ಥ್ರೆಡ್ ಇಲ್ಲದೇ ಪ್ರಿಂಟ್: 1000 ರೂಪಾಯಿ ನೋಟಿನಲ್ಲಿ ಭಾರೀ ಎಡವಟ್ಟು!
ನವದೆಹಲಿ, ಜ 22: ಕೆಲವು ದಿನಗಳ ಹಿಂದೆ ಸಾವಿರ ರೂಪಾಯಿ ಮುಖಬೆಲೆಯ ಕೋಟ್ಯಾಂತರ ರೂಪಾಯಿ ಮೌಲ್ಯದ ಖೋಟಾ ನೋಟುಗಳು ಭಾರತಕ್ಕೆ ಬಂದಿರುವುದರ ಬಗ್ಗೆ ಸುದ್ದಿಯಾಗಿತ್ತು. ಬ್ಯಾಂಕುಗಳು ಎಚ್ಚರಿಕೆಯನ್ನೂ ನೀಡಿದ್ದವು.
ಈಗ, ನೋಟ್ ಪ್ರಿಂಟಿಗೆ ಪೇಪರ್ ಒದಗಿಸುವ ಸರಕಾರೀ ಸ್ವಾಮ್ಯದ ಸಂಸ್ಥೆಯೇ ಎಡವಟ್ಟು ಮಾಡಿ, ಬ್ಯಾಂಕುಗಳಿಗೆ ಮತ್ತು ಸಾರ್ವಜನಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. (ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ)
ಮಧ್ಯಪ್ರದೇಶದ ಹೊಶಿಂಗಾಬಾದ್ ನಲ್ಲಿರುವ 'ಸೆಕ್ಯೂರಿಟಿ ಪೇಪರ್ ಮಿಲ್' (SPMCIL, Security Printing and Minting Corporation of India Limited) ಮಾಡಿರುವ ಅಚಾತುರ್ಯದಿಂದಾಗಿ, ಸಾವಿರ ರೂಪಾಯಿ ನೋಟು ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಆಲೋಚಿಸುವಂತಾಗಿದೆ.[ಖೋಟಾ ನೋಟು ಪತ್ತೆ ಮಾಡುವುದು ಹೇಗೆ?]

ನೋಟ್ ಪ್ರಿಂಟಿಗಾಗಿ ಸೆಕ್ಯೂರಿಟಿ ಥ್ರೆಡ್ ಇಲ್ಲದ ಅಂದರೆ ನೋಟಿನಲ್ಲಿ ಬರುವ ಸಿಲ್ವರ್ ಥ್ರೆಡ್ ಇಲ್ಲದ ಪೇಪರನ್ನು ನಾಸಿಕ್ ನಲ್ಲಿರುವ ಠಂಕಶಾಲೆಗೆ ಸೆಕ್ಯೂರಿಟಿ ಪೇಪರ್ ಮಿಲ್ ಒದಗಿಸಿತ್ತು.
ಸಿಲ್ವರ್ ಥ್ರೆಡ್ ಇಲ್ಲದ ಕಾಗದದಲ್ಲೇ ನಾಸಿಕ್ ನಲ್ಲಿ ಸಾವಿರ ರೂಪಾಯಿ ನೋಟು ಅಚ್ಚಾಗಿ ಮತ್ತು ಆ ನೋಟುಗಳನ್ನು ಚಲಾವಣೆಗಾಗಿ ಆರ್ಬಿಐಗೆ ಕಳುಹಿಸಿ ಕೊಟ್ಟಿತ್ತು.[ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?]
5ಎಜಿ ಮತ್ತು 3ಎಪಿ ಸಿರೀಸ್ ನಲ್ಲಿರುವ ನೋಟುಗಳು ರಿಸರ್ವ ಬ್ಯಾಂಕ್ ಮೂಲಕ ಇತರ ಬ್ಯಾಂಕುಗಳಿಗೆ ಅಲ್ಲಿಂದ ಗ್ರಾಹಕರ ಜೇಬಿಗೆ ಹೋಗಿದ್ದೂ ಆಗಿತ್ತು. ಇಷ್ಟಾದರೂ ತಪ್ಪನ್ನು ಗುರುತಿಸದ ರಿಸರ್ವ ಬ್ಯಾಂಕಿಗೆ ಗ್ರಾಹಕರೊಬ್ಬರು ನೀಡಿದ ದೂರಿನಿಂದ ಆಗಿರುವ ಲೋಪದೋಷದ ಅರಿವಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ರಿಸರ್ವ ಬ್ಯಾಂಕ್, ಈ ಸಂಬಂಧ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಕಳುಹಿಸಿದೆ. ಸೆಕ್ಯೂರಿಟಿ ಥ್ರೆಡ್ ಇಲ್ಲದ ನೋಟುಗಳನ್ನು ಸ್ವೀಕರಿಸಬಾರದು ಮತ್ತು ಗ್ರಾಹಕರು ಒಂದು ವೇಳೆ ಇಂತಹ ನೋಟುಗಳನ್ನು ಹಿಂದಿರುಗುಸಿದರೆ ವಾಪಸ್ ತೆಗೆದುಕೊಂಡು, ಬದಲಾಯಿಸಿ ಕೊಡಬೇಕೆಂದು ತನ್ನ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications