ವೈರಲ್ ಆಗಿರುವ ಸುಂದರ ಯುವತಿಯ ಫೋಟೊದ ಹಿಂದಿನ ಅಸಲಿ ಕತೆ ಏನು?
ಬೆಂಗಳೂರು, ಅಕ್ಟೋಬರ್ 06: ಸುಂದರ ಯುವತಿಯೊಬ್ಬಳು ವಯಸ್ಸಾದ ವ್ಯಕ್ತಿಯೊಬ್ಬನನ್ನು ತಳ್ಳುವ ಬಂಡಿಯ ಮೇಲೆ ಕೂರಿಸಿಕೊಂಡು ಎಳೆದುಕೊಂಡು ಹೋಗುತ್ತಿರುವ ಚಿತ್ರವೊಂದು ಫೇಸ್ಬುಕ್ನಲ್ಲಿ ಭಾರಿ ವೈರಲ್ ಆಗಿದೆ.
'ಐಎಎಸ್ ಟಾಪರ್ ಹುಡುಗಿ ಬಂಡಿ ಎಳೆಯುವ ತನ್ನ ತಂದೆಯನ್ನು ಅದೇ ಬಂಡಿಯಲ್ಲಿ ಕೂರಿಸಿಕೊಂಡು ಎಳೆದುಕೊಂಡು ಹೋಗಿ ಜಗತ್ತಿಗೆ ಪರಿಚಯಿಸಿದ್ದಾಳೆ' ಎಂಬ ಕತೆಯೊಂದಿಗೆ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಚಿತ್ರವನ್ನು ಕಾಂಗ್ರೆಸ್ ನ ಮಾಜಿ ಸಚಿವ ಶಶಿ ತರೂರ್, ತಮಿಳುನಾಡು ಕಾಂಗ್ರೆಸ್ ಮುಖಂಡ ಅಸ್ಲಂ ಬಾಷಾ, ನಟಿ ಖುಷ್ಬು, ಕಾಂಗ್ರೆಸ್ನ ಕಮ್ಯುನಿಕೇಷನ್ ವಿಭಾಗ, ಇನ್ನೂ ಹಲವು ಪ್ರಮುಖ ರಾಜಕೀಯ ಮುಖಂಡರು, ನಟ-ನಟಿಯರು ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಆದರೆ ಈ ಚಿತ್ರದ ಹಿಂದಿನ ಅಸಲಿ ಕತೆ ಬೇರೆಯೇ ಇದೆ. ಸುಂದರವಾದ ಈ ಚಿತ್ರವನ್ನು ಕೋಟ್ಯಂತರ ಮಂದಿ ಶೇರ್ ಮಾಡಿದ್ದಾರೆ. ಆದರೆ ಅದರ ಹಿಂದೆ ಸುಳ್ಳು ಕತೆಯೊಂದನ್ನು ಹರಿಬಿಟ್ಟಿದ್ದಾರೆ.

ಅಸಲಿ ಕತೆ ಬೇರೆಯೇ ಇದೆ
ಆದರೆ ಈ ಸುಂದರ ಚಿತ್ರದ ಹಿಂದಿರುವ ಅಸಲಿ ಕತೆ ಬೇರೆಯೇ ಇದೆ. ಚಿತ್ರದಲ್ಲಿ ಬಂಡಿ ಎಳೆಯುತ್ತಿರುವ ಯುವತಿ ಐಎಎಸ್ ಟಾಪರ್ ಅಲ್ಲ, ಬಂಡಿಯ ಮೇಲೆ ಕುಳಿತ ವ್ಯಕ್ತಿ ಆಕೆಯ ತಂದೆಯೂ ಅಲ್ಲ. ಯಾವುದೋ ಬ್ರಾಂಡ್ಗಾಗಿ ಶೂಟಿಂಗ್ ನಡೆಯುತ್ತಿದ್ದ ವೇಳೆ ತೆಗೆದಿರುವ ಚಿತ್ರ ಅದು.

ಚಿತ್ರದಲ್ಲಿರುವ ಯುವತಿಯ ಹೆಸರು ಶ್ರಮೋನಾ
ಚಿತ್ರದಲ್ಲಿರುವ ಯುವತಿಯ ಹೆಸರು ಶ್ರಮೋನಾ ಪೊಡ್ಡಾರ್. ಆಕೆಯ ತಂದೆ ವೈದ್ಯರಾಗಿದ್ದು, ಆಕೆ ಯಾವ ಐಎಎಸ್ ಟಾಪರ್ ಸಹ ಅಲ್ಲ. ಆಕೆ ಖಾಸಗಿ ಬ್ರಾಂಡ್ ಪ್ರಚಾರಕ್ಕಾಗಿ ಕೊಲ್ಕತ್ತಕ್ಕೆ ತೆರಳಿದ್ದಾಗ ಅಲ್ಲಿನ ಶೋಭಾ ಮಾರ್ಕೆಟ್ ಬಳಿ ತನ್ನ ಗೆಳೆಯ ಕ್ಲಿಕ್ಕಿಸಿದ್ದ ಫೋಟೊ ಇದು ಎಂದು ಶ್ರಮೋನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕುತೂಹಲಕ್ಕಾಗಿ ರಿಕ್ಷಾ ಎಳೆದೆ
'ನನಗೆ ಮುಂಚಿನಿಂದಲೂ ರಿಕ್ಷಾ ಬಂಡಿ ಎಳೆಯುವವರ ಬಗ್ಗೆ ಕುತೂಹಲ ಇತ್ತು, ಹಾಗಾಗಿ ನಾನು ಅವರನ್ನು ಹಿಂದೆ ಕೂರಿಸಿಕೊಂಡು ಬಂಡಿ ಎಳೆದೆ. ಆಗ ನನ್ನ ಗೆಳೆಯ ಆ ಚಿತ್ರವನ್ನು ತೆಗೆದಿದ್ದ ಅದನ್ನು ನಾನೇ ನನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದೆ' ಎಂದು ಶ್ರುಮೋನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತನ್ನ ಪೋಷಕರ ಹೆಸರನ್ನೂ ಈ ಸುದ್ದಿಯಲ್ಲಿ ತಂದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿರುವ ಅವರು, ನನ್ನ ತಂದೆ ವೈದ್ಯರಾಗಿದ್ದು ಅವರನ್ನು ಸಹ ಈ ಸುಳ್ಳು ಸುದ್ದಿಯಲ್ಲಿ ಎಳೆದು ತರಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಮುಂಚೆಯೂ ಹಲವು ಬಾರಿ ಈ ರೀತಿ ಆಗಿತ್ತು
ಕೆಲವು ದಿನಗಳ ಮುಂಚೆ ವೃದ್ಧಾಶ್ರಮದಲ್ಲಿ ಅಜ್ಜಿ ಹಾಗೂ ಮೊಮ್ಮಗಳು ಭೇಟಿಯಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಲಾ ಪ್ರವಾಸದ ವೇಳೆ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದ ಬಾಲಕಿಗೆ ತನ್ನ ಅಜ್ಜಿ ಸಿಕ್ಕಾಗ ತೆಗೆದ ಚಿತ್ರ ಇದು ಎಂದು ಅದನ್ನು ವೈರಲ್ ಮಾಡಲಾಗಿತ್ತು. ಆದರೆ ಇದು ಸಹ ಸತ್ಯವಾಗಿರಲಿಲ್ಲ. ಅಜ್ಜಿ ಆ ವೃದ್ಧಾಶ್ರಮದಲ್ಲಿರುವುದು ಬಾಲಕಿಗೆ ಮೊದಲೇ ಗೊತ್ತಿತ್ತು.
-
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications