ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಕುತೂಹಲಕಾರಿ ಅಂಶ
ನವದೆಹಲಿ, ಫೆ.26: ಭಾರತ ದೇಶದ ಸಂಚಾರ ಸಂಪರ್ಕ ನಾಡಿಯಾಗಿ ದಿನ ನಿತ್ಯದ ಮಿತ್ರನಾಗಿರುವ ರೈಲುಗಳಲ್ಲಿ ದಿನವೊಂದಕ್ಕೆ 23 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಾರೆ. ರೈಲ್ವೆ ಇಲಾಖೆ ನಷ್ಟದಲ್ಲಿ ಚಲಿಸುತ್ತಿದ್ದರೂ ಪ್ರತಿ ವರ್ಷ ಬಜೆಟ್ ಬಂದಾಗ ನಿರೀಕ್ಷೆಗಳು ಗರಿಗೆದರುತ್ತವೆ.
ಸಚಿವ ಸುರೇಶ್ ಪ್ರಭು ಅವರು ಪ್ರಥಮ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಎನ್ ಡಿಎ ಸರ್ಕಾರದ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆ ಅಂಕಿ ಸಂಖ್ಯೆಯಲ್ಲಿ ಕುತೂಹಲಕಾರಿ ಅಂಶಗಳನ್ನು ಇಲ್ಲಿ ನೀಡಲಾಗಿದೆ. [ರೈಲ್ವೆ ಬಜೆಟ್ 2015: ಸುರೇಶ್ ಪ್ರಭು ಪ್ರಥಮ ಚುಂಬನ ಅಪ್ದೇಟ್ಸ್]
* ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.3 ಕೋಟಿ. ಸುಮಾರು 12,617 ರೈಲುಗಳು ದೇಶದೆಲ್ಲೆಡೆ ಇರುವ 7,172 ಸ್ಟೇಷನ್ಸ್ ಗಳನ್ನು ಸಂಪರ್ಕಿಸಲಿದೆ.
* ಭಾರತೀಯ ರೈಲ್ವೆ ಇಲಾಖೆ ಆದಾಯ ವಾರ್ಷಿಕವಾಗಿ 1.4 ಲಕ್ಷ ಕೋಟಿ ರು(ಸುಮಾರು 23 ಬಿಲಿಯನ್ ಯುಎಸ್ ಡಿ)
* ಸುಮಾರು 359 ರೈಲ್ವೆ ಯೋಜನೆಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಲು 1.82 ಲಕ್ಷ ಕೋಟಿ ರೂ.ನಷ್ಟು ಅಗಾಧ ಹಣ ಬೇಕಾಗಿದೆ.
* ಕಳೆದ ಮೂರು ದಶಕಗಳಲ್ಲಿ 676ಕ್ಕೂ ಅಧಿಕ ಯೋಜನೆ ಘೋಷಣೆಯಾಗಿದ್ದು ಅದರಲ್ಲಿ 317 ಪೂರ್ಣಗೊಳಿಸಲಾಗಿದೆ. [ರೈಲ್ವೆ ಬಜೆಟ್ 2015: ಕರ್ನಾಟಕದ ನಿರೀಕ್ಷೆಗಳೇನು?]
* ಪ್ರತಿ ವರ್ಷ ಬಜೆಟ್ ನಲ್ಲಿ ಸರಾಸರಿ 160 ಹೊಸ ರೈಲುಗಳನ್ನು ಘೋಷಿಸಲಾಗುತ್ತಿತ್ತು. 2015ನೇ ಸಾಲಿನ ಬಜೆಟ್ ನಲ್ಲಿ ಈ ಸಂಖ್ಯೆ ಬೆರಳೆಣಿಕೆಯಷ್ಟಿದೆ.
* ಸಬ್ಸಿಡಿ ಪ್ರಯಾಣಿಕರ ದರ ಜಾರಿಯಲ್ಲಿರುವುದರಿಂದ ಪ್ರತಿ ವರ್ಷ 26,000 ರು ನಷ್ಟ ಅನುಭವಿಸಬೇಕಾಗಿದೆ.

* 1950-51ರಲ್ಲಿ ಸರಕು ಸಾಗಣೆ ಶೇ 89ರಷ್ಟು ಬಳಕೆಯಾಗುತ್ತಿತ್ತು ಈಗ ಶೇ 39ಕ್ಕೆ ಇಳಿದಿದೆ. ಅದರೆ, ಶೇ 67ರಷ್ಟು ಆದಾಯ ಇದರಿಂದಲೇ ಬರುತ್ತಿದೆ.
* ಪ್ರತಿ ದಿನ 2.65 ಮಿಲಿಯನ್ ಟನ್ ನಷ್ಟು ಸರಕು ಸಾಗಣೆ ರೈಲಿನಲ್ಲಿ ಕಂಡು ಬರುತ್ತದೆ.
* ರೈಲ್ವೆ ನಿರ್ವಹಣೆ ಅನುಪಾತ ಶೇ 94ರಷ್ಟಿದೆ. ಅಂದರೆ, ಪ್ರತಿ 100 ಪೈಸೆ(1ರು) ಗೆ 6 ಪೈಸೆ ಉಳಿತಾಯ ಹೊಂದಲಾಗುತ್ತಿದೆ.
* ರೈಲ್ವೆ ಇಲಾಖೆಯ ಉದ್ಯೋಗಿಗಳ ಸಂಖ್ಯೆ 13.1 ಲಕ್ಷ ಮೀರುತ್ತದೆ.
* ಸ್ವಾತಂತ್ರ್ಯದ ನಂತರ ಸರಾಸರಿ ಕ್ರಮಿಸುವ ದೂರ ಪ್ರತಿ ವರ್ಷ 200 ಕಿ.ಮೀ ನಷ್ಟು ಹೆಚ್ಚಳವಾಗಿದೆ.
ಒನ್ ಇಂಡಿಯಾ ಸುದ್ದಿ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications