Get Updates
Get notified of breaking news, exclusive insights, and must-see stories!

Tirumala: ತಿರುಮಲಕ್ಕೆ ರಾಮಲಿಂಗಾ ರೆಡ್ಡಿ ಭೇಟಿ: ಕರ್ನಾಟಕದ ಭಕ್ತರಿಗೆ 2026ರಲ್ಲಿ ಸಿಗುವ ಸೌಲಭ್ಯಗಳಿವು

ತಿರುಮಲ: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳುವವ ಭಕ್ತರಿಗೆ ಶೀಘ್ರವೇ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ. ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿದರು. ಅಲ್ಲಿ ರಾಜ್ಯದ ಭಕ್ತರಿಗಾಗಿ ನಿರ್ಮಿಸಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.

ಈ ಹಿಂದೆ ತಿರುಮಲದಲ್ಲಿನ ರಾಜ್ಯದ ಭಕ್ತರಿಗಾಗಿ ಇರುವ ಕಲ್ಯಾಣ ಮಂಟಪ ಉದ್ಘಾಟಿಸಿದ್ದರು.132 ಕೊಠಡಿಗಳ ಬ್ಲಾಕ್ ಅನ್ನು ಉದ್ಘಾಟಿಸುವ ಮೂಲಕ ಸಚಿವರು ಗುಡ್ ನ್ಯೂಸ್ ನೀಡಿದ್ದರು. ಇದೀಗ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಕಾಮಗಾರಿಗಳ ಖುದ್ದು ವೀಕ್ಷಿಸಿದರು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಸಚಿವರು ಮಾಹಿತಿ ನೀಡಿದರು. ಬಾಕಿ ಉಳಿದ ನಿರ್ಮಾಣ ಕೆಲಸಗಳು 2026ರ ಮಾರ್ಚ್ ಹೊತ್ತಿಗೆ ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು.

Ramalinga Reddy Reviews Tirumala Facilities for Karnataka Devotees Opening Expects on 2026

ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ವಿಧಾನಪರಿಷತ್ ಸದಸ್ಯ ಶರವಣ ಅವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದರು. ತಿರುಪತಿ ತಿರುಮಲದಲ್ಲಿ ಒಂದಷ್ಟು ಕಾಮಗಾರಿಗಳಲ್ಲಿ ನ್ಯೂನತೆಗಳು ಕಂಡು ಬಂದಿದ್ದು ಪ್ರಸ್ತಾಪವಾಗಿತ್ತು. ಇದರ ಬೆನ್ನಲ್ಲೆ ಸಚಿವರ ತಿರುಪತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಟಿಟಿಡಿ ಅಧಿಕಾರಿಗಳಿಗೆ ಒಂದಷ್ಟು ಮಹತ್ವ ಸಲಹೆ, ಸೂಚನೆ ನೀಡಿದ್ದಾರೆ. 2026ಕ್ಕೆ ಇಲ್ಲಿನ ಎಲ್ಲ ಸೌಲಭ್ಯಗಳು ಶೀಘ್ರವೇ ಕನ್ನಡ ಭಕ್ತರಿಗೆ ಸಿಗುವ ಭರವಸೆ ನೀಡಿದರು.

ಯಾತ್ರಾರ್ಥಿಗಳಿಗಾಗಿ ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳ ಕಾಮಗಾರಿ ನಡೆಯುತ್ತಿದೆ. ಪ್ರವಾಸಿಸೌಧವನ್ನು ಉನ್ನತೀಕರಿಸಲಾಗುತ್ತಿವೆ. ಇವುಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಸಬೇಕೆಂದು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಚರ್ಚೆಯಾದ ಇನ್ನಿತರ ವಿಷಯಗಳ ವಿವರ ಇಲ್ಲಿದೆ.

ಟಿಟಿಡಿ ಅಧಿಕಾರಿಗಳ ಜತೆ ಸಚಿವರ ಸಭೆ: ಮುಖ್ಯಾಂಶಗಳು

1. ತಿರುಮಲದಲ್ಲಿನ ಭೂಮಿಯ ಲೀಸ್ ಪ್ರಸ್ತಾಪಿಸಿದ ಸಚಿವರು, ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವಂತೆ ಕೋರಿದರು.

2. ಇಲ್ಲಿ ನಮ್ಮ ಪರವಾಗಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡಬೇಕಿದೆ.

3. ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ನಮಗೆ ಹಸ್ತಾಂತರಿಸುವುದು.

4. ಪ್ರೀಫ್ಯಾಬ್ರಿಕೇಟೆಡ್ ನಾಗರಿಕ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆ ತಡೆಯುವುದು.

5. ಎಲ್ಲಾ ಸ್ನಾನಗೃಹಗಳಲ್ಲಿ ಇರುವ ಪಿಒಪಿ ಮೇಲ್ಚಾವಣಿ ತೆಗೆದು ಪಿವಿಸಿ ಮೇಲ್ಚಾವಣಿ ವ್ಯವಸ್ಥೆಗೆ ಬದಲಿಸುವುದು.

6. ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು.

7. ಎಚ್‌ಟಿ ಲೈನ್ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು.

8. ಹೊರಾಂಗಣ ಪೋರ್ಟಿಕೋದಲ್ಲಿರುವ ಪಿಎಪಿ ಮೇಲ್ಚಾವಣಿಯನ್ನೂ ಸಹ ಪಿವಿಸಿ ಮೇಲ್ಚಾವಣಿಗೆ ಬದಲಿಸುವುದು.

9. ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸುವು ಬಗ್ಗೆ ಚರ್ಚಿಸಿದರು. ಇದೆಲ್ಲದಕ್ಕೂ ಟಿಟಿಯಿಂದ ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಮುಂದಿನ ವರ್ಷ ನಾಡಿನ ಭಕ್ತರು ತಿರುಮಲದಲ್ಲಿ ಅಗತ್ಯ ಮೂಲಸೌಕರ್ಯಗಳು ಲಭ್ಯವಾಗಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+