ಥ್ರೆಡ್ ಇಲ್ಲದೇ ಪ್ರಿಂಟ್: 1000 ರೂಪಾಯಿ ನೋಟಿನಲ್ಲಿ ಭಾರೀ ಎಡವಟ್ಟು!
ನವದೆಹಲಿ, ಜ 22: ಕೆಲವು ದಿನಗಳ ಹಿಂದೆ ಸಾವಿರ ರೂಪಾಯಿ ಮುಖಬೆಲೆಯ ಕೋಟ್ಯಾಂತರ ರೂಪಾಯಿ ಮೌಲ್ಯದ ಖೋಟಾ ನೋಟುಗಳು ಭಾರತಕ್ಕೆ ಬಂದಿರುವುದರ ಬಗ್ಗೆ ಸುದ್ದಿಯಾಗಿತ್ತು. ಬ್ಯಾಂಕುಗಳು ಎಚ್ಚರಿಕೆಯನ್ನೂ ನೀಡಿದ್ದವು.
ಈಗ, ನೋಟ್ ಪ್ರಿಂಟಿಗೆ ಪೇಪರ್ ಒದಗಿಸುವ ಸರಕಾರೀ ಸ್ವಾಮ್ಯದ ಸಂಸ್ಥೆಯೇ ಎಡವಟ್ಟು ಮಾಡಿ, ಬ್ಯಾಂಕುಗಳಿಗೆ ಮತ್ತು ಸಾರ್ವಜನಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. (ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ)
ಮಧ್ಯಪ್ರದೇಶದ ಹೊಶಿಂಗಾಬಾದ್ ನಲ್ಲಿರುವ 'ಸೆಕ್ಯೂರಿಟಿ ಪೇಪರ್ ಮಿಲ್' (SPMCIL, Security Printing and Minting Corporation of India Limited) ಮಾಡಿರುವ ಅಚಾತುರ್ಯದಿಂದಾಗಿ, ಸಾವಿರ ರೂಪಾಯಿ ನೋಟು ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಆಲೋಚಿಸುವಂತಾಗಿದೆ.[ಖೋಟಾ ನೋಟು ಪತ್ತೆ ಮಾಡುವುದು ಹೇಗೆ?]

ನೋಟ್ ಪ್ರಿಂಟಿಗಾಗಿ ಸೆಕ್ಯೂರಿಟಿ ಥ್ರೆಡ್ ಇಲ್ಲದ ಅಂದರೆ ನೋಟಿನಲ್ಲಿ ಬರುವ ಸಿಲ್ವರ್ ಥ್ರೆಡ್ ಇಲ್ಲದ ಪೇಪರನ್ನು ನಾಸಿಕ್ ನಲ್ಲಿರುವ ಠಂಕಶಾಲೆಗೆ ಸೆಕ್ಯೂರಿಟಿ ಪೇಪರ್ ಮಿಲ್ ಒದಗಿಸಿತ್ತು.
ಸಿಲ್ವರ್ ಥ್ರೆಡ್ ಇಲ್ಲದ ಕಾಗದದಲ್ಲೇ ನಾಸಿಕ್ ನಲ್ಲಿ ಸಾವಿರ ರೂಪಾಯಿ ನೋಟು ಅಚ್ಚಾಗಿ ಮತ್ತು ಆ ನೋಟುಗಳನ್ನು ಚಲಾವಣೆಗಾಗಿ ಆರ್ಬಿಐಗೆ ಕಳುಹಿಸಿ ಕೊಟ್ಟಿತ್ತು.[ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?]
5ಎಜಿ ಮತ್ತು 3ಎಪಿ ಸಿರೀಸ್ ನಲ್ಲಿರುವ ನೋಟುಗಳು ರಿಸರ್ವ ಬ್ಯಾಂಕ್ ಮೂಲಕ ಇತರ ಬ್ಯಾಂಕುಗಳಿಗೆ ಅಲ್ಲಿಂದ ಗ್ರಾಹಕರ ಜೇಬಿಗೆ ಹೋಗಿದ್ದೂ ಆಗಿತ್ತು. ಇಷ್ಟಾದರೂ ತಪ್ಪನ್ನು ಗುರುತಿಸದ ರಿಸರ್ವ ಬ್ಯಾಂಕಿಗೆ ಗ್ರಾಹಕರೊಬ್ಬರು ನೀಡಿದ ದೂರಿನಿಂದ ಆಗಿರುವ ಲೋಪದೋಷದ ಅರಿವಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ರಿಸರ್ವ ಬ್ಯಾಂಕ್, ಈ ಸಂಬಂಧ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಕಳುಹಿಸಿದೆ. ಸೆಕ್ಯೂರಿಟಿ ಥ್ರೆಡ್ ಇಲ್ಲದ ನೋಟುಗಳನ್ನು ಸ್ವೀಕರಿಸಬಾರದು ಮತ್ತು ಗ್ರಾಹಕರು ಒಂದು ವೇಳೆ ಇಂತಹ ನೋಟುಗಳನ್ನು ಹಿಂದಿರುಗುಸಿದರೆ ವಾಪಸ್ ತೆಗೆದುಕೊಂಡು, ಬದಲಾಯಿಸಿ ಕೊಡಬೇಕೆಂದು ತನ್ನ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications