ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಗರ್ಭಾವಸ್ಥೆಯಲ್ಲಿ ಗೀತಾ ಪಠಣ, ರಾಮಾಯಣ ಮತ್ತು ಯೋಗಾಭ್ಯಾಸವನ್ನು ಗರ್ಭದಲ್ಲಿರುವ ಶಿಶುಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ನೀಡಲು ಕಾರ್ಯಕ್ರಮವನ್ನು ಯೋಜಿಸುತ್ತಿದೆ.
ನವದೆಹಲಿ, ಮಾರ್ಚ್ 6: ಆರ್ಎಸ್ಎಸ್ನ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್, ಗರ್ಭಿಣಿಯರಿಗೆ ಗರ್ಭದಲ್ಲಿರುವ ಮಕ್ಕಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಲು 'ಗರ್ಭ ಸಂಸ್ಕಾರ' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಸೋಮವಾರ ಹೇಳಿದ್ದಾರೆ.
ಸಂವರ್ಧಿನಿ ನ್ಯಾಸ್ ಸ್ತ್ರೀರೋಗತಜ್ಞರು, ಆಯುರ್ವೇದ ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಗರ್ಭಾವಸ್ಥೆಯಲ್ಲಿ ಗೀತಾ ಪಠಣ, ರಾಮಾಯಣ ಮತ್ತು ಯೋಗಾಭ್ಯಾಸವನ್ನು ಗರ್ಭದಲ್ಲಿರುವ ಶಿಶುಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ನೀಡಲು ಕಾರ್ಯಕ್ರಮವನ್ನು ಯೋಜಿಸುತ್ತಿದೆ. ಈ ಕಾರ್ಯಕ್ರಮವು ಗರ್ಭಾವಸ್ಥೆಯಿಂದ ಎರಡು ವರ್ಷದ ಶಿಶುಗಳಿಗೆ ಪ್ರಾರಂಭವಾಗುತ್ತದೆ. ಗೀತಾ ಶ್ಲೋಕಗಳ ಪಠಣ, ರಾಮಾಯಣದ ಚೌಪೈಗಳಿಗೆ ಒತ್ತು ನೀಡಲಾಗುವುದು. ಇದರಿಂದ ಗರ್ಭದಲ್ಲಿರುವ ಮಗು 500 ಪದಗಳನ್ನು ಕಲಿಯಬಹುದು ಎಂದು ಮಾಧುರಿ ಮರಾಠೆ ಹೇಳಿದರು.

ಈ ಅಭಿಯಾನದ ಗುರಿ ಮತ್ತು ಉದ್ದೇಶವು ಮಗು ಗರ್ಭದಲ್ಲಿ ಸಂಸ್ಕಾರ (ಸಂಸ್ಕೃತಿ ಮತ್ತು ಮೌಲ್ಯಗಳು) ಕಲಿಸುವುದು. ಅಲ್ಲದೆ ಮಗುವಿಗೆ ಎರಡು ವರ್ಷ ತುಂಬುವವರೆಗೆ ಈ ಪ್ರಕ್ರಿಯೆಯು ಮುಂದುವರಿಸುವಂತೆ ಎಂದು ಖಚಿತಪಡಿಸಿಕೊಳ್ಳುವುದು. ಬಳಿಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವುದು ಎಂದು ಅವರು ಹೇಳಿದರು.
ಆರ್ಎಸ್ಎಸ್ನ ಮಹಿಳಾ ಅಂಗವಾದ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್ ಈ ಅಭಿಯಾನದ ಅಡಿಯಲ್ಲಿ ಕನಿಷ್ಠ 1,000 ಮಹಿಳೆಯರನ್ನು ತಲುಪಲು ಯೋಜಿಸುತ್ತಿದೆ. ಈ ಅಭಿಯಾನದ ಭಾಗವಾಗಿ ಸಂವರ್ಧಿನಿ ನ್ಯಾಸ್ ಭಾನುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯಾಗಾರವನ್ನು ನಡೆಸಿತು. ಇದರಲ್ಲಿ ಏಮ್ಸ್-ದೆಹಲಿ ಸೇರಿದಂತೆ ಹಲವಾರು ಸ್ತ್ರೀರೋಗತಜ್ಞರು ಭಾಗವಹಿಸಿದ್ದರು ಎಂದು ಅವರು ಹೇಳಿದರು.












Click it and Unblock the Notifications