ಕಾಂಗ್ರೆಸ್‌ನಿಂದ 'ಭಾರತ್ ಜೋಡೋ' ಯಾತ್ರೆ: ಶ್ರೀಪೆರಂಬದೂರಿನ ಮಹತ್ವವೇನು?

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಕನ್ಯಾಕುಮಾರಿಯಿಂದ 3,570 ಕಿಲೋಮೀಟರ್ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಅವರು ಶ್ರೀಪೆರಂಬದೂರಿನಲ್ಲಿ ತಮ್ಮ ತಂದೆ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಅಭಿಯಾನವು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ನಡೆಸಲಿದ್ದಾರೆ. ಶಾಂತಿ ಮತ್ತು ಕೋಮು ಸೌಹಾರ್ದತೆಯ ಸಂದೇಶದೊಂದಿಗೆ ಕಾಂಗ್ರೆಸ್ ಪಡೆ ಪ್ರತಿದಿನ 25 ಕಿಲೋಮೀಟರ್ ಸಂಚರಿಸಲಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಪುನಶ್ಚೇತನಗೊಳಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ಕಾಂಗ್ರೆಸ್ ಪಡೆ ಮೂರು ರೀತಿಯ ಕಾರ್ಯಕರ್ತರನ್ನು ಒಳಗೊಂಡಿರುತ್ತದೆ. ಯಾತ್ರೆಯ ಪ್ರಾರಂಭದಿಂದ ಅದರ ಮುಕ್ತಾಯದವರೆಗೆ ರಾಹುಲ್ ಗಾಂಧಿಯವರ ಜೊತೆಯಲ್ಲಿ 100 ಜನರು ಇರುತ್ತಾರೆ. ಮೆರವಣಿಗೆಯು ದಾಟುವ ರಾಜ್ಯಗಳಲ್ಲಿ ಜನರು ಸೇರುವರು ಮತ್ತು ಆ ರಾಜ್ಯಗಳ ಹೊರಗಿನವರು ಯಾತ್ರೆಯಲ್ಲಿ ಸೇರಿಕೊಳ್ಳುತ್ತಾರೆ.

ರಾಹುಲ್ ಗಾಂಧಿಯವರ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ದಾಟಲಿದೆ. ರಾಹುಲ್ ಗಾಂಧಿಯವರ ಸಹಪ್ರಯಾಣಿಕರಲ್ಲಿ ಶೇಕಡಾ 30 ರಷ್ಟು ಮಹಿಳೆಯರೇ ಇರುತ್ತಾರೆ. ಇದು ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಲಗಾಂವ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು ಮತ್ತು ಶ್ರೀನಗರದಂತಹ ನಗರಗಳನ್ನು ದಾಟಲಿದೆ.

Rahul Gandhis Congress Bharat Jodo Yatra: What is the significance of Sriperambadur?

ರಾಹುಲ್ ಗಾಂಧಿ ವೇಳಾಪಟ್ಟಿ

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢದ ಭೂಪೇಶ್ ಬಘೇಲ್ ಉಪಸ್ಥಿತರಿರುವ ಕನ್ಯಾಕುಮಾರಿಯಲ್ಲಿ ಸಂಜೆ 4:30 ಕ್ಕೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.

ಸ್ಟಾಲಿನ್ ಉಪಸ್ಥಿತರಿರುವ ಮಹಾತ್ಮ ಗಾಂಧಿ ಮಂಟಪದಲ್ಲಿ ಕಾರ್ಯಕ್ರಮದ ನಂತರ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಯಾತ್ರೆಗೆ ಔಪಚಾರಿಕವಾಗಿ ಚಾಲನೆ ನೀಡುವ ರ್‍ಯಾಲಿ ಮೂಲಕ ಕಡಲತೀರದ ಸ್ಥಳಕ್ಕೆ ತೆರಳಲಿದ್ದಾರೆ.

Rahul Gandhis Congress Bharat Jodo Yatra: What is the significance of Sriperambadur?

ಶ್ರೀಪೆರಂಬದೂರಿನ ಮಹತ್ವ?

ರಾಹುಲ್ ಗಾಂಧಿ ಅವರ ತಂದೆ, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರು ಮೇ 21, 1991 ರಂದು ತಮಿಳುನಾಡಿನಲ್ಲಿ ಸಾರ್ವತ್ರಿಕ ಚುನಾವಣೆಗಾಗಿ ಪ್ರಚಾರ ಮಾಡುವಾಗ ಹತ್ಯೆಗೀಡಾದರು. ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಕಾರ್ಯಕರ್ತ ತೆನ್ಮೋಳಿ ರಾಜರತ್ನಂ ನಡೆಸಿದ ಆತ್ಮಹುತಿ ದಾಳಿಯಲ್ಲಿ ರಾಜೀವ್ ಗಾಂಧಿ ಅವರ ಸುತ್ತಲಿನ 14 ಜನರು ಸಾವನ್ನಪ್ಪಿದ್ದರು.

ಜಿ.ಕೆ.ಮೂಪನಾರ್ ಅವರೊಂದಿಗೆ ರಾಜೀವ್ ಗಾಂಧಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರಚಾರ ನಡೆಸಿ ತಮಿಳುನಾಡಿನ ಶ್ರೀಪೆರಂಬದೂರು ತಲುಪಿದ್ದರು. ಮತದಾರರೊಂದಿಗೆ ಸಂವಾದ ನಡೆಸಲು ಅವರು ಮುಂದಾದಾಗ ಬಿಳಿಯ ಅಂಬಾಸಿಡರ್ ಕಾರುಗಳ ಬೆಂಗಾವಲು ಹಲವೆಡೆ ನಿಂತಿತ್ತು. ಅವರು ರ್‍ಯಾಲಿ ಸ್ಥಳವನ್ನು ತಲುಪಿದರು ಮತ್ತು ಅವರು ಭಾಷಣ ಮಾಡಲು ವೇದಿಕೆಯ ಕಡೆಗೆ ನಡೆಯಲು ಪ್ರಾರಂಭಿಸಿದರು. ಈ ವೇಳೆ ಹಂತಕ ರಾಜರತ್ನಂ ಅವರ ಪಾದಗಳನ್ನು ಮುಟ್ಟಲು ನಮಸ್ಕರಿಸಿ ನಂತರ ಆರ್‌ಡಿಎಕ್ಸ್ ಬೆಲ್ಟ್ ಅನ್ನು ಸ್ಫೋಟಿಸಿದ್ದನು. ಈ ವೇಳೆ ರಾಜೀವ್ ಗಾಂಧಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. 43 ಮಂದಿಗೆ ಗಂಭೀರ ಗಾಯಗಳಾಗಿದ್ದವು. ಆತ್ಮಹತ್ಯಾ ದಾಳಿಯಲ್ಲಿ ಸ್ಥಳೀಯ ಕ್ಯಾಮರಾಪರ್ಸನ್ ಸಾವನ್ನಪ್ಪಿದರು. ಅವರ ಕ್ಯಾಮರಾ ಹತ್ಯೆಯನ್ನು ಸೆರೆಹಿಡಿಯಿತು.

Rahul Gandhis Congress Bharat Jodo Yatra: What is the significance of Sriperambadur?

ಇಂದು ಬೆಳಗ್ಗೆ ಜೂನಿಯರ್ ಗಾಂಧಿ ಭೇಟಿ ನೀಡಿದ ಶ್ರೀಪೆರಂಬದೂರಿನಲ್ಲಿ ಹತ್ಯೆ ನಡೆದ ಸ್ಥಳದಲ್ಲಿ ರಾಜೀವ್ ಗಾಂಧಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಕಾರಣಕ್ಕಾಗಿಯೇ ಗಾಂಧಿ ತಮ್ಮ ಯಾತ್ರೆಯನ್ನು ಈ ನಗರದಿಂದ ಆರಂಭಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+