Richest Ganapati: ದೇಶದಲ್ಲೇ ಸಿರಿವಂತ ಮುಂಬೈನ ಜಿಎಸ್ಬಿ ಗಣಪತಿ, ಬರೋಬ್ಬರಿ 360 ಕೋಟಿ ಇನ್ಶೂರೆನ್ಸ್: ಸ್ವಯಂಸೇವಕರಿಗೂ ವಿಮೆ!
ಮುಂಬೈ ಸೆಪ್ಟೆಂಬರ್ 13: ಮುಂಬೈ ನಗರದಲ್ಲಿ ಗೌಡ ಸಾರಸ್ವತ ಸಮಾಜದ ವತಿಯಿಂದ ಆರಾಧಿಸಲ್ಪಡುವ ಗಣಪತಿ ದೇಶದಲ್ಲೇ ಅತ್ಯಂತ ಸಿರಿವಂತ ಗಣಪತಿ ಎಂದು ಹೆಸರಾಗಿದ್ದಾನೆ. ಮುಂಬೈ ನಗರದ ಕಿಂಗ್ಸ್ ಸರ್ಕಲ್ನಲ್ಲಿ ಆರಾಧಿಸುವ ಜಿಎಸ್ಬಿಯವರ ಗಣಪತಿ ಉತ್ಸವಕ್ಕೆ ಬರೋಬ್ಬರಿ 360 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ.
ಇದಕ್ಕಾಗಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಸಂಸ್ಥೆಯಿಂದ ಇನ್ಸೂರೆನ್ಸ್ ಮಾಡಲಾಗಿದ್ದು, ಈ ಬಾರಿ ವಿಮಾ ಮೌಲ್ಯ 360 ಕೋಟಿ ರೂಪಾಯಿಗೇರಿದೆ. 2022ರಲ್ಲಿ ವಿಮಾ ಮೌಲ್ಯ 316 ರೂಪಾಯಿ ಮಾಡಲಾಗಿತ್ತು. ಇನ್ನೂ 2016ರಲ್ಲಿ ಇದೇ ಜಿಎಸ್ಬಿ ತಂಡ 300 ಕೋಟಿ ರೂಪಾಯಿ ಇನ್ಶೂರೆನ್ಸ್ ಮಾಡಿತ್ತು. ಈ ಬಾರಿ ಗಣಪತಿಗೆ ತೊಡಿಸುವ ಬಂಗಾರ ಇನ್ನಿತರ ಆಭರಣಗಳ ಮೌಲ್ಯ ಹೆಚ್ಚಿರುವುದರಿಂದ ಇನ್ಶೂರೆನ್ಸ್ ಮೊತ್ತವೂ ಹೆಚ್ಚಿದೆ.

ಕಳೆದ ವರ್ಷದಿಂದ ಹೆಚ್ಚುತ್ತಿರುವ ಚಿನ್ನದ ಬೆಲೆಗಳ ಸ್ವಾಭಾವಿಕ ಪರಿಣಾಮಕ್ಕೆ ವಿಮಾ ವೆಚ್ಚಗಳ ಹೆಚ್ಚಳವನ್ನು ಕಾರಣವೆಂದು ಹೇಳಬಹುದು. GSB ಸೇವಾ ಮಂಡಲದಲ್ಲಿರುವ ಗಣೇಶ ದೇವರಿಗೆ ಕಳೆದ ಬಾರಿ 66 ಕೆಜಿ ಚಿನ್ನಾಭರಣಗಳು ಮತ್ತು 295 ಕೆಜಿ ಬೆಳ್ಳಿಯಿಂದ ಅಲಂಕರಿಸಲಾಗಿತ್ತು. ಈ ಬಾರಿ ವಿವರವನ್ನು ಹಂಚಿಕೊಳ್ಳಲಾಗಿದೆ.
ಈ ಬಾರಿ ಗಣಪತಿಗೆ 38.47 ಕೋಟಿ ರೂಪಾಯಿಯ ಚಿನ್ನ, ಬೆಳ್ಳಿ ಮತ್ತು ಆಭರಣಗಳನ್ನು ತೊಡಿಸಲಾಗುವುದು. ಇದಲ್ಲದೆ, ಇನ್ನಿತರ ಲೋಹಗಳ ಆಭರಣಗಳೂ ಇವೆ. 360 ಕೋಟಿ ಮೌಲ್ಯದ ಇನ್ಶೂರೆನ್ಸ್ ಮಾಡಿಸಲು ಪ್ರೀಮಿಯಂ ಎಷ್ಟು ಬರುತ್ತದೆ ಎನ್ನುವ ಬಗ್ಗೆ ಗಣೇಶೋತ್ಸವ ಸಮಿತಿಯವರು ಮಾಹಿತಿ ನೀಡಿಲ್ಲ. ಆದರೆ, ಇಷ್ಟೊಂದು ವಿಮಾ ಮೊತ್ತ ಬೇರೆ ಬೇರೆ ವಿಭಾಗಕ್ಕೆ ತಗಲುತ್ತದೆ.

2 ಕೋಟಿ ರೂಪಾಯಿ ಅಗ್ನಿ ಮತ್ತು ವಿಶೇಷ ಅಪಾಯಗಳ ನೀತಿಯು ಭೂಕಂಪದ ಅಪಾಯದ ಜೊತೆಗೆ ಪೀಠೋಪಕರಣಗಳು, ಫಿಕ್ಚರ್ಗಳು ಮತ್ತು ಫಿಟ್ಟಿಂಗ್ಗಳು, ಕಂಪ್ಯೂಟರ್ಗಳು, ಸಿಸಿಟಿವಿ ಕ್ಯಾಮೆರಾಗಳು, ಕ್ಯೂಆರ್ ಸ್ಕ್ಯಾನರ್ಗಳು, ಪಾತ್ರೆಗಳಂತಹ ಸ್ಥಾಪನೆಗಳಿಗಾಗಿ ಭರಿಸಲಾಗುತ್ತದೆ.
ಇನ್ನೂ 30 ಕೋಟಿ ಪಂಡಲ್ಗಳು, ಕ್ರೀಡಾಂಗಣಗಳು, ಭಕ್ತರು ಇತ್ಯಾದಿಗಳನ್ನು ಒಳಗೊಂಡಿರುವ ಸಾರ್ವಜನಿಕ ಹೊಣೆಗಾರಿಕೆ ಕವರ್ ಆಗಲಿದೆ. ಜೊತೆಗೆ 289.50 ಕೋಟಿ ರೂಪಾಯಿ ಸ್ವಯಂಸೇವಕರು, ಅರ್ಚಕರು, ಅಡುಗೆಯವರು, ಬಂಡಿಗಳು, ಚಪ್ಪಲ್ ಸ್ಟಾಲ್ ಕೆಲಸಗಾರರು, ವ್ಯಾಲೆಟ್ ಪಾರ್ಕಿಂಗ್ ವ್ಯಕ್ತಿಗಳು, ಭದ್ರತಾ ಸಿಬ್ಬಂದಿ ಇತ್ಯಾದಿಗಳಿಗೆ ಇರುತ್ತದೆ. 43 ಲಕ್ಷ ರೂಪಾಯಿ ಸ್ಥಳದಲ್ಲಿ ಸ್ಟ್ಯಾಂಡರ್ಡ್ ಫೈರ್ & ಸ್ಪೆಷಲ್ ಪೆರಿಲ್ ಪಾಲಿಸಿ ಇದೆ.
ಇಲ್ಲಿ ಗಣಪತಿಯನ್ನು ಹತ್ತು ದಿನಗಳ ಕಾಲ ಆರಾಧಿಸಲಾಗುತ್ತದೆ ಎಂದು ಟ್ರಸ್ಟಿ ಉಲ್ಲಾಸ್ ಕಾಮತ್ ಹೇಳುತ್ತಾರೆ. ಮುಂಬೈನಲ್ಲಿ ಗಣೇಶೋತ್ಸವ ಅತ್ಯಂತ ವೈಭವದಿಂದ ನಡೆಯುವುದರಿಂದ ಹಲವು ಕಡೆ ಕೋಟ್ಯಾಂತರ ರೂಪಾಯಿಗಳ ವಿಮಾ ಮೊತ್ತ ಮಾಡಿಕೊಳ್ಳುತ್ತಾರೆ. ಏನೇ ತೊಂದರೆ ಎದುರಾದರೂ, ಇನ್ಶೂರೆನ್ಸ್ ಪಡೆಯುತ್ತಾರೆ. 25-50 ಕೋಟಿ ವಿಮೆ ಮಾಡುವುದು ಮಾಮೂಲಿ. ತಿಂಗಳ ಕಾಲ ಗಣಪತಿ ಇಟ್ಟು ಆರಾಧಿಸುವುದರಿಂದ ಮುಂಬೈನಲ್ಲಿ ಗಣೇಶನ ಹಬ್ಬ ಅಂದ್ರೆ ದೊಡ್ಡ ಹಬ್ಬ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications