ಭಿಕ್ಷೆ ಎತ್ತುತ್ತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳಿಗೆ ಒಪ್ಪಿಸಿದ ಫೇಸ್ ಬುಕ್!
ತಂಪನೂರ್, ನವೆಂಬರ್ 14: ಅದು ಕೇರಳದ ತಂಪನೂರ್ ರೈಲ್ವೇ ನಿಲ್ದಾಣ. ಪ್ರತಿದಿನವೂ ಭಿಕ್ಷೆ ಬೇಡುತ್ತ ಕೂತಿರುತ್ತಿದ್ದ ಕೃಶಕಾಯದ ಮಹಿಳೆಯೊಬ್ಬರನ್ನು ಕಂಡು ಅದ್ಯಾಕೋ ಅನುಕಂಪ ಹುಟ್ಟಿ ಬಳಿಗೆ ಹೋದ ವಿದ್ಯಾ ಎಂಬ ಸರ್ಕಾರಿ ನೌಕರಳಿಗೆ ಅಚ್ಚರಿ ಕಾದಿತ್ತು. ಆ ವೃದ್ಧೆಯನ್ನು ಮಾತನಾಡಿಸಿದರೆ ಸುಶಿಕ್ಷಿತೆ ಎಂಬುದು ತಿಳಿಯಿತು.
ಮತ್ತಷ್ಟು ಪ್ರಶ್ನೆ ಕೇಳಿದಾಗ ಆಕೆ ಗಣಿತದ ನಿವೃತ್ತ ಶಿಕ್ಷಕಿ ಎಂಬುದು ತಿಳಿದು ದಿಗ್ಭ್ರಮೆಯಾಯ್ತು. ವಿದ್ಯಾ ಕೊಟ್ಟ ಇಡ್ಲಿಯನ್ನು ಗಬಗಬನೆ ತಿನ್ನುತ್ತಿದ್ದ ಆಕೆಯನ್ನು ಕಂಡು ಕರುಳು ಕಿವುಚಿದಂತಾಯ್ತು. ಆಕೆಯ ಫೋಟೋ ಕ್ಲಿಕ್ಕಿಸಿ, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಆಕೆಯಿಂದ ಪಾಠ ಕಲಿತ ವಿದ್ಯಾರ್ಥಿಗಳ್ಯಾರಿಗಾದರೂ ಆಕೆಯ ಗುರುತುಹತ್ತಿ ಸಹಾಯ ಮಾಡಬಹುದು ಎಂದು ನಿರೀಕ್ಷಿಸುತ್ತ ಕುಳಿತರು.
ನಿರೀಕ್ಷೆ ಸುಳ್ಳಾಗಲಿಲ್ಲ. ಆಕೆಯ ಹಲವು ವಿದ್ಯಾರ್ಥಿಗಳಿಗೆ 'ಇವರು ತಮ್ಮ ವಸ್ಲಾ ಟೀಚರ್' ಎಂಬುದು ತಿಳಿಯಿತು. ತಮ್ಮ ಬದುಕಿಗೊಂದು ಹಾದಿ ತೋರಿದ ಗುರು ಈಗ ಇಂಥ ದಯನೀಯ ಸ್ಥಿತಿಯಲ್ಲಿರುವುದನ್ನು ಕಂಡು ಮರುಗಿದರು. ಅವರಿದ್ದ ಜಾಗಕ್ಕೆ ಬಂದು ತಮ್ಮ ಜೊತೆ ಬರುವಂತೆ ಕೇಳಿಕೊಂಡರು. ಆದರೆ ಶಿಕ್ಷಕಿಗೆ ಯಾರೊಂದಿಗೆ ಬರುವುದಕ್ಕೂ ಇಷ್ಟವಿಲ್ಲ. "ತನ್ನ ಪತಿ-ಮಗ ಅಲ್ಲದೆ ಬೇರೆ ಯಾರೊಂದಿಗೂ ನಾನು ಬರುವುದಿಲ್ಲ" ಎಂಬುದೊಂದೇ ವಸ್ಲಾ ಅವರ ಹಟ.

ಪತಿ ಮತ್ತು ಮಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆಂಬ ಅನುಮಾನದ ಮೇರೆಗೆ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ವಸ್ಲಾ ಅವರ ತಂಗಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪತಿ ಮತ್ತು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ












Click it and Unblock the Notifications